Categories: ಮಂಗಳೂರು

ಧರ್ಮಸ್ಥಳ: ಸುಮಧುರ ಸಂಗೀತ ‘ಸುಪ್ರೀತಾ’

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಅಂಗವಾಗಿ ವಸ್ತು ಪ್ರದರ್ಶನ ಮಂಟಪದಲ್ಲಿ ಸಂಜೆ ಆಯೋಜನೆಗೊಂಡ ಕುಮಾರಿ ಸುಪ್ರೀತಾ ಅವರ ಸಂಗೀತ ಕಾರ್ಯಕ್ರಮ ನೆರೆದ ಪ್ರೇಕ್ಷಕರ ಮನಸೂರೆಗೊಳಿಸಿತು.

ಲಕ್ಷದೀಪೋತ್ಸವದ ಮೊದಲ ದಿನದ ಪ್ರಪ್ರಥಮ ಸಾಂಸ್ಕೃತಿಕ ಕಾರ್ಯಕ್ರಮವಾಗಿತ್ತು. ಇದರ ಮೂಲಕವೈವಿಧ್ಯಮಯ ಲಕ್ಷದೀಪೋತ್ಸವ ಚಾಲನೆ ಕಂಡಿತು. ಅಟಾನಾ ರಾಗದ ಶ್ರೀ ಮಹಾಗಣಪತಿಮ್ ಭಜೆ ಹಾಡಿನ ಮೂಲಕ ವಿಘ್ನವಿನಾಶಕನನ್ನು ಸ್ಮರಿಸಿದರು.

ಕಮಲ ಮನೋಹರಿ ರಾಗದ ‘ಕಂಜದಳಾಯತಾಕ್ಷಿ ಕಾಮಾಕ್ಷಿ’, ಹಂಸನಾದ ರಾಗದ ‘ಬಂಟುರೀತಿ ಕೋಲು’, ಹಿಂಧೋಳ ರಾಗದ ‘ಸಾಮಜವರಗಮನ ಹಾಡು’, ಭೈರವಿ ರಾಗದ ‘ಓಡಿ ಬಾ ರಂಗಯ್ಯ’ ಹಾಗೂ ಬೃಂದಾವನಿ ಸಾರಂಗ ರಾಗದ ‘ತಿಲ್ಲಾನ ತನದಿಂ’ ಹಾಡು ಗಮನ ಸೆಳೆದವು.

‘ಎಲ್ಯಾಡಿ ಬಂದೆ ಮುದ್ದು ರಂಗಯ್ಯ’ ಎಂದು ಜಗದೋದ್ಧಾರ ಶ್ರೀಕೃಷ್ಣನ ತಾಯಿ ಪ್ರೀತಿಯಿಂದ ಕೇಳುವ ಪರಿಯನ್ನು ಚಾರುಕೇಶಿ ರಾಗದೊಂದಿಗೆ ಬಹಳ ಸೊಗಸಾಗಿ ಹಾಡಿದರು. ನಿರಂತರ ಒಂದು ಗಂಟೆಯವರೆಗೆ ಸಂಗೀತ ಪ್ರಸ್ತುತಿಯ ಮೂಲಕ ಪ್ರೇಕ್ಷಕರ ಮನಗೆದ್ದರು.

ಈ ಸಂಗೀತ ರಸದೌತಣ ಕಾರ್ಯಕ್ರಮದಲ್ಲಿ ಸುಪ್ರೀತಾಳ ಗುರು ವಿದುಷಿ ಅನಸೂಯ ಉಜಿರೆ ತಂಬೂರಿಯಲ್ಲಿ ಸಹಕರಿಸಿದರು.  ಧನಶ್ರೀ ಶಬರಾಯ ವಯೋಲಿನ್ ನುಡಿಸುವುದರ ಮೂಲಕ ಸಂಗೀತ ಸಂಜೆಯಲ್ಲಿ ಪಾಲ್ಗೊಂಡರು. ಮೃದಂಗ ವಾದಕರಾಗಿ ಪವನ್ ಪುತ್ತೂರು ಸಾಥ್ ನೀಡುವುದರೊಂದಿಗೆ, ಆರನೇ ತರಗತಿಯ  ವರ್ಚಸ್ ಖಂಜೀರವನ್ನು ನುಡಿಸಿದರು,

ಸುಪ್ರೀತಾಳ ಸುಮಧುರ ಕಂಠದ ಗಾಯನಕ್ಕೆ ಮನಸೋತ ಕೆಲ ಕಲಾವಿದರು ಆಕೆಯ ಹಾಡಿನೊಂದಿಗೆತಾವೂ ತಲ್ಲೀನರಾಗಿ ದನಿಗೂಡಿಸುತ್ತಿದ್ದರು. ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದಿಂದ ಕೊಡಲ್ಪಡುವ ಶಿಷ್ಯ ವೇತನಕ್ಕೆ ಭಾಜನರಾಗಿರುವ ಸುಪ್ರೀತಾ ಧರ್ಮಸ್ಥಳ ಎಸ್.ಡಿ.ಎಂ ಪದವಿ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿ.

ಬೇರೆ ಬೇರೆ ವೃತ್ತಿರಂಗದಲ್ಲಿ ನಿರತರಾಗಿರುವ ಕಲಾವಿದರ ತಂಡವೊಂದು ಸಂಗೀತದ ಅಭಿರುಚಿಯೊಂದಿಗೆ ವೇದಿಕೆಯಲ್ಲಿ ಒಂದಾಗಿರುವುದು ವಿಶೇಷವಾಗಿತ್ತು. ಎಸ್.ಡಿ.ಎಂ ಸಂಸ್ಥೆಯ ಹಿಂದಿ ಶಿಕ್ಷಕ ಸುನಿಲ್ ಪಂಡಿತ್ ಕಾರ್ಯಕ್ರಮವನ್ನು ನಿರೂಪಿಸಿದರು.

ವರದಿ: ರಕ್ಷಾ ಕೋಟ್ಯಾನ್, ಎಸ್.ಡಿ.ಎಂ ಕಾಲೇಜು, ಉಜಿರೆ
ಚಿತ್ರ ಕೃಪೆ: ಭಾರತಿ ಹೆಗಡೆ

Gayathri SG

Recent Posts

ವಿಧಾನಪರಿಷತ್ ಚುನಾವಣೆ : ನಾಮಪತ್ರ ಅಂಗೀಕಾರ,ತಿರಸ್ಕೃತ ಅಭ್ಯರ್ಥಿಗಳ ಪಟ್ಟಿ ರಿಲೀಸ್

ರಾಜ್ಯ ವಿಧಾನ ಪರಿಷತ್​ಗೆ ನೈಋತ್ಯ, ಈಶಾನ್ಯ, ಬೆಂಗಳೂರು ಪದವೀಧರ ಕ್ಷೇತ್ರಗಳು ಹಾಗೂ ಆಗ್ನೇಯ, ನೈಋತ್ಯ ಶಿಕ್ಷಕರ ಕ್ಷೇತ್ರ, ದಕ್ಷಿಣ ಶಿಕ್ಷಕರ…

10 mins ago

ಟಾಸ್​ ಗೆದ್ದ ಚೆನ್ನೈ ಸೂಪರ್​ ಕಿಂಗ್ಸ್​ : ಫೀಲ್ಡಿಂಗ್​ ಆಯ್ಕೆ

ಪ್ಲೇ ಆಫ್​ ಪ್ರವೇಶಕ್ಕೆ ಮಹತ್ವವಾದ ಶನಿವಾರದ ಐಪಿಎಲ್(IPL 2024)​ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಹಾಲಿ ಚಾಂಪಿಯನ್ ಚೆನ್ನೈ ಸೂಪರ್​ ಕಿಂಗ್ಸ್​​…

34 mins ago

ಶಿಕ್ಷಕ-ಪದವೀಧರ ಕ್ಷೇತ್ರದ ಅಭ್ಯರ್ಥಿಗಳ ಗೆಲುವು ನಿಶ್ಚಿತ : ಜಾರ್ಜ್

ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆ ಮಾದರಿಯಂ ತೆ, ವಿಧಾನ ಪರಿಷತ್ ಚುನಾವಣೆಯಲ್ಲೂ ಕಾರ್ಯಕರ್ತರುಗಳು ಅಭ್ಯರ್ಥಿಗಳ ಪರವಾಗಿ ಬೂತ್‌ಮಟ್ಟ ದಿಂದ…

2 hours ago

ಆಸ್ಪತ್ರೆಯಲ್ಲಿ ಶುಶ್ರೂಷಕಿಯರ ಪಾತ್ರ ಮಹತ್ವದ್ದು ಡಾ.ಮೋಹನ್‌ಕುಮಾರ್

ಆಸ್ಪತ್ರೆಯಲ್ಲಿ ಶುಶ್ರೂ?ಕಿಯರ ಪಾತ್ರ ಮಹತ್ವದ್ದು, ದಾದಿಯರು ಯಾ ವಾಗಲೂ ಹಸನ್ಮುಖಿಯರಾಗಿ ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮಲ್ಲೇಗೌಡ ಜಿಲ್ಲಾ ಸ್ಪತ್ರೆ…

2 hours ago

ವಾಸವಿ ಯುವಜನ ಸಂಘದ ವತಿಯಿಂದ ಪ್ರಸಾದ ವಿತರಣೆ

ವಾಸವಿ ಜಯಂತಿ ಪ್ರಯುಕ್ತ ನಗರದ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಜ್ಜಿಗೆ, ಕೋಸಂಬರಿ ವಿತರಣೆ ಮಾಡಲಾಯಿತೆಂದು ವಾಸವಿ…

2 hours ago

ನಟಿ ರಶ್ಮಿಕಾ ಟ್ವೀಟ್​ಗೆ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ವಿವಾದಾದ್ಮಕ ಹೇಳಿಕೆ

ನಟಿ ರಶ್ಮಿಕಾ ಮಂದಣ್ಣ ಸೋಶಿಯಲ್ ಮೀಡಿಯಾದಲ್ಲಿ ತಮ್ಮದೇ ಅದ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ವಿವಿಧ ಭಾಷೆಗಳಲ್ಲಿ ನಟಿಸಿ ಸೈ…

2 hours ago