ಮಂಗಳೂರು: ನಗರದಲ್ಲಿರುವ ಸರ್ಕಾರೇತರ ಸಂಸ್ಥೆಯಾಗಿರುವ ಅನಿರ್ವೇದ ಫೌಂಡೇಶನ್ ಮೂಲಕ ನ್ಯೂರೋಡೈವರ್ಜೆಂಟ್ ಮಕ್ಕಳಿಗಾಗಿಯೇ ಸಿದ್ಧಪಡಿಸಲಾದ ದಿನದ ಆರೈಕೆ ಕಾರ್ಯಕ್ರಮವನ್ನು ಕದ್ರಿಯ ತಾರೆತೋಟದಲ್ಲಿರುವ ತಮ್ಮ ಕೇಂದ್ರದಲ್ಲಿ ಆಯೋಜಿಸಲಾಗುತ್ತದೆ.
ಮಾನಸಿಕ ಯೋಗಕ್ಷೇಮಕ್ಕಾಗಿ ದುಡಿಯುತ್ತಿರುವ ಈ ಸಂಪನ್ಮೂಲ ಕೇಂದ್ರವು ಈ ಮೂಲಕ ಮಕ್ಕಳ ಬದುಕಿನಲ್ಲಿ ಬದಲಾವಣೆಯನ್ನು ತರುವ ಉದ್ದೇಶವನ್ನು ಹೊಂದಿದೆ.
ಪ್ರತಿ ಮಗುವಿನ ವಿಭಿನ್ನ ಅಗತ್ಯತೆಗಳನ್ನು ಈಡೇರಿಸುವ ಗುರಿಯನ್ನು ಹೊಂದಿರುವ ಈ ಕಾರ್ಯಕ್ರಮವು ಧನಾತ್ಮಕ ಪರಿಸರದಲ್ಲಿ ಸೃಜನಶೀಲತೆ, ಸಾಮಾಜಿಕ ಕೌಶಲ್ಯಗಳು ಮತ್ತು ದೈಹಿಕ ಯೋಗಕ್ಷೇಮವನ್ನು ಉತ್ತೇಜಿಸುವ ಚಟುವಟಿಕೆಗಳನ್ನು ಕೈಗೊಳ್ಳಲಿದೆ. ಕಲಾತ್ಮಕ ಚಟುವಟಿಕೆಗಳು, ಕರಕುಶಲ ಕಾರ್ಯಗಳು, ಪಝಲ್, ಆಟಗಳು, ಯೋಗ ಮತ್ತು ನೃತ್ಯ ಇತ್ಯಾದಿಗಳನ್ನು ಒಳಗೊಂಡ ಪಠ್ಯಕ್ರಮವು ಸಮೃದ್ಧತೆ ಮತ್ತು ವೈವಿಧ್ಯತೆಯಿಂದ ಕೂಡಿದ್ದು, ಇಲ್ಲಿ ಪ್ರತಿ ಮಗುವು ಸಂತಸ ಮತ್ತು ಆತ್ಮತೃಪ್ತಿಯನ್ನು ಪಡೆಯುವಂತೆ ಇದನ್ನು ರೂಪಿಸಲಾಗಿದೆ.
ಜೊತೆಗೆ ಈ ಕೇಂದ್ರವು ಸಂವೇದನಾ ಏಕೀಕರಣಕ್ಕೆ ಒತ್ತು ನೀಡಲಿದ್ದು ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಅವಕಾಶವನ್ನು ಒದಗಿಸಲಿದೆ. ಈ ಮೂಲಕ ಅವರಲ್ಲಿ ಸಾಧನೆ ಮತ್ತು ಸಮಸ್ತ ಭಾವನೆಯನ್ನು ರೂಪಿಸಲಾಗುತ್ತದೆ. ಇಡೀ ದಿನದ ಮತ್ತು ಅರ್ಧದ ದಿನದ ಪಾಲ್ಗೊಳ್ಳುವಿಕೆಯನ್ನು ಒದಗಿಸುವ ಮೂಲಕ ಅನಿರ್ವೇದ ಸಂಪನ್ಮೂಲ ಕೇಂದ್ರವು ಈ ಬೇಸಿಗೆ ಕಾಲವನ್ನು ನ್ಯೂರೋಡೈವರ್ಜೆಂಟ್ ಮಕ್ಕಳ ಬೆಳವಣಿಗೆ, ಸಬಲೀಕರಣ ಮತ್ತು ಸಂತಸಕ್ಕಾಗಿ ಮುಡಿಪಾಗಿಟ್ಟಿದ್ದು, ಪೂರಕ ಸಾಮುದಾಯಿಕ ವ್ಯವಸ್ಥೆಯಲ್ಲಿ ಅವರು ಬೆಳೆಯುವುದಕ್ಕಾಗಿ ನೆರವನ್ನು ಒದಗಿಸಲಿದೆ.
ಹೆಚ್ಚಿನ ಮಾಹಿತಿಗಾಘಿ ಹಾಗು ನೋಂದಣಿಗಾಗಿ ಕರೆ ಮಾಡಿ: 9482186289.