Categories: ಮಂಗಳೂರು

ಕಾಶ್ಮೀರದಲ್ಲಿ ಮೆರೆದ ಕರಾವಳಿಯ ಗಂಡುಕಲೆ: ಪಟ್ಲರ ನೇತೃತ್ವದಲ್ಲಿ ವೈಷ್ಣೋದೇವಿಯಲ್ಲಿ ದೇವಿಮಹಾತ್ಮೆ

ಮಂಗಳೂರು: ಜಮ್ಮು ಕಾಶ್ಮೀರದಲ್ಲಿ ಕೇವಲ ಎರಡು ವಾರಗಳ ಅಂತರದಲ್ಲಿ ಎರಡು ಯಕ್ಷಗಾನ ಪ್ರದರ್ಶನ ನೀಡಿ, ಅಲ್ಲಿನ ಸರಕಾರ ಮತ್ತು ಕಲಾಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿರುವುದು ಕರಾವಳಿಯ ಗಂಡುಕಲೆ ಯಕ್ಷಗಾನಕ್ಕೆ ಸಿಕ್ಕಿರುವ ದೊಡ್ಡ ಗೌರವ ಎನ್ನಲೇಬೇಕು.

ಈ ಮೊದಲು ಕಾಶ್ಮೀರದಲ್ಲಿ ಹಿಂದಿ ಯಕ್ಷಗಾನ ನೀಡುವ ಮೂಲಕ ಅಲ್ಲಿನ ಗವರ್ನರ್ ಮನೋಜ್ ಸಿನ್ಹ ಅವರ ಮೆಚ್ಚುಗೆಗೆ ಪಾತ್ರರಾಗಿದ್ದ ಪಾವಂಜೆ ಮೇಳದ ಆಯ್ದ ಕಲಾವಿದರಿಗೆ ವೈಷ್ಣೋದೇವಿಯಲ್ಲಿ ಮತ್ತೊಂದು ಅವಕಾಶವನ್ನು ಅಲ್ಲಿನ ಸರಕಾರವು ನೀಡಿದೆ. ಶ್ರೀ ಮಾತಾ ವೈಷ್ನೋದೇವಿ ಶ್ರೈನ್ ಬೋರ್ಡ್ ಕಟ್ರಾ ಜಮ್ಮು ಕಾಶ್ಮೀರ ಪ್ರತಿ ವರ್ಷ ನವರಾತ್ರಿ ಸಂದರ್ಭದಲ್ಲಿ ಆಯೋಜಿಸುವ ಒಂಬತ್ತು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮನೋಜ್ ಸಿನ್ಹ ಅವರ ಸೂಚನೆ ಮೇರೆಗೆ ದೇವಿಮಹಾತ್ಮೆ ಯಕ್ಷಗಾನವನ್ನು ಹಿಂದಿಯಲ್ಲಿ ಪ್ರದರ್ಶಿಸಲಾಗಿದೆ. ಖುದ್ದು ಮನೋಜ್ ಸಿನ್ಹ ಅವರೇ ಉತ್ಸಾಹ ಹಾಗೂ ಆಸಕ್ತಿಯಿಂದ ಪಟ್ಲರ ತಂಡಕ್ಕೆ ಅವಕಾಶ ನೀಡಿರುವುದು ಹೆಮ್ಮೆಯ ಸಂಗತಿ.

ಅಲ್ಲಿನ ಸರಕಾರ ಮತ್ತು ಜನರು ಕಲೆಗೆ ನೀಡುವ ಗೌರವ, ಕಲೆಯನ್ನು ಪ್ರೀತಿಸುವ ರೀತಿ ಎಲ್ಲವೂ ಮೆಚ್ಚತಕ್ಕದ್ದು. ಪಟ್ಲ ಸತೀಶ್ ಶೆಟ್ಟರ ತಂಡಕ್ಕೆ ರಾಜ್ಯ ಸರಕಾರದಿಂದಲೇ ಆತಿಥ್ಯ ನೀಡಿ, ಪ್ರತಿಯೊಬ್ಬರಿಗೂ ವಿಐಪಿ ಆದ್ಯತೆಯಲ್ಲಿ ಮಾತೆ ವೈಷ್ಣೋದೇವಿ ದರ್ಶನಕ್ಕೆ ಅವಕಾಶ ನೀಡಿರುವುದು ಮುಂತಾದವು ಇಡೀ ಕರಾವಳಿಗೆ ಹೆಮ್ಮೆಯ ಸಂಗತಿ. ಕಾಶ್ಮೀರದಲ್ಲಿ ನೀಡಿದ್ದ ಯಕ್ಷಗಾನ ಪ್ರದರ್ಶನವನ್ನು ವೀಕ್ಷಿಸಿದ ರಾಜ್ಯಪಾಲರು, ವೈಷ್ನೋದೇವಿಯಲ್ಲಿ ನೀವು ಕಾರ್ಯಕ್ರಮ ನೀಡಲೇಬೇಕು ವಿಶೇಷ ಆಸಕ್ತಿ ವಹಿಸಿ ಅವಕಾಶ ನೀಡಿರುವುದು ಅವರ ಕಲಾಪ್ರೀತಿಗೆ ಸಾಕ್ಷಿ.

ಜಮ್ಮುವಿನ ವಿದ್ಯುತ್ ಸಚಿವಾಲಯದ ಪ್ರಿನ್ಸಿಪಾಲ್ ಸೆಕ್ರೆಟರಿ ರಾಜೇಂದ್ರ ಪ್ರಸಾದ್ ನೇತೃತ್ವದಲ್ಲಿ ಅ. 2ರಂದು ಪಟ್ಲರ ತಂಡ ನೀಡಿದ್ದ ಯಕ್ಷಗಾನವನ್ನು ವೀಕ್ಷಿಸಿದ್ದ ಮನೋಜ್ ಸಿನ್ಹ ಅವರು ಕರಾವಳಿಯ ಕಲೆಗೆ ಮಾರು ಹೋಗಿದ್ದರು. ಬಳಿಕ ಅವರೇ ವಿಶೇಷ ಆಸಕ್ತಿಯಿಂದ ವೈಷ್ಣೋದೇವಿಯಲ್ಲಿ ನೀವು ಪ್ರದರ್ಶನ ನೀಡಲೇಬೇಕು ಎಂದು ಪಟ್ಲರಲ್ಲಿ ಕೇಳಿಕೊಂಡಿದ್ದರು. ವೈಷ್ಣೋದೇವಿಯಲ್ಲಿ ನಡೆದಿದ್ದ ಪ್ರದರ್ಶನವನ್ನು ಅಲ್ಲಿನ ಟೂರಿಸಂ ಇಲಾಖೆಯ ಮುಖ್ಯ ಕಾರ್ಯದರ್ಶಿ ಅರುಣ್ ಮೆಹ್ತಾ ಕೂಡ ವೀಕ್ಷಿಸಿ ತಲೆದೂಗಿದ್ದರು. ಸುಮಾರು 2,000ಕ್ಕೂ ಮಿಕ್ಕಿದ ಪ್ರೇಕ್ಷಕರ ಮುಂದೆ ಹಿಂದಿ ಭಾಷೆಯಲ್ಲಿ ಪ್ರದರ್ಶನಗೊಂಡ ದೇವಿಮಹಾತ್ಮೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ವಿಶೇಷ ಪ್ರದರ್ಶನಕ್ಕೆ ಹಿಂದಿಯಲ್ಲಿ ಸರ್ಪಂಗಳ ಈಶ್ವರ ಭಟ್ ಅವರು ಪದ್ಯ ರಚಿಸಿದ್ದು, ಪ್ರೊ. ಪವನ್ ಕಿರಣ್‌ಕರೆ ಅರ್ಥ ಬರೆದಿದ್ದರು. ಸತೀಶ್ ಪಟ್ಲರ ನೇತೃತ್ವದ ಪಾವಂಜೆ ಮೇಳದ 15 ಮಂದಿಯ ತಂಡ ಈ ಪ್ರದರ್ಶನವನ್ನು ನೀಡಿದೆ.

Ashika S

Recent Posts

ವಕೀಲ ಬಾಬಶೆಟ್ಟಿ ಹತ್ಯೆಗೆ 5 ಲಕ್ಷ ಸುಪಾರಿ: ಪ್ರಮುಖ ಆರೋಪಿ ಬಂಧನ

ಐದು ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟು, ವಕೀಲನ ಹತ್ಯೆಗೆ ಸಂಚು ರೂಪಿಸಿದ್ದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಬೀದರ್‌ ಜಿಲ್ಲಾ ಪೊಲೀಸರು…

11 mins ago

ದೇಶಾದ್ಯಂತ 24 ಗಂಟೆ ವಿದ್ಯುತ್‌ ಪೂರೈಕೆ ಸೇರಿ 10 ಗ್ಯಾರಂಟಿ ಘೋಷಿಸಿದ ಕೇಜ್ರಿವಾಲ್

2024ರ ಲೋಕಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಗೆದ್ದರೆ ಹತ್ತು ಗ್ಯಾರಂಟಿಗಳನ್ನು ಜಾರಿಗೊಳಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌…

17 mins ago

ಬೀದರ್‌: ಬಿಸಿ ದೋಸೆಯಂತೆ ಮಾರಾಟವಾಗುತ್ತಿದೆ ಎಸಿ, ಕೂಲರ್‌

ಬಿಸಿಲು ಹಾಗೂ ಅದರ ಝಳದಿಂದ ಜನ ಒಂದೆಡೆ ತೀವ್ರ ಅನಾರೋಗ್ಯದ ಸಮಸ್ಯೆ ಎದುರಿಸುತ್ತಿದ್ದರೆ, ಏರ್‌ ಕಂಡಿಷನರ್‌ (ಎಸಿ), ಏರ್‌ ಕೂಲರ್‌ಗಳ…

31 mins ago

ಪರಿಷತ್ ಚುನಾವಣೆಯಲ್ಲೂ ಜೆಡಿಎಸ್ ಜತೆ ಮೈತ್ರಿ ಮುಂದುವರಿಕೆ: ಬಿ.ಎಸ್.ಯಡಿಯೂರಪ್ಪ

ಮುಂಬರುವ ವಿಧಾನಪರಿಷತ್ ಚುನಾವಣೆಯಲ್ಲೂ ಜೆಡಿಎಸ್-ಬಿಜೆಪಿಮೈತ್ರಿ ಮುಂದುವರಿಯಲಿದ್ದು, ಮೈತ್ರಿಗೆ ಯಾವುದೇ ಭಂಗ ಆಗುವುದಿಲ್ಲ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ…

48 mins ago

ವೇಣುಗೋಪಾಲಸ್ವಾಮಿ ದೇಗುಲ ಬಳಿ ಅಡ್ಡಾಡುತ್ತಿರುವ ಒಂಟಿ ಗಜ

ಪ್ರತಿಷ್ಠಿತ ಇತಿಹಾಸ ಪ್ರಸಿದ್ಧ ಶ್ರೀ ಹಿಮವದ್ ವೇಣುಗೋಪಾಲಸ್ವಾಮಿ ಬೆಟ್ಟದ ದೇಗುಲ ಆವರಣದ ಬಳಿ ಎಂದಿನಂತೆ ಆಗಮಿಸಿದ ಒಂಟಿ ಆನೆ ವಾಪಾಸ್…

1 hour ago

ಕಾಡಾನೆಯಿಂದ ಬೆಳೆ ನಾಶ: ಮನನೊಂದು ರೈತ ಆತ್ಮಹತ್ಯೆ

ಸಾಲ ಮಾಡಿ ಬೆಳೆದ ಬೆಳೆಯನ್ನು ಕಾಡಾನೆ ಹಿಂಡುಗಳು ನಾಶ ಮಾಡಿದ್ದರಿಂದ ಮನನೊಂದು ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೇಲೂರು ತಾಲೂಕಿನ ಅರೇಹಳ್ಳಿ ಹೋಳಿಯ ಚಿಕ್ಕಸಾಲಾವರದ ಬಾವಿಕಟ್ಟೆ ಗ್ರಾಮದಲ್ಲಿ ನಡೆದಿದೆ.

1 hour ago