ಮಂಗಳೂರು: ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ)ದ ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ ಸಿರಿ ಮತ್ತು ಮ್ಯಾಟ್ರಿಕ್ಸ್ ತಂಡಗಳ ವತಿಯಿಂದ ‘ಸ್ವಚ್ಛ ಸುಲ್ತಾನ್ ಬತ್ತೇರಿ’ ಕಾರ್ಯಕ್ರಮವನ್ನು ಶುಕ್ರವಾರ ಆಯೋಜಿಸಲಾಯಿತು.
‘ಸ್ವಚ್ಛತೆಯನ್ನು ಬಾಲ್ಯದಿಂದಲೇ ರೂಢಿಸಿಕೊಳ್ಳಬೇಕು. ಈ ಅಭ್ಯಾಸ ಮನೆಯಿಂದಲೇ ಶುರುವಾದರೆ ಅದೆಷ್ಟೋ ಕಸ ಕಡಿಮೆಯಾಗುವುದು‘ ಎಂದು ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ ಪರಿಸರಪ್ರೇಮಿ ನಾಗರಾಜ್ ಬಜಾಲ್ ಹೇಳಿದರು.
ನಾವು ಮನೆಯ ಸುತ್ತ ಬಿಸಾಡುವ ಕಸ ನದಿ ನಾಲೆಗಳ ಮೂಲಕ ಸಮುದ್ರ ಸೇರಿ ಅದರ ದಡವನ್ನು ಮಲಿನಗೊಳಿಸುವುದರೊಂದಿಗೆ ಜಲಚರಗಳಿಗೂ ತೊಂದರೆ ಉಂಟುಮಾಡುತ್ತದೆ ಎಂದರು. ಹಸಿರು ದಳ ಸಂಯೋಜಕರಾದ ಇವರು ನೇತ್ರಾವತಿ ನದಿಯ ಸ್ವಚ್ಛಗೊಳಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ.
ಸ್ವಚ್ಛತಾ ಕಾರ್ಯಕ್ರಮದಲ್ಲಿ ಸಿರಿ ಮತ್ತು ಮ್ಯಾಟ್ರಿಕ್ಸ್ ತಂಡದವರೊಂಡಿಗೆ ಊರಿನವರು ಕೈಜೋಡಿಸಿ ನದಿಯ ದಂಡೆಯನ್ನು ಸ್ವಚ್ಛಗೊಳಿಸಿದರು.
ಈ ಕಾರ್ಯಕ್ರಮದಿಂದ ಪರಿಸರ ಸ್ವಚ್ಚವಾದದ್ದು ಮಾತ್ರವಲ್ಲ, ಜನರಲ್ಲಿ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುವಲ್ಲಿಯೂ ಸಹಕಾರಿಯಾಯಿತು ಎಂದು ತಂಡದವರು ಅಭಿಪ್ರಾಯಪಟ್ಟರು.
ಸಿರಿ ಹಾಗು ಮ್ಯಾಟ್ರಿಕ್ಸ್ ತಂಡಗಳಲ್ಲಿ ಅನುಷ, ಮೈತ್ರಿ, ಕ್ಷಿತಿ, ವಿನ್ಯಾ, ಪ್ರಜ್ಞಾ, ಸಾಯಿ ಕೃತಿಕ್, ರಾಧಾಕೃಷ್ಣ, ಸಲ್ಮಾನ್, ಅರುಣ್ ಇದ್ದರು.
ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ, ಸುಪ್ರೀಂ ಕೋರ್ಟ್ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…
ಏರ್ ಇಂಡಿಯಾ ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್ಪ್ರೆಸ್ 85 ವಿಮಾನಗಳನ್ನು…
ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.
ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.
ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…