News Karnataka Kannada
Saturday, May 18 2024
ಮಂಗಳೂರು

ಮಂಗಳೂರಿನ ಮೂರು ಪ್ರಕರಣಗಳ ಸಿಬಿಐ ತನಿಖೆ: ಕಬೀರ್ ಉಳ್ಳಾಲ್ ಆಗ್ರಹ

CBI should probe 3 cases in Mangaluru: Kabir Ullal
Photo Credit : News Kannada

ಮಂಗಳೂರು: ನಂದಿ ಗುಡ್ಡೆಯ ವೇಶ್ಯಾವಾಟಿಕೆ ಪ್ರಕರಣ, ಚಿನ್ನ ದರೋಡೆಯ ನಕಲಿ ಪ್ರಕರಣ, ಮಂಗಳೂರಿನ ಡ್ರಗ್ಸ್ ಪ್ರಕರಣ ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್, ಸಬ್ ಇನ್ಸ್ ಪೆಕ್ಟರ್, ಮತ್ತು ಪೊಲೀಸ್ ಆಯುಕ್ತ ಶಶಿಕುಮಾರ್ ಮೇಲೆ ಲೋಕಾಯುಕ್ತಕ್ಕೆ ಭ್ರಷ್ಟಾಚಾರದ ಬಗ್ಗೆ ದೂರನ್ನು ನೀಡಿದ್ದೆ. ಲೋಕಾಯುಕ್ತವು ಸ್ವತಂತ್ರವಾಗಿ ತನಿಖೆ ನಡೆಸುವುದನ್ನು ಬಿಟ್ಟು ಭ್ರಷ್ಟಾಚಾರದಲ್ಲಿ ಆರೋಪಿಸಿದವರನ್ನೇ ತನಿಖೆ ನಡೆಸಿ ವರದಿ ನೀಡಲು ಆದೇಶಿಸಿರುವುದರಿಂದ ಭ್ರಷ್ಟಾಚಾರದ ಆರೋಪಿಗಳು ಸಾಕ್ಷಿಗಳನ್ನು ನಾಶ ಪಡಿಸುವ ಸಾಧ್ಯತೆ ಮತ್ತು ಹಣ ನೀಡಿದವರನ್ನು ಬೆದರಿಸುವ ಸಾಧ್ಯತೆ ಹೆಚ್ಚಿದೆ ಎಂದು ಕಬೀರ್ ಉಳ್ಳಾಲ್ ಹೇಳಿದರು.

ಕೆಲವು ದಿನಗಳಿಂದ ನನಗೆ ಪೊಲೀಸ್ ಆಯುಕ್ತರ ಕಚೇರಿಯಿಂದ ಪದೇ ಪದೇ ವೊನ್ ಕಾಲ್ ಮಾಡಿ ಮಾನಸಿಕ ಹಿಂಸೆ ನೀಡಲಾಗುತ್ತದೆ ಮತ್ತು ಮನೆಯ ಹತ್ತಿರ ಪೊಲೀಸರನ್ನು ಕಳುಹಿಸುವುದು ನೋಟಿಸ್‌ ಕಳುಹಿಸಿ ಮಾನಸಿಕ ಧೈರ್ಯವನ್ನು ಕುಗ್ಗಿಸುವ ಪ್ರಯತ್ನ ಪೊಲೀಸ್ ಆಯುಕ್ತರಿಂದ ನಡೆಯುತ್ತಿದೆ ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಮಂಗಳೂರು ನಗರ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ನಡೆಯುವ ಭ್ರಷ್ಟಾಚಾರಕ್ಕೆ ಪೊಲೀಸ್ ಆಯುಕ್ತರ ನೇರ ಕಾರಣ ಸರ್ಕಾರ ಭ್ರಷ್ಟಾಚಾರ ನಡೆಸುವ ಅಧಿಕಾರಿಗಳನ್ನು ರಕ್ಷಣೆ ಮಾಡುತ್ತದೆ. ನಿಷ್ಠಾವಂತ ಅಧಿಕಾರಿಗಳನ್ನು ಅವರು ಭ್ರಷ್ಟಾಚಾರದ ಬಗ್ಗೆ ಪೊಲೀಸ್ ಅಧಿಕಾರಿಗಳನ್ನು ಕರೆದು ಎಚ್ಚರಿಕೆ ನೀಡಿದ ತಕ್ಷಣ ಅವರ ಎತ್ತಂಗಡಿ ಮಾಡುತ್ತಾರೆ. ಪೊಲೀಸ್ ಇಲಾಖೆ. ಕಂದಾಯ, ಸಾರಿಗೆ ಇಲಾಖೆಯಲ್ಲಿ ಅತೀ ಹೆಚ್ಚು ಭ್ರಷ್ಟಾಚಾರ  ನಡೆಯುತ್ತದೆ. ಸರಕಾರವು ಅಧಿಕಾರಿಗಳ ವರ್ಗಾವಣೆಗಳಲ್ಲಿ ಹಣ ಪಡೆದುಕೊಂಡಿದೆ. ಭ್ರಷ್ಟಾಚಾರ ಸರಕಾರದ ಕುಮ್ಮಕ್ಕಿನಿಂದಲೇ ನಡೆಯುತ್ತದೆ. ನಾನು ಉಳ್ಳಾಲ ಪೊಲೀಸ್ ಠಾಣೆಯ ಸಿಸಿ ಫೂಟೇಜ್ ಕೇಳಿದ್ದು ಅವರು ಇಂದಿನವರೆಗೂ ನೀಡಿಲ್ಲ ಅವರು ನಿಷ್ಠಾವಂತರಾದರೆ ಅವರಿಗೆ ಫೂಟೇಜ್ ನೀಡಲು ಭಯವೇಕೆ. 18 ತಿಂಗಳುಗಳ ಸಿಸಿ ಪೋಟೇಜ್ ಶೇಖರಿಸಿ ಇಡಬೇಕು. ಬೇಡಿಕೆ ಬಂದರೆ ಅವರಿಗೆ ಅದರ ಪ್ರತಿಗಳನ್ನು ನೀಡಬೇಕೆಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ.

ಮಂಗಳೂರಿನಲ್ಲಿ ನಡೆದ ಮೂರು ಪ್ರಕರಣಗಳ ಬಗ್ಗೆ ಸಿಬಿಐ ತನಿಖೆ ನಡೆಸಿದರೆ ಪೊಲೀಸ್ ಆಯುಕ್ತರ ಭ್ರಷ್ಟಾಚಾರದ ಸಂಪೂರ್ಣ ಮಾಹಿತಿ ಹೊರ ಬರುತ್ತೆ.

ಮಂಗಳೂರಿನ ಕೆಲವು ಮೆಡಿಕಲ್ ಸ್ಪೂಡೆಂಟ್ ಗಳು ಪೊಲೀಸ್ ಆಯುಕ್ತರಿಗೆ ಹೆದರಿ ಓಡಿ ಹೋಗಿದ್ದಾರೆ. ಪೊಲೀಸ್ ಆಯುಕ್ತರಾಗಿ ಶಶಿಕುಮಾರ್ ಬಂದ ನಂತರ ಮಂಗಳೂರು ನಗರ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ಜನರು ಹೋಗಲು ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು,

ಪೊಲೀಸ್ ಆಯುಕ್ತರಿಂದ ಅನ್ಯಾಯಕ್ಕೊಳಗಾದವರು ಭಯಪಡದೆ ಮುಂದೆ ಬಂದು ದೂರು ಕೊಡಿ. ಸರಕಾರವು ಮಂಗಳೂರು ಪೊಲೀಸ್ ಆಯುಕ್ತರನ್ನು ಈ ಕೂಡಲೇ ವರ್ಗಾವಣೆ ಮಾಡಿ ಪೊಲೀಸ್ ಇಲಾಖೆಯು ಸಾರ್ವಜನಿಕರ ರಕ್ಷಕರೆಂಬುದನ್ನು ಸಾಬೀತು ಪಡಿಸಬೇಕೆಂದು ಅಗ್ರಹಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು