ಬೆಳ್ತಂಗಡಿ: ಕ್ರಿಸ್ಮಸ್ ಸಂದರ್ಭ ಏಸು ಕ್ರಿಸ್ತನ ಜನ್ಮ ವೃತ್ತಾಂತವನ್ನು ಪ್ರಸ್ತುತಪಡಿಸುವ ಗೋದಲಿಯನ್ನು ಕ್ರಿಶ್ಚಿಯನ್ ಬಾಂಧವರು ಅಲ್ಲಲ್ಲಿ ರಚಿಸುವುದು ವಾಡಿಕೆ. ಆದರೆ ಇಲ್ಲೊಂದು ಕಡೆ ಹಿಂದು ಮತ್ತು ಮುಸ್ಲಿಂ ಬಾಂಧವರು ಸೇರಿ ಬೃಹತ್ ಗೋದಲಿಯನ್ನು ನಿರ್ಮಿಸಿದ್ದಾರೆ.
ಮಡಂತ್ಯಾರು ಪೇಟೆಯಲ್ಲಿ ಸುಮಾರು 200 ಚದರ ಅಡಿ ವಿಸ್ತಾರದಲ್ಲಿ ಗೋದಲಿಯನ್ನು ಸಿದ್ಧಮಾಡಿದ್ದಾರೆ. ಅತ್ಯಂತ ಜನಾಕರ್ಷಣೆ ಪಡೆಯುತ್ತಿರುವ ಇದನ್ನು ನಿರ್ಮಿಸಿದ 12 ಮಂದಿ ಯುವಕರಿಗೇ ಈ ಪರಿಜನಮನ್ನಣೆ ಗಳಿಸಿದ್ದು ಅತ್ಯಂತ ಆಶ್ಚರ್ಯ ತಂದಿದೆ.
ಗೋದಲಿಗೆ ನೇಜಿ, ಹಸಿರು ಹುಲ್ಲು ಇತ್ಯಾದಿ ಪರಿಕರಗಳನ್ನು ಜೋಡಿಸಿಕೊಳ್ಳಲಾಗಿದೆ. ಆಡು ಕರುಗಳ ಬೊಂಬೆಗಳನ್ನು ಇಡದೆ ಜೀವಂತ ಪ್ರಾಣಿಗಳನ್ನು ಇಟ್ಟು ನೈಜತೆಗೆ ಸನಿಹ ಇರುವಂತೆ ಪರಿಶ್ರಮ ವಹಿಸಲಾಗಿದೆ. ಯುವಕರ ಶ್ರಮ ಜನಮನ್ನಣೆ ಗಳಿಸಿದೆ. ಇದನ್ನು ವೀಕ್ಷಿಸಲು ತಂಡೋಪತಂಡವಾಗಿ ಸಾರ್ವಜನಿಕರು ಬರುತ್ತಿದ್ದಾರೆ.
ಚುನಾವಣೆ ಮುಗಿದರೂ ಹಗೆತನ ಮುಗಿಯಲಿಲ್ಲ. ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಕ್ಕೆ ಯುವಕನೊಬ್ಬ ಕೊಲೆಯಾಗಿದ್ದಾನೆ. ಜಾವೀದ್ ಚಿನ್ನಮಳ್ಳಿ (25)ಹತ್ಯೆಯಾದವನು. ಕಲಬುರಗಿಯ ಅಫಜಲಪುರ…
ಆನ್ಲೈನ್ ಪಾರ್ಟ್ಟೈಮ್ ಕೆಲಸ ಹಾಗೂ ಆನ್ಲೈನ್ ಟ್ರೇಡಿಂಗ್ ಮೇಸೆಜ್ ನ ಬಲೆಗೆ ಬಿದ್ದ ವ್ಯಕ್ತಿಯೊಬ್ಬರು ಬರೋಬ್ಬರಿ 17.35 ಲಕ್ಷ ರೂ.…
ಹೆಚ್ಚುತ್ತಿರುವ ಬಿಸಿಲಿನ ತಾಪ ಹಾಗೂ ಸಮರ್ಪಕ ಮೇವು ದೊರಕದೆ ಕಾಡಂಚಿನ ಗ್ರಾಮಗಳ ಜಾನುವಾರು, ಸಾಕುಪ್ರಾಣಿಗಳು ಸಾವಿಗೀಡಾಗುತ್ತಿವೆ.
ಹಳೇ ದ್ವೇಷಕ್ಕೆ ನಡುರಸ್ತೆಯಲ್ಲಿ ಯುವಕನ ಕತ್ತು ಕುಯ್ದು ಕೊಲೆ ಮಾಡಿದ ಘಟನೆ ದೊಡ್ಡಬಳ್ಳಾಪುರ ಹೊರವಲಯ ನವೋದಯ ಶಾಲೆಯ ಮುಂಭಾಗದಲ್ಲಿ ನಡೆದಿದೆ.
ದೇಶಾದ್ಯಂತ ಚುನಾವಣೆಗ ಅಂತ್ಯಗೊಳುವುದಕ್ಕೂ ಮುನ್ನ ವಿವಿಧ ರಾಜ್ಯಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪ್ರಕ್ರಿಯೆ ಆರಂಭಿಸಬೇಕೆಂದು ಕೇಂದ್ರ ನಿರ್ಧರಿಸಿದೆ.
ವ್ಯಕ್ತಿಯೊಬ್ಬ ತನ್ನ ತಾಯಿ, ಹೆಂಡತಿ ಮತ್ತು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ ಸೀತಾಪುರದಲ್ಲಿ ನಡೆದಿದೆ.