ಬೆಳ್ತಂಗಡಿ: ಕೊಟ್ಟಿಗೆಹಾರದ ಕಡೆಯಿಂದ ಧರ್ಮಸ್ಥಳ ಕ್ಕೆ ಯಾತ್ರಾರ್ಥಿಗನ್ನು ಹೊತ್ತೊಯ್ಯುತ್ತಿದ್ದ ಟೆಂಪೋ ಟ್ರಾವೆಲರ್ ವಾಹನ ಚಾರ್ಮಾಡಿ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದ ಎದುರಿನ ರಸ್ತೆಯಲ್ಲಿ ನಿಯಂತ್ರಣ ತಪ್ಪಿ ಚರಂಡಿಗೆ ಮಗುಚಿಬಿದ್ದ ಘಟನೆ ಅ.14 ರಂದು ನಡೆದಿದೆ.
ಅಪಘಾತದಲ್ಲಿ 4 ಮಂದಿ ಪ್ರಯಾಣಿಕರಿಗೆ ಗಾಯಗಳಾಗಿದ್ದು ಅವರನ್ನು ಸ್ಥಳಿಯರ ನೇತೃತ್ವದಲ್ಲಿ ಸ್ಥಳೀಯರು ರಕ್ಷಿಸಿ ಪ್ರಥಮ ಚಿಜಿತ್ಸೆಗಾಗಿ ಕಕ್ಕಿಂಜೆ ಕೃಷ್ಣ ಆಸ್ಪತ್ರೆಗೆ ದಾಖಲಿಸಿದ್ದಾರೆ.