News Karnataka Kannada
Monday, April 29 2024
ಮಂಗಳೂರು

ಬೆಳ್ತಂಗಡಿ: ಎಸ್.ಕೆ.ಎಸ್.ಎಸ್ ಎಫ್ ಬೊಳ್ಮನಾರ್ ಶಾಖೆ ವತಿಯಿಂದ ಉಚಿತ ನೋಟ್ ಪುಸ್ತಕ ವಿತರಣೆ

SKSSF Bolmanar branch distributes free notebooks
Photo Credit : News Kannada

ಬೆಳ್ತಂಗಡಿ: ಪುದುವೆಟ್ಟು ಗ್ರಾಮ ಸಮಸ್ತ ಧಾರ್ಮಿಕ ವಿಧ್ಯಾರ್ಥಿ ಸಂಘಟನೆಯಾದ ಎಸ್.ಕೆ.ಎಸ್.ಎಸ್.ಎಫ್ ಬೊಳ್ಮಿನಾರ್ ಶಾಖೆಯ ವತಿಯಿಂದ ಕೆಮ್ಮಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿಧ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ಕೆಮ್ಮಟೆ ಶಾಲೆಯಲ್ಲಿ ನಡೆಯಿತು.

ಸಂಘಟನೆಯ ಬೊಳ್ಮಿನಾರ್ ಶಾಖೆ ಅಧ್ಯಕ್ಷರು ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷರೂ ಆದ ಅಬೂಬಕರ್ ಕುಂಟ್ಯಾನ  ಅಧ್ಯಕ್ಷತೆ ವಹಿಸಿದ್ದರು ಕಾರ್ಯಕ್ರಮವನ್ನು ಉಧ್ಘಾಟಿಸಿದ ಎಸ್.ಕೆ.ಎಸ್.ಎಸ್.ಎಫ್ ಕರ್ನಾಟಕ ರಾಜ್ಯ ಸಮೀತಿ ಸದಸ್ಯರಾದ ನಝೀರ್ ಅಝ್ಹರಿ ಮಾತನಾಡಿ ಸಂಘಟನೆಯ ಧ್ಯೇಯ ಉಧ್ಧೇಶಗಳು ಮತ್ತು ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿದರು.ಪುದುವೆಟ್ಟು ಗ್ರಾಮ ಪಂಚಾಯತ್ ಸದಸ್ಯರಾದ ರಾಮೇಂದ್ರನ್ ಮೇರ್ಲ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು. ಶಾಲಾ ಮುಖ್ಯ ಶಿಕ್ಷಕಿ ಶಿಲ್ಪಾ ವಿಧ್ಯಾರ್ಥಿಗಳಿಗಾಗಿ ಉಚಿತ ಪುಸ್ತಕ ವಿತರಿಸಿದ ಕಾರ್ಯವನ್ನು ಶ್ಲಾಘಿಸುತ್ತಾ ಸಂಘಟಕರಿಗೆ ಅಭಿನಂದಿಸಿದರು.

ಪುದುವೆಟ್ಟು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಗಫೂರ್ ಬೊಳ್ಮನಾರ್, ಮಾಜಿ ಉಪಾಧ್ಯಕ್ಷರಾದ ಬೊಮ್ಮಣ್ಣ ಗೌಡ, ಸಮಾಜ ಸೇವಕರಾದ ಶಶಿ ಕರಂಬಾರ್, ಮಾಜಿ ಪಂಚಾಯತ್ ಸದಸ್ಯರಾದ ನಾರಾಯಣ ಪಿಲಿಕ್ಕಳ,ಹಳೇ ವಿಧ್ಯಾರ್ಥಿ ಸಂಘದ ಸದಸ್ಯರಾದ ಬಾಲಕ್ರಷ್ಣ, ಊರಿನ ಹಿರಿಯರಾದ ಕೂಸಪ್ಪ ಗೌಡ, ಶಾಖೆಯ ಉಪಾಧ್ಯಕ್ಷರಾದ ರಫೀಖ್ ಅಲಪ್ಪಾಯ,ಕೋಶಾಧಿಕಾರಿ ಬಶೀರ್ ಅಲಪ್ಪಾಯ,ಸದಸ್ಯರಾದ ಬಶೀರ್ ಕಾಪಾಯ,ಹಳೇ ವಿಧ್ಯಾರ್ಥಿ ಸಂಘದ ಸದಸ್ಯರಾದ ಸುರೇಶ್ ಕುಂಟ್ಯಾಣ,ರಹಿಮಾನ್ ಅಲಪ್ಪಾಯ ಅತಿಥಿಗಳಾಗಿ ಭಾಗವಹಿಸಿದರು. ಶಾಲಾ ಶಿಕ್ಷಕರು, ಪೋಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಎಸ್‌ಕೆಎಸ್‌ಎಸ್‌ಎಫ್‌ ಶಾಖೆಯ ಸಂಘಟನಾ ಕಾರ್ಯದರ್ಶಿ ರಹೀಂ ಮಖ್ದೂಮಿ ಅಬೀರಿ ಪ್ರಾಸ್ತಾವಿಕ ಮಾತನಾಡಿದರು ನಂತರ ವಿಧ್ಯಾರ್ಥಿಗಳಿಗೆ ಪುಸ್ತಕ,ಪೆನ್ನು ಹಾಗೂ ಅಂಗನವಾಡಿ ವಿಧ್ಯಾರ್ಥಿಗಳಿಗೆ ಸ್ಲೇಟು ಮತ್ತು ಬರಹ ಕಡ್ಡಿಗಳನ್ನು ವಿತರಿಸಲಾಯಿತು. ಕಾರ್ಯದರ್ಶಿ ಸಿಧ್ಧೀಖ್ ಅಲಪ್ಪಾಯ ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು