ಬೆಳ್ತಂಗಡಿ: ನೇತ್ರಾವತಿ ನದಿ ಉಳಿಸಿ ಹೋರಾಟ ಹಾಗೂ ತಾಲೂಕಿನ ಜನಪರ ವಿಚಾರಗಳ ಬಗೆಗಿನ ಹೋರಾಟದ ಬಗ್ಗೆ ಮುಂಡಾಜೆಯಿಂದ ಉಪ್ಪಿನಂಗಡಿ ವರೆಗೆ ಹಮ್ಮಿಕೊಳ್ಳಲಾಗಿರುವ ಮೂರು ದಿನದ ಕಾಲ್ನಡಿಗೆ ಹೋರಾಟ ಜಾಥಾದ ಬಗ್ಗೆ5 ಗ್ರಾ.ಪಂ ಗಳ ಜನಪ್ರತಿನಿಧಿಗಳು, ಗ್ರಾಮದ ಪ್ರಮುಖರ ಸಮಾಲೋಚನಾ ಸಭೆಯು ಮುಂಡಾಜೆ ಗ್ರಾ.ಪಂ ಸಭಾಂಗಣದಲ್ಲಿ ಜರುಗಿತು.
ಜಾಥಾ ಮುಂಡಾಜೆ ಗ್ರಾಮದ ಗಾಂಧಿ ಕಟ್ಟೆಯಿಂದ ಪ್ರಾರಂಭವಾಗಲಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿ, ಬೆಸ್ಟ್ ಫೌಂಡೇಶನ್ ಬೆಳ್ತಂಗಡಿ ಸ್ಥಾಪಕಾದ , ಹೈಕೋರ್ಟ್ ನ್ಯಾಯವಾದಿ ರಕ್ಷಿತ್ ಶಿವರಾಂ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ನ್ಯಾಯವಾದಿ ಮನೋಹರ್ ಕುಮಾರ್ ಇಳಂತಿಲ ಪ್ರಸ್ತಾವನೆಗೈದರು. ಮುಂಡಾಜೆಯ ನಾಮದೇವ ರಾವ್ ಸ್ವಾಗತಿಸಿದರು.
ವೇದಿಕೆಯಲ್ಲಿ ಚಾರ್ಮಾಡಿ ಹಸನಬ್ಬ, ಸಂತೋಷ್ ಕುಮಾರ್ ವಳಂಬ್ರ, ಲೋಕೇಶ್ವರಿ ವಿನಯಚಂದ್ರ, ಅರೆಕ್ಕಲ್ ಮಮ್ಮಿಕುಂಞಿ, ನಾರಾಯಣ ಗೌಡ ದೇವಸ್ಯ, ಕೆ.ಯು ಮುಹಮ್ಮದ್ ಕಾಜೂರು, ವನಿತಾ ಕಡಿರುದ್ಯಾವರ, ಕೃಷ್ಣಪ್ಪ ಪೂಜಾರಿ ಕಿಲ್ಲೂರು, ಕೆ.ಸಿ ಪ್ರದೀಪ್, ಶಾಜಿ ತೋಪಿಲ್, ಕೂಳೂರು ಇಬ್ರಾಹಿಂ, ಸಿದ್ದೀಕ್ ಸಾಗರ್, ಹಮೀದ್ ನೆಕ್ಕರೆ, ಜೋನ್ ಕೆ.ಸಿ, ರಿಯಾಝ್ ಚಾರ್ಮಾಡಿ, ಇಬ್ರಾಹಿಂ ಮಸೀದಿಬಳಿ, ಪ್ರವೀಣ್ ಫೆರ್ನಾಂಡಿಸ್, ಶಾಹುಲ್ ಹಮೀದ್ ಕಿಲ್ಲೂರು, ಕಿಶೋರ್ ಕುಮಾರ್ ಕುರುಡ್ಯ, ಸತ್ಯನಾರಾಯಣ ಹೊಳ್ಳ ಕಾನರ್ಪ, ಅಶೋರ್ ರೈ, ರೋಷನ್ ಅರಸಮಜಲು, ಹೈದರಾಲಿ ಕಾಜೂರು, ಯಶೋಧರ ಸುವರ್ಣ ಚಾರ್ಮಾಡಿ ಸೇರಿದಂತೆ, ಮಲವಂತಿಗೆ, ಮಿತ್ತಬಾಗಿಲು, ಕಡಿರುದ್ಯಾವರ, ಚಾರ್ಮಾಡಿ, ಚಿಬಿದ್ರೆ, ತೋಟತ್ತಾಡಿ ಮತ್ತು ಮುಂಡಾಜೆ ಗ್ರಾಮಸ್ಥರು ಭಾಗಿಯಾಗಿದ್ದರು.
ನೀರಿನ ಟ್ಯಾಂಕ್ನಲ್ಲಿ ಬಿದ್ದು ಮೂವರು ಎಂಜಿನಿಯರ್ಗಳು ಸಾವಿಗೀಡಾದ ಘಟನೆ ಬಳ್ಳಾರಿ ಜಿಲ್ಲೆಯ ಜಿಂದಾಲ್ನ ಎಚ್ಎಸ್ಎಂ ಪ್ಲಾಂಟ್ನಲ್ಲಿ ನಡೆದಿದೆ.
ವಿದ್ಯುತ್ ಹೈಟೆನ್ಷನ್ ವೈರ್ ತಾಕಿ ವ್ಯಕ್ತಿ ಸಾವನ್ನಪ್ಪಿದ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಚಿಕ್ಕೆನಕೊಪ್ಪ ಗ್ರಾಮದಲ್ಲಿ ನಡೆದಿದೆ.
ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆದ 17ನೇ ಆವೃತ್ತಿಯ 58ನೇ ಐಪಿಎಲ್ ಪಂದ್ಯದಲ್ಲಿ ಅಲ್ರೌಂಡ್ ಪ್ರದರ್ಶನದ ಫಲವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು…
ಧರ್ಮ ದಂಗಲ್ ಕಿಡಿ ಮೈಸೂರಿನಲ್ಲಿ ಹೊತ್ತಿಕೊಂಡಿದ್ದು, ಮೈಸೂರಿನ ಸಂತ ಫಿಲೋಮಿನಾಸ್ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಹಾಡಿದ ಜಯತು ಜಯತು ಜೈ…
ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳ ಜನಸಂಖ್ಯೆ ಕುಸಿತವಾಗುತ್ತಿದ್ದು ಇದೇ ವೇಳೆ ಮುಸ್ಲಿಮರ ಸಂಖ್ಯೆ ಹೆಚ್ಚುತ್ತಿದೆ ಎಂದು ಪ್ರಧಾನ ಮಂತ್ರಿ ಆರ್ಥಿಕ ಸಲಹಾ…
ಕಾರ್ಖಾನೆಯೊಂದರಲ್ಲಿ ಪಟಾಕಿ ಸಿಡಿದು 8 ಜನರು ಸಾವನ್ನಪ್ಪಿದ ಘಟನೆ ತಮಿಳುನಾಡಿನ ಶಿವಕಾಶಿಯಲ್ಲಿ ನಡೆದಿದೆ.