ಬೆಳ್ತಂಗಡಿ: ನಮ್ಮನ್ನು ಗೆಲ್ಲಿಸಿದರೆ ಈ ಬಾರಿ ಮೊದಲ ಬೇಡಿಕೆಯಾಗಿ ನಿಮ್ಮ ರಸ್ತೆಯನ್ನೇ ಪರಿಗಣಿಸಿ ಅಭಿವೃದ್ಧಿ ಪಡಿಸುತ್ತೇವೆ ಎಂದು ಮತ ಪಡೆದ ಬಿಜೆಪಿ ಸದಸ್ಯರು ಅತ್ತ ರಸ್ತೆಯೂ ನಿರ್ಮಿಸದೆ ಇತ್ತ ಜನರ ಕೈಗೂ ಸಿಗದೆ ಓಡಾಡುತ್ತಿರುವುದನ್ನು ಕಂಡು ಬೇಸತ್ತು ಇದೀಗ ಮುಂಡಾಜೆ ಗ್ರಾ.ಪಂ.ನ ೨ನೇ ವಾರ್ಡ್ನ ಒಳಪಟ್ಟ ಮಿತ್ತೊಟ್ಟು ಗ್ರಾಮಸ್ಥರು ಚುನಾವಣೆ ‘ಬಹಿಷ್ಕಾರ ಬ್ಯಾನರ್ ಹಿಡಿದು ನಿಲ್ಲುವಂತೆ ಮಾಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲೇ ಬರುವ ಮುಂಡಾಜೆಗೆ ಸಾಗುವಾಗ ಸೀಟು ಎಂಬಲ್ಲಿಂದ ಕೊಡಂಗೆ, ಮಿತ್ತೊಟ್ಟು, ಮೂಲಾರು ಸಾಗಲು ಸೂಕ್ತ ರಸ್ತೆಗಳಿಲ್ಲ. ಈ ಪ್ರದೇಶದಲ್ಲಿ ಮಳೆಗಾಲದಲ್ಲಿ ದ್ವಿಚಕ್ರ ಬಿಡಿ, ನಾಲ್ಕು ಚಕ್ರದ ವಾಹನ ಸಂಚರಿಸದಷ್ಟು ಕೆಸರುಮಯ. ೨೦೦ಕ್ಕೂ ಮನೆಗಳು ೬೦೦ ಕ್ಕೂ ಅಽಕ ಜನಸಂಖ್ಯೆ ಇರುವ ಊರಿದು. ಮಿತ್ತೊಟ್ಟು ಬಲೊಂದರಲ್ಲೇ ೭೦ಕ್ಕೂ ಅಽಕ ಮನೆಗಳಿವೆ. ಇಲ್ಲಿಗೆ ನಾಲ್ವರು ಗ್ರಾ.ಪಂ. ಸದಸ್ಯರಿದ್ದಾರೆ.
ಎಲ್ಲರೂ ಬಿಜೆಪಿ ಪಕ್ಷದ ಬೆಂಬಲದಿಂದಲೇ ಗೆದ್ದುಬಂದವರು. ಇತ್ತ ೧೧ ಸದಸ್ಯರುಳ್ಳ ಮುಂಡಾಜೆ ಗ್ರಾ.ಪಂ. ೧೧ರಲ್ಲೂ ಬಿಜೆಪಿ ಬೆಂಬಲಿತ ಸದಸ್ಯರದೇ ಪಾರಮ್ಯ. ಕಳೆದ ೨೦ ವರ್ಷದಿಂದ ಇಟ್ಟ ಬೇಡಿಕೆ ಈಡೇರಿಲ್ಲ ಎಂದು ಬಿಜೆಪಿಗೆ ಮತ ನೀಡಿದ್ದೇವೆ. ಕಳೆದ ಬಾರಿ ಶಾಸಕರು ಸೀಟು ರಸ್ತೆ ಜನವರಿ ಒಳಗಾಗಿ ಶಿಲಾನ್ಯಾಸ ಮಾಡುವುದಾಗಿ ಹೇಳಿದ್ದರು. ಆದರೆ ನಮಗೆ ರಸ್ತೆಯ ಅಭಿವೃದ್ಧಿಗೆ ನ್ಯಾಯ ಸಿಕ್ಕಿಲ್ಲ ಎಂದು ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ.
ಹಾಗಾಗಿ ಕಾದು ನೋಡುವ ತಾಳ್ಮೆ ಕಳೆದುಕೊಂಡ ಮಿತ್ತೊಟ್ಟು ನಿವಾಸಿಗಳು ಫೆ.೨೫ರದು ಸಂಜೆ ಚುನಾವಣಾ ‘ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದಾರೆ. ಈಬಾರಿಯಂತು ರಸ್ತೆಯಾಗದೆ ಯಾವುದೇ ಆಮಿಷಕ್ಕೆ ಒಳಗಾಗುವುದಿಲ್ಲ. ಮತ ಬೇಕಾದರೆ ಮುಂದಿನ ಚುನಾವಣೆಗೆ ಮುನ್ನ ರಸ್ತೆ ನಿರ್ಮಿಸಿ, ಇಲ್ಲವೇ ಇತ್ತ ಮತ ಕೇಳಲು ಬರಲೇ ಬೇಡಿ ಎಂಬ ಹಟಕ್ಕೆ ಬಿದ್ದಿದ್ದಾರೆ.
ಬ್ಯಾನರ್ ನಲ್ಲಿ ಏನಿದೆ.? ಪಂಚಾಯತ್ ಸದಸ್ಯರ ನಿರ್ಲಕ್ಷ್ಯ ನಮಗೆ ಅನುಮಾನಕ್ಕೆ ಎಡೆಮಾಡಿದೆ. ಆದುದರಿಂದ ಮುಂದಿನ ಚುನಾವಣೆ ನಡೆಯುವ ಸಂದರ್ಭದಲ್ಲಿ ನ್ಮಮ ಬಲಿನಲ್ಲಿ ಯಾವುದೇ ರೀತಿಯ ಚುನವಣಾ ಪ್ರಚಾರ ನಡೆಸಬಾರದು. ಚುನವಣಾ ಕಾರಣದಲ್ಲಿ ರಾಜಕೀಯ ಕಾರ್ಯಕ್ರಮ ಮಾಡಬಾರದು. ರಸ್ತೆ ಸಂಪೂರ್ಣ ದುರಸ್ತಿಯಾಗುವವರೆಗೆ ಯಾವುದೇ ಮನವೊಲಿಕೆ, ರಾಜಿ ಸಂಧಾನಗಳಿಗೆ ಅವಕಾಶವಿಲ್ಲ ಎಂದು ಸ್ಪಷ್ಟವಾಗಿ ಬ್ಯಾನರ್ನಲ್ಲಿ ತಿಳಿಸಲಾಗಿದೆ.
ನಮಗೆ ಭರವಸೆ ಬೇಡ ರಸ್ತೆ ಬೇಕು. ನಾವು ಕಳೆದ ೧೫ ವರ್ಷದಿಂದ ಇಟ್ಟಿರುವ ಬೇಡಿಕೆ ಒಂದೇ ರಸ್ತೆ. ಅದನ್ನು ನಿರ್ಮಿಸಿ ಕೊಟ್ಟಿಲ್ಲ. ಶೀಟು ರಸ್ತೆಯಿಂದ ಕೊಡಂಗೆ, ಮಿತ್ತೊಟ್ಟು, ಮೂಲಾರು ಒಳಪಟ್ಟಂತೆ ರವಿ, ದಿಶಾಪಟವ‘ನ್, ಅಶ್ವಿನಿ, ಸುಮಾ ಎಂಬ ಮೂವರು ಸದಸ್ಯರಿದ್ದಾರೆ. ಆದರೂ ನಮ್ಮ ರಸ್ತೆ ಅಭಿವೃದ್ಧಿ ಬೇಡಿಕೆ ಈಡೇರಿಲ್ಲ. ಅದಕ್ಕಾಗಿ ಚುನಾವಣೆ ‘ಹಿಷ್ಕಾರದ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಮಿತ್ತೊಟ್ಟ ಬಲು ನಿವಾಸಿ ಮಂಜುನಾಥ್ ಹೇಳಿದ್ದಾರೆ.