Categories: ಮಂಗಳೂರು

ಬೆಳ್ತಂಗಡಿ: ಚರ್ಮಗಂಟು ಹಾಗೂ ಎಲೆಚುಕ್ಕಿ ರೋಗದ ಮಾಹಿತಿ ಸಭೆ

ಬೆಳ್ತಂಗಡಿ: ಚರ್ಮಗಂಟು ಹಾಗೂ ಎಲೆಚುಕ್ಕಿ ರೋಗ ಪೀಡಿತ ಪ್ರದೇಶಗಳ ಕುರಿತ ವಿವರವನ್ನು ಮುಂದಿನ ಒಂದು ವಾರದೊಳಗೆ ಆಯಾ ಗ್ರಾಮ ಪಂಚಾಯಿತಿ ಗಳ ಪಿ.ಡಿ.ಒ.ಗಳು ತಾಪಂ ಇ.ಒ.ಮೂಲಕ ಸಂಬಂಧಪಟ್ಟ ಇಲಾಖೆಗಳಿಗೆ ನೀಡುವಂತೆ ಶಾಸಕ ಹರೀಶ್ ಪೂಂಜ ಸೂಚಿಸಿದರು.

ಅವರು ಗುರುವಾರ ಲಾಯಿಲದ ಸಂಭ್ರಮ ಸಭಾಭವನದಲ್ಲಿ ನಡೆದ ಚರ್ಮಗಂಟು ಹಾಗೂ ಎಲೆಚುಕ್ಕಿ ರೋಗದ ಮಾಹಿತಿ ಸಭೆಯಲ್ಲಿ ಮಾತನಾಡಿದರು.

ಚರ್ಮಗಂಟು ರೋಗ ಕಂಡು ಬರುವ ಕಡೆಗಳಲ್ಲಿ ಪಂಚಾಯಿತಿ ವತಿಯಿಂದ ಫಾಗಿಂಗ್, ಸಹಕಾರ ಇಲಾಖೆ ಪ್ಯಾಕ್ಸ್, ಹಾಲು ಉತ್ಪಾದಕರ ಸಂಘಗಳ ಸಹಕಾರದ ಮೂಲಕ ಲಸಿಕೆ ಕಾರ್ಯಕ್ರಮಗಳನ್ನು ನೆರವೇರಿಸಿ ಕಾಯಿಲೆಯನ್ನು ನಿಯಂತ್ರಣಕ್ಕೆ ತರಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಎಲೆಚುಕ್ಕಿ ರೋಗದ ಮಾಹಿತಿ ಸಂಗ್ರಹಿಸಿ ರೋಗಪೀಡಿತ ತೋಟಗಳನ್ನು ಗುರುತಿಸಿ, ಸಾಮೂಹಿಕವಾಗಿ ಔಷಧಿ ಸಿಂಪಡಣೆ ಮಾಡಬೇಕು. ಅಗತ್ಯವಿದ್ದಲ್ಲಿ ದಾನಿಗಳ ಹಾಗೂ ರೈತರ ಸಹಕಾರದಲ್ಲಿ ಡ್ರೋನ್ ಮೂಲಕ ಔಷಧಿ ಸಿಂಪಡಿಸಲು ವ್ಯವಸ್ಥೆ ಮಾಡಲಾಗುವುದು. ಹಾಗೂ ಈ ಎರಡು ರೋಗಗಳ ಕುರಿತು ಪ್ರತಿ ತಿಂಗಳು ಸಭೆ ನಡೆಸಿ ವರದಿ ಸಂಗ್ರಹಿಸಲಾಗುವುದು ಎಂದರು.

335 ಪ್ರಕರಣ

ತಾಲೂಕು ಪಶುವೈದ್ಯಾಧಿಕಾರಿಆಡಳಿತ) ಡಾ. ಮಂಜಾ ನಾಯ್ಕ್ ,ಮಾತನಾಡಿ ತಾಲೂಕಿನಲ್ಲಿ 335 ಜಾನುವಾರುಗಳಿಗೆ ಚರ್ಮಗಂಟು ರೋಗ ತಗಲಿದ್ದು 4 ಜಾನುವಾರುಗಳು ಮೃತಪಟ್ಟಿವೆ. ಈಗಾಗಲೇ 11,000ಕ್ಕೂ ಮಿಕ್ಕಿ ರೋಗನಿರೋಧಕ ಚುಚ್ಚುಮದ್ದು ನೀಡಲಾಗಿದೆ. ಇತರ ಇಲಾಖೆಗಳ ಸಹಕಾರ ಪಡೆದು ತಾಲೂಕಿನಾದ್ಯಂತ ರೋಗನಿರೋಧಕ ಲಸಿಕೆ ನೀಡುವ ಕಾರ್ಯಕ್ರಮ ನಡೆಯುತ್ತಿದೆ. ಎಂದರು.

130 ಗ್ರಾಮಗಳಲ್ಲಿ ಪ್ರಕರಣ

ಉಭಯ ಜಿಲ್ಲೆಗಳ 130 ಗ್ರಾಮಗಳಲ್ಲಿ ಚರ್ಮಗಂಟು ರೋಗ ಕಂಡುಬಂದಿದ್ದು 650 ರಷ್ಟು ಪ್ರಕರಣಗಳು ವರದಿಯಾಗಿವೆ. ಇದೊಂದು ವೈರಲ್ ಕಾಯಿಲೆಯಾಗಿದ್ದು ಇದಕ್ಕೆ ಸೂಕ್ತ ಔಷಧಿ ಇಲ್ಲ. ಲಸಿಕೆ ಇದಕ್ಕೆ ಉತ್ತಮ ಪರಿಹಾರ. ಹಾಲು ಒಕ್ಕೂಟದಿಂದ ಪಶುಇಲಾಖೆಯ ಸಿಬ್ಬಂದಿಗಳ ಸಹಕಾರಕ್ಕೆ 35 ಡಿಪ್ಲೋಮಾ ಪದವೀಧರರನ್ನು ನೀಡಲಾಗುವುದು. ಒಂದು ವಾರದೊಳಗೆ ಸಮಾರೋಪಾದಿಯಲ್ಲಿ ಲಸಿಕೆ ಕಾರ್ಯಕ್ರಮ ನಡೆಸಲಾಗುವುದು ಎಂದು ಜಿಲ್ಲಾ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಮಧುಸೂಧನ ಕಾಮತ್ ಹೇಳಿದರು.

ಎಲೆಚುಕ್ಕಿ ರೋಗ ವ್ಯಾಪಕ

2019ರಲ್ಲಿ ಮಲವಂತಿಗೆಯ ಎಳನೀರಿನಲ್ಲಿ ಆರಂಭವಾದ ಎಲೆಚುಕ್ಕಿ ರೋಗ ಈಗ ತಾಲೂಕಿನ ನೆರಿಯ ಹಾಗೂ ಚಾರ್ಮಾಡಿ ಗಳಲ್ಲಿ ಹೊರತು ಪಡಿಸಿ ಇತರ ಕಡೆ ಅಲ್ಲಲ್ಲಿ ಕಂಡುಬರುತ್ತಿದೆ.ಒಮ್ಮೆ ಔಷಧಿ ಸಿಂಪಡಿಸಿದರೆ ಅದರ ಪರಿಣಾಮ 35 ದಿನ ಮಾತ್ರ ಇರುತ್ತದೆ. ಇದು ಹೆಚ್ಚಾಗಿ ಪೊಟಾಷ್ ಅಂಶ ಕಡಿಮೆ ಇರುವ, ತೇವಾಂಶ ಅಧಿಕ ಇರುವ ತೋಟಗಳಲ್ಲಿ ಕಂಡು ಬರುತ್ತದೆ.ಉತ್ತಮ ಬಿಸಿಲಿನ ವಾತಾವರಣ ಮೂಡಿದರೆ ರೋಗ ಹರಡುವುದು ಕಡಿಮೆಯಾಗುತ್ತದೆ. ಈಗಾಗಲೇ ತಾಲೂಕಿಗೆ ಔಷಧಿ ಸಿಂಪಡಣೆಗೆ 1.30 ಲಕ್ಷ ರೂ. ಅನುದಾನ ಬಿಡುಗಡೆ ಗೊಂಡಿದೆ.ರೋಗದ ಬಗ್ಗೆ ಗ್ರಾಮ ಮಟ್ಟದಲ್ಲಿ ಮಾಹಿತಿ ಸಭೆಗಳನ್ನು ಏರ್ಪಡಿಸಲಾಗುವುದು . ಇಲಾಖೆ ಸೂಚಿಸಿದ ಔಷಧಿಗಳನ್ನು ಮಾತ್ರ ಸಿಂಪಡಿಸಬೇಕು ಎಂದು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ಕೆ. ಎಸ್. ಹೇಳಿದರು.

ತಹಸೀಲ್ದಾರ್ ಪೃಥ್ವಿ ಸಾನಿಕಂ,ತಾಪಂ ಇಒ ಕುಸುಮಾಧರ ಬಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಂಜಿತ್ ಕುಮಾರ್, ಸಹಕಾರಿ ಇಲಾಖೆಯ ಅಧಿಕಾರಿ ಪ್ರತಿಮಾ,ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ. ಕೆ.ಚಂದ್ರಶೇಖರ ಭಟ್, ಪಶುವೈದ್ಯಾಧಿಕಾರಿ ಡಾ. ರವಿಕುಮಾರ್, ಪಿಡಿಒಗಳು ಉಪಸ್ಥಿತರಿದ್ದರು.ತಾಪಂ ಸಂಯೋಜಕ ಜಯಾನಂದ ಲಾಯಿಲ ಕಾರ್ಯಕ್ರಮ ನಿರೂಪಿಸಿದರು.

ತಕ್ಷಣ ಮಾಹಿತಿ ನೀಡಿ

ಬೆಳ್ತಂಗಡಿ ತಾಲೂಕಿನಲ್ಲಿ 61,000ಜಾನುವಾರುಗಳಿದ್ದು ಇಲ್ಲಿನ ಅನೇಕರು ಹೈನುಗಾರಿಕೆ ಮೂಲಕ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಉಭಯ ಜಿಲ್ಲೆಗಳಲ್ಲಿ ಬೆಳ್ತಂಗಡಿ ತಾಲೂಕು ಹಾಲು ಒಕ್ಕೂಟಕ್ಕೆ ಅತ್ಯಧಿಕ ಹಾಲನ್ನು ಪೂರೈಸುತ್ತದೆ. ತಾಲೂಕಿನ ಎಲ್ಲಾ ಇಲಾಖೆಗಳ ಸಹಕಾರದಲ್ಲಿ ರೋಗಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗುವುದು. ಚರ್ಮ ಗಂಟು ರೋಗದಿಂದ ಕರುಗಳು ಮೃತಪಟ್ಟರೆ 5,000 ರೂ, ಹಸು ಮೃತ ಪಟ್ಟರೆ 20, 000ರೂ. ಉಳುವ ಎತ್ತು ಕೋಣ ಮೃತಪಟ್ಟರೆ 30,000 30,000 ಪರಿಹಾರ ಧನ ಸಿಗುತ್ತದೆ. ಜಾನುವಾರುಗಳು ಮೃತಪಟ್ಟರೆ ತಕ್ಷಣ ಸಂಬಂಧ ಪಟ್ಟ ಇಲಾಖೆಗೆ ಮಾಹಿತಿ ನೀಡಬೇಕು.

-ಹರೀಶ್ ಪೂಂಜ.

Gayathri SG

Recent Posts

ವಿಜೃಂಭಣೆಯಿಂದ ಜರುಗಿದ ಶ್ರೀ ಅವಿಜ್ಞ ಸಾಯಿಬಾಬಾ ಪ್ರತಿಷ್ಠಾಪನಾ ಮಹೋತ್ಸವ

ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಹೋಬಳಿಯ ಸರಗೂರು ಗ್ರಾಮದಲ್ಲಿ ಶ್ರೀ ಅವಿಜ್ಞ ಸಾಯಿ ಕ್ಷೇತ್ರದಲ್ಲಿ ಶ್ರೀ ಅವಿಜ್ಞ…

7 hours ago

ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿ: 40 ಜನರ ರಕ್ಷಣೆ

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಗ್ರಾಮದ ಮೂಡಂಗಿಯ ಸಮೀಪ  ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿಯಾದ ಘಟನೆ ನಡೆದಿದೆ. 

7 hours ago

ಮೋದಿಗೆ ಯಾರೂ ಮತ ಹಾಕಬೇಡಿ ಎಂದಿದ್ದ ಶಿಕ್ಷಕ ಅರೆಸ್ಟ್

ಬಿಹಾರದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಮೋದಿಗೆ ಯಾರೂ ಮತ ಹಾಕಬೇಡಿ ಎಂದು ಮಕ್ಕಳಿಗೆ ಹೇಳಿದ್ದಕ್ಕೆ ಶಿಕ್ಷಕನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

8 hours ago

ಮೇ 24ರಿಂದ ಮೈಸೂರಿನಲ್ಲಿ ಮಾವು, ಹಲಸು ಮೇಳ

ಪ್ರತಿವರ್ಷದಂತೆ ಈ ಬಾರಿಯೂ ಮೈಸೂರು ನಗರದಲ್ಲಿ  ಒಂದೇ ಸೂರಿನಡಿ ವಿವಿಧ ಮಾವಿನ ತಳಿಯ ಹಣ್ಣು, ಹಲಸಿನ ಹಣ್ಣಿನ ರುಚಿ ಸವಿಯಲು…

8 hours ago

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆ ಸಾವು

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ  ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಜಂಗಲ್ ಟ್ರಯಲ್ಸ್ ರೆಸಾರ್ಟ್​ನಲ್ಲಿ ನಡೆದಿದೆ. 

9 hours ago

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಕೆರೆಯಲ್ಲಿ ಮುಳುಗಿ ಮೃತ್ಯು

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಸದ್ಯಸರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಎಂಬಲ್ಲಿ…

9 hours ago