ಬೆಳ್ತಂಗಡಿ: ದಿನಾಂಕ: 23ನೇ ಡಿಸೆಂಬರ್ 2022 ರ ಗುರುವಾರದಂದು ದಯಾ ವಿಶೇಷ ಶಾಲೆಯಲ್ಲಿ ಕ್ರಿಸ್ ಮಸ್ ಹಬ್ಬವನ್ನು ಆಚರಿಸಲಾಯಿತ್ತು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಕಪುಚಿನ್ ಕೃಷಿಕ್ ಸೇವಾ ಕೇಂದ್ರದ ನಿರ್ದೇಶಕರು ಹಾಗೂ ಸಂಚಾಲಕರು ಆದ ವಂ. ಫಾ. ವಿನೋದ್ ಮಸ್ಕರೇನಸ್ ರವರು ಹಾಗೂ ಸಹ ನಿರ್ದೇಶಕರಾದ ವಂ. ಫಾ. ರೋಹನ್ ಲೋಬೋರವರು ಹಾಗೂ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಧಾನಿಗಳಾದ ವೀರ ಕೊರೆರೊ ರವರು ಮತ್ತು ಸುಪ್ರೀತ್ ಪ್ರಭು ಹಾಗೂ ಮುಖ್ಯ ಶಿಕ್ಷಕಿ ದಿವ್ಯ ಟಿ.ವಿ. ಮತ್ತು ಕ್ರಿಸ್ ಮಸ್ ಆಚರಣೆಯ ಕೇಂದ್ರ ಬಿಂದು ಆದ ಸಂತಕ್ಲಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಂ. ಫಾ. ವಿನೋದ್ ಮಸ್ಕರೇನ್ಹಸ್ ರವರು ಕ್ರಿಸ್ತನ ಜನನ ಹಾಗೂ ಅವರ ಸರಳ ಜೀವನದ ಕುರಿತು ವಿಸ್ತರವಾಗಿ ತಿಳಿಸಿದರು, ಯೇಸು ಕ್ರಿಸ್ತರವರು ಬೆತ್ಲೇಹೆಮಿನಲ್ಲಿ ಜನಿಸಿದರು, ಅವರು ಬಡ ಜನರ ಮತ್ತು ಕಷ್ಟದಲ್ಲಿ ಇರುವ ಜನರ ಸೇವೆ ಮಾಡುತ್ತಾ ಬಂದರು. ಇಂದು ನಿಜವಾದ ಸೇವೆ ಅಂದರೆ ಅದು ವಿಶೇಷ ಮಕ್ಕಳಿಗೆ ಮಾಡುವ ಸೇವೆಯಾಗಿದೆ ಎಂದು ತಿಳಿಸಿದರು. ಯೇಸುಕ್ರಿಸ್ತರವರು ಸಲ್ಲಿಸಿದ ಸೇವೆ ಅಪಾರವಾದದ್ದು. ಯೇಸು ಕ್ರಿಸ್ತರವರ ಹುಟ್ಟು ಹಬ್ಬವನ್ನು ಎಲ್ಲೆಡೆ ಆಚರಿಸುವುದನ್ನು ನಾವು ಕಾಣಬವುದು ಎಂದು ತಿಳಿಸಿದರು. ಕ್ರಿಸ್ ಮಸ್ ಹಬ್ಬ ಎಂದರೆ ಪ್ರೀತಿ, ಸಾಮರಸ್ಯ, ಶಾಂತಿ ಮತ್ತು ಸಹೋದರತ್ವದ ಸಂದೇಶವನ್ನು ಸಾರುವ ಹಬ್ಬವಾಗಿದೆ ಎಂದು ತಿಳಿಸಿದರು. ಕೇಕ್ ಕತ್ತರಿಸಿ ಸಿಹಿಯನ್ನು ಹಂಚುವುದರ ಮೂಲಕ ಕ್ರಿಸ್ ಮಸ್ ಹಬ್ಬದ ಶುಭವನ್ನು ಕೊರಿದರು.
ಮುಖ್ಯ ಅತಿಥಿಯಾದ ಸುಪ್ರೀತ್ ಪ್ರಭುರವರು ಮಕ್ಕಳ ಬಗೆಗಿನ ಪ್ರೀತಿಯನ್ನು ವ್ಯೆಕ್ತಪಡಿಸಿದರು ಕ್ರಿಸ್ ಮಸ್ ಸಂದೇಶವನ್ನು ಕ್ಷಮೆ, ಪ್ರೀತಿ, ಸಹನೆ, ಸಹಬಾಳ್ವೆಯೇ ಜೀವನದ ಜೀವನದ ಉಸಿರು ಎಂಬ ಸಂದೇಶವನ್ನು ನೀಡಿರುವ ಯೇಸುಕ್ರಿಸ್ತರ ಜನ್ಮದಿನದ ಶುಭಾಷಯಗಳನ್ನು ಕೋರಿದರು.
ಶಾಲಾ ವಿಶೇಷ ಮಕ್ಕಳು ಯೇಸು ಕ್ರಿಸ್ತನ ಜನನವನ್ನು ರೂಪಕ ನೃತ್ಯದ ಮೂಲಕ ಪ್ರದರ್ಶಿಸಿದರು. ಅನೇಕ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತ್ತು. ಕಾರ್ಯಾಕ್ರಮದ ನಿರೂಪಣೆಯನ್ನು ಸಹ ಶಿಕ್ಷಕಿಯಾದ ಅಶ್ವನಿಯವರು ನೆಡೆಸಿ, ಧನ್ಯ ಟಿ.ವಿ. ರವರು ಧನ್ಯವಾದಗಳನ್ನು ಕೊರಿದರು.