ಬೆಳ್ತಂಗಡಿ: ಜೂ. 29 ರಂದು ರಾಜ್ಯ ಪಶುಸಂಗೋಪನಾ ಸಚಿವರಾದ ಪ್ರಭು ಚವಾಣ್ ರವರು ಕೊಯ್ಲ ಫಾರ್ಮ್ ನ ಬಳಿ 100 ಎಕರೆ ಜಮೀನಿನಲ್ಲಿ ಸ್ಥಾಪಿಸಲು ಉದ್ದೇಶಿಸಿದ ಸರ್ಕಾರಿ ಗೋಶಾಲೆಗೆ ಶಂಕುಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಬಿ ಜೆ ಪಿ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ , ಪುತ್ತೂರು ವಿಧಾನಸಭಾ ಶಾಸಕರಾದ ಸಂಜೀವ ಮಠಂದೂರು ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪುತ್ತೂರು ಜಿಲ್ಲಾ ವಿ ಹಿಂ ಪ ಕಾರ್ಯಾಧ್ಯಕ್ಷರೂ ನಂದಗೋಕುಲ ಗೋಶಾಲೆಯ ಟ್ತಸ್ಟಿಗಳೂ ಆದ ಭಾಸ್ಕರ ಧರ್ಮಸ್ಥಳರವರು ಸಚಿವರನ್ನು ಭೇಟಿ ಮಾಡಿ ನಂದಗೋಕುಲ ಗೋಶಾಲೆಯ ಪ್ರಗತಿಯ ಬಗ್ಗೆ ವಿವರಿಸಿದರು.
ಸಚಿವರು ಗೋಶಾಲೆಯ ವಿವರಗಳನ್ನು ಪಡೆದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ನಂದಗೋಕುಲ ಗೋಶಾಲೆಗೆ ತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಶುಸಂರಕ್ಷಣಾ ಸಮಿತಿಯ ಸದಸ್ಯರಾದ ದಿನೇಶ್ ಪೈ, ರಾಮಕುಂಜ ಪಂಚಾಯತ್ ಉಪಾಧ್ಯಕ್ಷರಾದ ಪ್ರಶಾಂತ್, ಮಾಜಿ ಜಿ.ಪಂ ಸದಸ್ಯರಾದ ಭಾಸ್ಕರ್ ಇಚಿಲಂಪಾಡಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.