News Karnataka Kannada
Monday, April 29 2024
ಮಂಗಳೂರು

ಬಂಟ್ವಾಳ: ಯಕ್ಷ ಮಿತ್ರ ಮಂಡಳಿ ವತಿಯಿಂದ ಸನ್ಮಾನ ಕಾರ್ಯಕ್ರಮ

Yaksha Mitra Mandali conducts felicitation programme
Photo Credit : By Author

ಬಂಟ್ವಾಳ: ಬಿ.ಸಿ.ರೋಡಿನ ಕೈಕಂಬ ಯಕ್ಷ ಮಿತ್ರರು ಆಶ್ರಯದಲ್ಲಿ ಭಾನುವಾರ ರಾತ್ರಿ ಬಿ.ಸಿ.ರೋಡಿನ ಹೊಟೇಲ್  ರಂಗೋಲಿ ಹೊರಾಂಗಣದಲ್ಲಿ 14ನೇ ವರ್ಷದ ಯಕ್ಷಗಾನ ಪ್ರದರ್ಶನದಲ್ಲಿ  ಹಿಮ್ಮೇಳ ಕಲಾವಿದ ದೇಲಂತಮಜಲು ಸುಬ್ರಹ್ಮಣ್ಣ ಭಟ್‌ ಅವರನ್ನು‌ ಸನ್ಮಾನಿಸಲಾಯಿತು.

ಬಿ.ಸಿ.ರೋಡಿನ ಸಿವಿಲ್ ಇಂಜಿನಿಯರ್ ಸುಧೀರ್ ಶೆಟ್ಟಿ ಅವರು ಖ್ಯಾತ ಚೆಂಡೆ ಕಲಾವಿದ ದೇಲಂತಮಜಲು ಸುಬ್ರಹ್ಮಣ್ಣ ಭಟ್‌ ಅವರನ್ನು ಸನ್ಮಾನಿಸಿದರು.

ನಿವೃತ್ತ ಶಿಕ್ಷಕ ಸಂಕಪ್ಪ ಶೆಟ್ಟಿಅಭಿನಂದನಾ ಭಾಷಣ ಗೈದು ಯಕ್ಷಮಿತ್ರರು ಇದೇ ಮೊದಲಿಗೆ ಹಿಮ್ಮೇಳ ಕಲಾವಿದರನ್ನು‌ ಗುರುತಿಸಿ‌ ಸನ್ಮಾನಿಸಿರುವುದು‌ ಅಭಿನಂದನೀಯವಾಗಿದೆ. ದೇಲಂತಮಜಲು ಸುಬ್ರಹ್ಮಣ್ಣ ಭಟ್‌ ಅವರು ಕಳೆದ ೪೦ ವರ್ಷಗಳಿಂದ ಯಕ್ಷಗಾನ ರಂಗಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ.ಹಿಮ್ಮೇಳ ಕಲಾವಿದ  ಮಾತ್ರವಲ್ಲ ನಾಟ್ಯದಲ್ಲು ಪ್ರವೀಣರು ಆಗಿದ್ದಾರೆ ಎಂದರು.

ಹಿರಿಯ ಕಲಾವಿದ ಗೋವಿಂದ ಭಟ್ ,ಯಕ್ಷಮಿತ್ರರು ಸದಸ್ಯರಾದ ಸದಾಶಿವ ಕೈಕಂಬ,ಶಂಕರ ಶೆಟ್ಟಿ,ವಿಶ್ವನಾಥ,ಭುಜಂಗ ಸಾಲಿಯಾನ್,ಸದಾನಂದ ಶೆಟ್ಟಿ ರಂಗೋಲಿ ವೇದಿಕೆಯಲ್ಲಿದ್ದರು. ಕಿಶೋರ್ ಭಂಡಾರಿ‌ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಹನುಮಗಿರಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿಯಿಂದ “ಭಾರತ ಜನನಿ”ಎಂಬ ಯಕ್ಷಗಾನ ಬಯಲಾಟವು ನಡೆಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು