ಬಂಟ್ವಾಳ: ಹಿಂದು ಜಾಗರಣ ವೇದಿಕೆ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಕಾರಿಂಜದಲ್ಲಿ ಕರಾವಳಿಯ ಸ್ವಾಮಿಜೀಗಳ ಆಶೀರ್ವಾದ ದೇವಸ್ಥಾನದ ಅಡಳಿತ ಮಂಡಲಿಯ ಸಹಕರದಿಂದ ಶಿವ ಮಾಲಾಧಾರಣೆ ಮಾಡುವುದರ ಮೂಲಕ ಶಿವರಾತ್ರಿಯಂದು ಶಿವ ಜಾಗರಣೆ ನಡೆಸಲಾಗುತ್ತಿದೆ.
ದಕ್ಷಿಣ ಭಾರತ ಭೂಕೈಲಾಸ ಎಂದು ಹೆಸರುವಾಸಿಯಾಗಿರುವ ಶಿವಪಾರ್ವತಿಯರು ಬೃಹತ್ ಬಂಡೆಗಳ ಮೇಲೆ ನೆಲೆ ನಿಂತಿರುವ ಶ್ರೀ ಕ್ಷೇತ್ರ ಕಾರಿಂಜದಲ್ಲಿ ಹಿಂದು ಜಾಗರಣ ವೇದಿಕೆ ನೇತೃತ್ವದಲ್ಲಿ ದೇವಸ್ಥಾನದ ಸುತ್ತಲೂ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಯ ವಿರುದ್ದ ಬೃಹತ್ ಪ್ರತಿಭಟನೆ ನಡೆಸಿ ತಾತ್ಕಾಲಿಕ ಗಣಿಗಾರಿಕೆ ನಿಂತಿದ್ದರೂ, ಅದು ಶಾಶ್ವತವಾಗಿ ನಿಲ್ಲ ಬೇಕೆಂಬ ದೃಷ್ಟಿಯಿಂದ ಕಳೆದ ವರ್ಷದಿಂದ ಶ್ರೀ ಕ್ಷೇತ್ರದಲ್ಲಿ ಕರವಾಳಿಯ ಸ್ವಾಮಿಜೀಗಳ ಆಶೀರ್ವಾದ ದೇವಸ್ಥಾನದ ಅಡಳಿತ ಮಂಡಳಿಯ ಸಹಕಾರದಿಂದ ಶಿವ ಮಾಲಾಧಾರಣೆ ಮಾಡುವುದರ ಮೂಲಕ ಶಿವರಾತ್ರಿಯಂದು ಶಿವ ಜಾಗರಣೆ ನಡೆಸಲಾಗುತ್ತಿದೆ.
ಮೂರು ದಿನಗಳ ಕಾಲ 16ಗುರುವಾರ ಭಕ್ತರು ಮಾಲಾಧಾರಣೆ ಮಾಡಿಕೊಂಡು ಬೆಳಿಗ್ಗೆ ಸಂಜೆ 108 ಬಾರಿ ಓಂ ನಮಃ ಶಿವಾಯ ಜಪ ಮಾಡುವುದರ ಮೂಲಕ ಶನಿವಾರ ಸಂಜೆ 4ಗಂಟೆಗೆ ವಗ್ಗ ಜಂಕ್ಷನ್ ನಲ್ಲಿ ಮಾಲಾಧಾರಿಗಳು ಸೇರಿ ಬೃಹತ್ ಭಕ್ತರ ಸಮೂಹದೊಂದಿಗೆ ಸಂಕೀರ್ತನ ಯಾತ್ರೆ ಮೂಲಕ ದೇವಸ್ಥಾನಕ್ಕೆ ಸಾಗಿ ಪವಿತ್ರ ನದಿ ಸ್ಥಾನ ಮಾಡಿ ದೇವ ದರ್ಶನ ಪಡೆದು ಶಿವಜಾಗರಣ ಮಾಡಿ ಬೆಳಿಗ್ಗೆ ಮಾಲೆ ವಿಸರ್ಜನೆ ಮಾಡಲಾಗುವುದು.ರಾತ್ರಿ ವಿವಿಧ ದೇವರ ಭಕ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಜಿಲ್ಲೆಯ ಪುತ್ತೂರು, ಸುಳ್ಯ,ವೇಣೂರು, ಈಶ್ವರಮಂಗಲ,ವಿಟ್ಲ ಭಾಗದಿಂದ ಮಾಲಾಧಾರಿಗಳು ಶಿವ ಜಾಗರಣೆ ಮಾಡಲಿದ್ದರೆ ಎಂದು ತಿಳಿದು ಬಂದಿದೆ.
ಮಾಲಾಧಾರಣೆ ಮಾಡಲಿರುವ ಭಕ್ತರು ಹಿಂದು ಜಾಗರಣ ವೇದಿಕೆ ಬಂಟ್ವಾಳ ತಾಲೂಕು ಸಂಚಾಲಕ ತೀರುಲೇಶ್ ಬೆಳ್ಳೂರುರನ್ನು 9964339978 ಅಥವಾ ಸಹ ಸಂಚಾಲಕರ ಸಂತೋಷ್ ಸುರ್ವಣನಾಡು:9591659660 ರನ್ನು ಸಂಪರ್ಕಿಸಬಹುದು ಎಂದು ಹಿಂ.ಜಾ.ವೇದಿಕೆ ಪ್ರಕಟಣೆ ತಿಳಿಸಿದೆ