News Karnataka Kannada
Tuesday, April 30 2024
ಮಂಗಳೂರು

ಬಂಟ್ವಾಳ: ಶ್ರೀ ಕ್ಷೇತ್ರ ಕಾರಿಂಜದಲ್ಲಿ ಶಿವರಾತ್ರಿಯಂದು ಶಿವ ಜಾಗರಣೆ

Karinja
Photo Credit : By Author

ಬಂಟ್ವಾಳ: ಹಿಂದು ಜಾಗರಣ ವೇದಿಕೆ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಕಾರಿಂಜದಲ್ಲಿ ಕರಾವಳಿಯ ಸ್ವಾಮಿಜೀಗಳ ಆಶೀರ್ವಾದ ದೇವಸ್ಥಾನದ ಅಡಳಿತ ಮಂಡಲಿಯ ಸಹಕರದಿಂದ ಶಿವ ಮಾಲಾಧಾರಣೆ ಮಾಡುವುದರ ಮೂಲಕ ಶಿವರಾತ್ರಿಯಂದು ಶಿವ ಜಾಗರಣೆ ನಡೆಸಲಾಗುತ್ತಿದೆ.

ದಕ್ಷಿಣ ಭಾರತ ಭೂಕೈಲಾಸ ಎಂದು ಹೆಸರುವಾಸಿಯಾಗಿರುವ ಶಿವಪಾರ್ವತಿಯರು ಬೃಹತ್ ಬಂಡೆಗಳ ಮೇಲೆ ನೆಲೆ ನಿಂತಿರುವ ಶ್ರೀ ಕ್ಷೇತ್ರ ಕಾರಿಂಜದಲ್ಲಿ ಹಿಂದು ಜಾಗರಣ ವೇದಿಕೆ ನೇತೃತ್ವದಲ್ಲಿ ದೇವಸ್ಥಾನದ ಸುತ್ತಲೂ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಯ ವಿರುದ್ದ ಬೃಹತ್ ಪ್ರತಿಭಟನೆ ನಡೆಸಿ ತಾತ್ಕಾಲಿಕ ಗಣಿಗಾರಿಕೆ ನಿಂತಿದ್ದರೂ, ಅದು ಶಾಶ್ವತವಾಗಿ ನಿಲ್ಲ ಬೇಕೆಂಬ ದೃಷ್ಟಿಯಿಂದ ಕಳೆದ ವರ್ಷದಿಂದ ಶ್ರೀ ಕ್ಷೇತ್ರದಲ್ಲಿ ಕರವಾಳಿಯ ಸ್ವಾಮಿಜೀಗಳ ಆಶೀರ್ವಾದ ದೇವಸ್ಥಾನದ ಅಡಳಿತ ಮಂಡಳಿಯ ಸಹಕಾರದಿಂದ ಶಿವ ಮಾಲಾಧಾರಣೆ ಮಾಡುವುದರ ಮೂಲಕ ಶಿವರಾತ್ರಿಯಂದು ಶಿವ ಜಾಗರಣೆ ನಡೆಸಲಾಗುತ್ತಿದೆ.

ಮೂರು ದಿನಗಳ ಕಾಲ 16ಗುರುವಾರ ಭಕ್ತರು ಮಾಲಾಧಾರಣೆ ಮಾಡಿಕೊಂಡು ಬೆಳಿಗ್ಗೆ ಸಂಜೆ 108 ಬಾರಿ ಓಂ ನಮಃ ಶಿವಾಯ ಜಪ ಮಾಡುವುದರ ಮೂಲಕ ಶನಿವಾರ ಸಂಜೆ 4ಗಂಟೆಗೆ ವಗ್ಗ ಜಂಕ್ಷನ್ ನಲ್ಲಿ ಮಾಲಾಧಾರಿಗಳು ಸೇರಿ ಬೃಹತ್ ಭಕ್ತರ ಸಮೂಹದೊಂದಿಗೆ ಸಂಕೀರ್ತನ ಯಾತ್ರೆ ಮೂಲಕ ದೇವಸ್ಥಾನಕ್ಕೆ ಸಾಗಿ ಪವಿತ್ರ ನದಿ ಸ್ಥಾನ ಮಾಡಿ ದೇವ ದರ್ಶನ ಪಡೆದು ಶಿವಜಾಗರಣ ಮಾಡಿ ಬೆಳಿಗ್ಗೆ ಮಾಲೆ ವಿಸರ್ಜನೆ ಮಾಡಲಾಗುವುದು.ರಾತ್ರಿ ವಿವಿಧ ದೇವರ ಭಕ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಜಿಲ್ಲೆಯ ಪುತ್ತೂರು, ಸುಳ್ಯ,ವೇಣೂರು, ಈಶ್ವರಮಂಗಲ,ವಿಟ್ಲ ಭಾಗದಿಂದ ಮಾಲಾಧಾರಿಗಳು ಶಿವ ಜಾಗರಣೆ ಮಾಡಲಿದ್ದರೆ ಎಂದು ತಿಳಿದು ಬಂದಿದೆ.

ಮಾಲಾಧಾರಣೆ ಮಾಡಲಿರುವ ಭಕ್ತರು ಹಿಂದು ಜಾಗರಣ ವೇದಿಕೆ ಬಂಟ್ವಾಳ ತಾಲೂಕು ಸಂಚಾಲಕ ತೀರುಲೇಶ್ ಬೆಳ್ಳೂರುರನ್ನು 9964339978 ಅಥವಾ ಸಹ ಸಂಚಾಲಕರ ಸಂತೋಷ್ ಸುರ್ವಣನಾಡು:9591659660 ರನ್ನು ಸಂಪರ್ಕಿಸಬಹುದು ಎಂದು ಹಿಂ.ಜಾ.ವೇದಿಕೆ ಪ್ರಕಟಣೆ ತಿಳಿಸಿದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು