ಬಂಟ್ವಾಳ: ತಾಲೂಕಿನಿಂದ ಅಮರನಾಥ ಯಾತ್ರೆಗೆ ತೆರಳಿದ್ದ ಬಂಟ್ವಾಳದ 27 ಮಂದಿ ಯಾತ್ರಾರ್ಥಿಗಳ ತಂಡ ಸೋಮವಾರ ಬೆಳಿಗ್ಗೆ ಮಂಗಳೂರಿಗೆ ಸುರಕ್ಷಿತವಾಗಿ ತಲುಪಿದ್ದಾರೆ.
ಇವರು ಜಮ್ಮುವಿಗೆ ತಲುಪಿದ ದಿನದಂದೇ ಅಮರನಾಥದಲ್ಲಿ ಮೇಘ ಸ್ಪೋಟ ಉಂಟಾಗಿಹಲವಾರು ಸಾವು ನೋವು ಉಂಟಾಗಿದ್ದು, ಹಲವರು ಕಣ್ಮರೆಯಾಗಿದ್ದರು.
ಘಟನೆ ಹಿನ್ನೆಲೆಯಲ್ಲಿ ಎರಡು ದಿನ ತಡವಾಗಿ ದರ್ಶನ ಭಾಗ್ಯ ದೊರಕಿದ್ದು, ಸೈನಿಕರ ನೆರವಿನೊಂದಿಗೆ ತಂಡ ಅಮರನಾಥ ಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿದೆ, ಬಳಿಕ ವೈಷ್ಣೋದೇವಿ ದರ್ಶನ ಮುಗಿಸಿ ಇಂದು ಜಿಲ್ಲೆಗೆ ವಾಪಾಸಾಗಿದ್ದೇವೆ ಎಂದು ತಂಡದ ಸುರೇಶ್ ಕೋಟ್ಯಾನ್ ತಿಳಿಸಿದ್ದಾರೆ.