Categories: ಮಂಗಳೂರು

ಬಂಟ್ವಾಳ: ಇಂದು ೧೦೨.೫ ಕೋ.ರೂ.ಗಳ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಿರುವ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ಲೋಕೋಪಯೋಗಿ ಹಾಗೂ ಪಂಚಾಯತ್‌ರಾಜ್-ಗ್ರಾಮೀಣಾಭಿವೃದ್ಧಿ ಇಲಾಖೆಯ ಮೂಲಕ ಬಂಟ್ವಾಳ ಕ್ಷೇತ್ರದ ೫೬ ಗ್ರಾಮಗಳ ೨೫೩ ಗ್ರಾಮೀಣ ರಸ್ತೆಗಳ ಅಭಿವೃದ್ಧಿಯ ಯೋಗ ದೊರಕಿದ್ದು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಇಂದು ೧೦೨.೫ ಕೋ.ರೂ.ಗಳ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಿದ್ದಾರೆ.

ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ೨೮.೫ ಕೋ.ರೂ.ವೆಚ್ಚದಲ್ಲಿ ತೀರಾ ಗ್ರಾಮೀಣ ೨೩೧ ಕಾಮಗಾರಿಗಳು ಹಾಗೂ ಲೋಕೋಪಯೋಗಿ ಇಲಾಖೆಯ ೭೩.೭೫ ಕೋ.ರೂ.ಗಳ ೨೨ ಪ್ರಮುಖ ರಸ್ತೆಗಳ ಕಾಮಗಾರಿಗಳಿಗೆ ಶಿಲಾನ್ಯಾಸ ನಡೆಯಲಿದೆ. ಆ. ೨೩ರ ಬೆಳಗ್ಗೆ ೭ಕ್ಕೆ ಪೊಳಲಿ ದೇವಸ್ಥಾನದಲ್ಲಿ ವಿಶೇಷ ಪೂಜೆಯ ಬಳಿಕ ಶಿಲಾನ್ಯಾಸ ಕಾಮಗಾರಿ ಆರಂಭಗೊಳ್ಳಲಿದ್ದು, ಬಳಿಕ ದಿನವಿಡೀ ಕ್ಷೇತ್ರದ ವಿವಿಧ ಭಾಗಗಳಲ್ಲಿ ಆಯಾಯಾ ರಸ್ತೆಗಳಿಗೆ ಶಿಲಾನ್ಯಾಸ ನಡೆಯಲಿದೆ.

ಪೊಳಲಿಯಲ್ಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಹಿಂಬದಿ ಚರಂಡಿ ನಿರ್ಮಾಣಕ್ಕೆ ೪೦ ಲಕ್ಷ ರೂ., ಶ್ರೀ ಪೊಳಲಿ ರಾಮಕೃಷ್ಣ ತಪೋವನ ರಸ್ತೆ ಅಭಿವೃದ್ಧಿಗೆ ೧೦ ಲಕ್ಷ ರೂ. ಹಾಗೂ ಬಂಟ್ವಾಳ ಕ್ಷೇತ್ರದ ೫೬ ಗ್ರಾಮಗಳ ೨೩೧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಗ್ರಾಮೀಣಾಭಿವೃದ್ಧಿ ಇಲಾಖೆಯ ೨೮ ಕೋ.ರೂ.ಗಳ ಅನುದಾನದಲ್ಲಿ ಚಾಲನೆ ದೊರಕಲಿದೆ.

ಅರಳ ದ್ವಾರದ ಬಳಿ ಮೂಲರಪಟ್ಣ-ಸೊರ್ನಾಡು ರಸ್ತೆಗೆ ೪.೧೦ ಕೋ.ರೂ., ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನ ರಸ್ತೆಗೆ ೧.೨೫ ಕೋ.ರೂ., ಅಣ್ಣಳಿಕೆಯಲ್ಲಿ ರಾಯಿ-ಅಣ್ಣಳಿಕೆ ರಸ್ತೆಗೆ ೨ ಕೋ.ರೂ., ಮೈಂದಾಳದಲ್ಲಿ ಮಣಿಹಳ್ಳ-ಸರಪಾಡಿ-ಬಜ ರಸ್ತೆಗೆ ೭ ಕೋ.ರೂ., ಸರಪಾಡಿಯಲ್ಲಿ ಸರಪಾಡಿ-ಪೆರ್ಲ-ಬೀಯಪಾದೆ ರಸ್ತೆಗೆ ೩ ಕೋ.ರೂ., ಮುಲ್ಕಾಜೆಮಾಡದಲ್ಲಿ ಕುಂಟಾಲಪಲ್ಕೆ-ಉಳಿ ರಸ್ತೆಗೆ ೭ ಕೋ.ರೂ., ಪಣೋಲಿಬೈಲಿನಲ್ಲಿ ಮಾರ್ನಬೈಲು-ಮಂಚಿ-ಸಾಲೆತ್ತೂರು ರಸ್ತೆಗೆ ೧೩ ಕೋ.ರೂ., ಮೆಲ್ಕಾರ್-ಮಾರ್ನಬೈಲು ರಸ್ತೆಗೆ ೨.೪೦ ಕೋ.ರೂ., ಬೊಳ್ಳಾಯಿ-ಕಂಚಿಲ-ಮಂಚಿ ರಸ್ತೆಗೆ ೨ ಕೋ.ರೂ.ಗಳ ಕಾಮಗಾರಿಗೆ ಚಾಲನೆ ಸಿಗಲಿದೆ.

ನರಹರಿ ಪರ್ವತದಲ್ಲಿ ನರಹರಿ ಶ್ರೀ ಸದಾಶಿವ ದೇವಸ್ಥಾನ ರಸ್ತೆಗೆ ೨ ಕೋ.ರೂ., ಕಲ್ಲಡ್ಕ-ಬೊಂಡಾಲ ಶ್ರೀ ಮಹಾಗಣಪತಿ ದೇವಸ್ಥಾನ ರಸ್ತೆಗೆ ೩ ಕೋ.ರೂ., ಕೋಡಪದವಿನಲ್ಲಿ ಕೋಡಪದವು-ಮಂಗಳಪದವು ರಸ್ತೆಗೆ ೧.೫೦ ಕೋ.ರೂ., ಮಾಣಿ ಮಾಡದಲ್ಲಿ ಮಾಣಿ ಶ್ರೀ ಉಳ್ಳಾಳ್ತಿ ಮಾಡ ರಸ್ತೆಗೆ ೨ ಕೋ.ರೂ., ವ್ಯಾಯಾಮ ಶಾಲೆ ಬಳಿ ಸೆಧೆಕಾರು-ಕಕ್ಕೆಮಜಲು-ಕಾಪಿಕಾಡು ರಸ್ತೆಗೆ ೪.೯೫ ಕೋ.ರೂ., ಮೊಗರ್ನಾಡುನಲ್ಲಿ ನರಿಕೊಂಬು-ದಾಸಕೋಡಿ ರಸ್ತೆಗೆ ೪.೯೫ ಕೋ.ರೂ., ಬೆಂಜನಪದವಿನಲ್ಲಿ ಬೆಂಜನಪದವು-ಪಿಲಿಬೊಟ್ಟು ರಸ್ತೆಗೆ ೨.೫೦ ಕೋ.ರೂ.ಗಳ ಕಾಮಗಾರಿಗೆ ಶಿಲಾನ್ಯಾಸ ನಡೆಯಲಿದೆ ಎಂದು ಶಾಸಕರ ಕಚೇರಿ ಪ್ರಕಟನೆ ತಿಳಿಸಿದೆ.

Sneha Gowda

Recent Posts

ಗಾಳಿ ಸಮೇತ ಭಾರಿ ಮಳೆ : ನೆಲಕಚ್ಚಿದ ಮರಗಳು

ಧಾರವಾಡದಲ್ಲಿ ಶನಿವಾರ ಗಾಳಿ ಸಮೇತ ಮಳೆಯಾಗಿದ್ದು, ಅಲ್ಲಲ್ಲಿ ಮರಗಳು ನೆಲಕಚ್ಚಿದ ಬಗ್ಗೆ ವರದಿಯಾಗಿದೆ. ಬೆಳಿಗ್ಗೆಯಿಂದ ವಿಪರೀತ ಬಿಸಿಲಿನ ವಾತಾವರಣವಿತ್ತು

15 mins ago

ಮನುಷ್ಯನ ಆರೋಗ್ಯಕ್ಕೆ ಕ್ರೀಡೆಗಳು ಅತ್ಯಂತ ಸಹಕಾರಿ : ತಮ್ಮಯ್ಯ

ಕ್ರೀಡೆಗಳು ಮನುಷ್ಯನ ಆರೋಗ್ಯವನ್ನು ಸುಸ್ಥಿರವಾಗಿ ಕಾಪಾಡುವ ಜೊ ತೆಗೆ ಮನಸ್ಸನ್ನು ಹತೋಟಿಗಿಡುವ ಬಹುದೊಡ್ಡ ಸಾಧನ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ…

26 mins ago

ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು- ತಮ್ಮಯ್ಯ

ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು. ಆ ನಿಟ್ಟಿನಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಬೇಕೆಂದು ಶಾಸಕ ಎಚ್.ಡಿ. ತಮ್ಮಯ್ಯ ಅವರು ಹೇಳಿದ್ದಾರೆ. ನಗರದ ಬಸವನಹಳ್ಳಿಯ…

37 mins ago

ಮಕ್ಕಳು ಬೇಸಿಗೆ ರಜೆಯಲ್ಲಿ ಶಿಕ್ಷಣದಿಂದ ವಂಚಿತರಾಗಬಾರದು : ಶಿಕ್ಷಕ ಬಾಲಾಜಿ

ಬೇಸಿಗೆ ರಜೆಯಲ್ಲಿ ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಸಂಸ್ಥೆಗಳ ಬೇಸಿಗೆ ತರಬೇತಿ ಶಿಬಿರಗಳಿಗೆ ಮುಂದಿನ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಕಳಿಸುವುದು ಸಾಮಾನ್ಯ.…

47 mins ago

ಚರಂಡಿ ಸ್ವಚ್ಛಗೊಳಿಸುವಂತೆ ಸಾರ್ವಜನಿಕರ ಆಗ್ರಹ

ಪಟ್ಟಣದ ವಿವಿಧ ವಾರ್ಡ್‌ಗಳು ಹಾಗೂ ಪ್ರಮುಖ ವೃತ್ತಗಳಲ್ಲಿನ ಚರಂಡಿಗಳು ಕಟ್ಟಿಕೊಂಡು ದುರ್ನಾತ ಬೀರುತ್ತಿದ್ದು, ಜನರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಅಧಿಕಾರಿಗಳ…

59 mins ago

ನಿವೃತ್ತಿ ಘೋಷಿಸಿದ ಇಂಗ್ಲೆಂಡ್​ ತಂಡ ವೇಗದ ಬೌಲರ್​ : ಕಾರಣ ಇಲ್ಲಿದೆ

ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್ ಮತ್ತು…

1 hour ago