ಬಂಟ್ವಾಳ: ತಾಲೂಕಿನ ಸಿದ್ಧಕಟ್ಟೆ ಸಹಕಾರಿ ವ್ಯವಸಾಯಿಕ ಸಂಘವು 2021-22 ನೇ ಸಾಲಿನಲ್ಲಿ 293.14 ಕೋಟಿ ವ್ಯವಹಾರ ನಡೆಸಿದ್ದು, 1.09 ಕೋಟಿ ರೂ. ನಿವ್ವಳ ಲಾಭಗಳಿಸಿದ್ದು ಸದಸ್ಯರಿಗೆ ಶೇ 12 ರಷ್ಟು ಡಿವಿಡೆಂಟ್ ಘೋಷಣೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಪ್ರಭಾಕರ ಪ್ರಭು ತಿಳಿಸಿದ್ದಾರೆ. ಈ ಕುರಿತಾಗಿ ಸಂಘದ 2021-22 ನೇ ಸಾಲಿನ ಮಹಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತಾನಾಡಿದರು.
ಸಂಘದ ಬೆಳವಣಿಗೆ ಕುರಿತು ವಿವರಣೆ ನೀಡಿರುವ ಅವರು, ಸಂಘದ ಠೇವಣಿಯನ್ನು 39.49 ಕೋ.ರೂ.ಗೆ ಹೆಚ್ಚಿಸಲಾಗಿದ್ದು, 62.86 ಕೋ.ರೂ. ಸಾಲ ಹೊರಬಾಕಿ ಇರುತ್ತದೆ, ಹೂಡಿಕೆ 6.27 ಕೋ.ರೂ.ನಿಂದ 9.49 ಕೋ.ರೂ.ಗೆ ಏರಿಕೆ ಕಂಡಿದ್ದು, ದುಡಿಯುವ ಬಂಡವಾಳ 48.68 ಕೋ.ರೂ.ನಿಂದ 77.92 ಕೋ.ರೂ.ಗೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.
ಆಡಿಟ್ ವರ್ಗೀಕರಣದಲ್ಲಿಯು ‘ಎ’ ತರಗತಿ ಪಡೆದಿದ್ದು, 2021-22 ನೇ ಸಾಲಿನಲ್ಲಿ 275 ಮಂದಿ ಹೊಸ ಸದಸ್ಯರು ಸೇರ್ಪಡೆಯಾಗಿದ್ದು,2.22 ಕೋ.ರೂ.ಪಾಲು ಬಂಡವಾಳ ಜಮೆಯಾಗಿದೆ ಎಂದು ತಿಳಿಸಿದರು.
ಸಂಘದ ಸದಸ್ಯರ ಅವಶ್ಯಕತೆಗನುಗುಣವಾಗಿ ಒಟ್ಟು 68.55 ಕೋ.ರೂ. ಸಾಲ ವಿತರಿಸಲಾಗಿದೆ.ಈ ಪೈಕಿ 1687 ರೈತ ಸದಸ್ಯರಿಗೆ 32.09 ಕೋ.ರೂ. ಬೆಳೆಸಾಲ, 1054 ರೈತ ಸದಸ್ಯರಿಗೆ 36.46 ಕೋ.ರೂ. ಕೃಷಿ ಅಭಿವೃದ್ದಿ ಸಾಲ ಸಹಿತ ಇನ್ನಿತರ ಸಾಲ ವಿತರಿಸಲಾಗಿದೆ ಎಂದು ವಿವರಿಸಿದರು.
ಸಭೆಯಲ್ಲಿ ಸದಸ್ಯರೊಬ್ಬರು ಸಾಲ ಮನ್ನಾ ಮೊಬಲಗು ಬಾರದಿರುವ ಬಗ್ಗೆ ವಿಷಯ ಪ್ರಸ್ತಾಪಿಸಿರುವಕ್ಕೆ ಬಾಕಿ ಉಳಿದ
ಸಾಲ ಮನ್ನಾ ಶೀಘ್ರದಲ್ಲಿ ಬಿಡುಗಡೆಗೆ ಸರಕಾರಕ್ಕೆ ಮನವಿ ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಮುಖ್ಯ ಕಾರ್ಯನಿರ್ವಾಹಣಾಧಿಕಾರಿ
ಆರತಿ ಶೆಟ್ಟಿ ಮಹಾಸಭೆಯ ವರದಿ ವಾಚಿಸಿ, ವಿಷಯ ಮಂದಿಸಿದರು. ಕುಕ್ಕಿಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತಾ. ಆರ್. ಪುಜಾರಿ, ಅರಳ ಗ್ರಾಮ ಪಂಚಾಯತ್ ಅಧ್ಯಕ್ಷ ಲಕ್ಮಿಧರ ಶೆಟ್ಟಿ, ರಾಯಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ, ಸಿದ್ದಕಟ್ಟೆ ಹಾಲು ಉತ್ಪದಕ ಸಹಕಾರಿ ಅಧ್ಯಕ್ಷ ಸದಾಶಿವ ಪೂವಳ, ಕರ್ಪೆ, ಪೂಂಜಾ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರತ್ನಾಕುಮಾರ್ ಚೌಟ, ಶ್ರೀರಾಮ ವಿದ್ಯಾ ಸಂಸ್ಥೆ ಸುಲ್ಕೆರಿ ಇದರ ಗೌರವ ಅಧ್ಯಕ್ಷ ಗಣೇಶ್ ಹೆಗ್ಡೆ, ಅಧ್ಯಕ್ಷ ರಾಜು ಪೂಜಾರಿ, ನಿವೃತ್ತ ಲೆಕ್ಕ ಪರಿಶೋಧಕ ಗೋಪಾಲ ರೈ, ಸಭೆಯಲ್ಲಿ ಭಾಗವಹಿಸಿದ್ದರು.
ಸಂಘದ ನಿರ್ದೇಶಕರಾದ ಮಂದಾರತಿ ಶೆಟ್ಟಿ ಸ್ವಾಗತಿಸಿದರು. ನಿರ್ದೇಶಕ ರಾಜೇಶ್ ಶೆಟ್ಟಿ ಕೊನೆರ ಬೆಟ್ಟು ಪ್ರತಿಭಾ ಪುರಸ್ಕಾರ ಪಟ್ಟಿ ವಾಚಿಸಿದರು. ಸಂಘದ ಸಹಾಯಕ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಲ್ಲಿಕಾ ಕಾರ್ಯಕ್ರಮ ನಿರೂಪಿಸಿದರು.ನಿರ್ದೇಶಕ ದಿನೇಶ್ ಪೂಜಾರಿ ವಂದಿಸಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷಸತೀಶ್ ಪೂಜಾರಿ ಅಲಕ್ಕೆ ನಿರ್ದೇಶಕರಾದ ಸಂದೇಶ್ ಶೆಟ್ಟಿ ಪೊಡುಂಬ, ಹರೀಶ್ ಆಚಾರ್ಯ ರಾಯಿ, ,ಉಮೇಶ್ ಗೌಡ, ಜಾರಪ್ಪ ನಾಯ್ಕ, ವೀರಪ್ಪ ಪರವ, ದೇವರಾಜ್ ಸಾಲ್ಯಾನ್, ಹಾಗೂ ವೃತ್ತಿಪರ ನಿರ್ದೇಶಕರಾಗಿ ಮಾಧವ ಶೆಟ್ಟಿಗಾರ್, ಉಪಸ್ಥಿತರಿದ್ದರು.