News Karnataka Kannada
Sunday, April 28 2024
ಮಂಗಳೂರು

ಬಂಟ್ವಾಳ: ಬೆಸ್ಟ್ ಆಂಗ್ಲ ಮಾದ್ಯಮ ಶಾಲೆಯ ವತಿಯಿಂದ ವಲಯ ಮಟ್ಟ ಕ್ರೀಡಾ ಕೂಟಕ್ಕೆ ಚಾಲನೆ

Bantwal: Best English Medium School, Bantwal, has launched a zonal level sports meet.
Photo Credit : News Kannada

ಬಂಟ್ವಾಳ: ಬೆಸ್ಟ್ ಆಂಗ್ಲ ಮಾದ್ಯಮ ಶಾಲೆ ಬಿ. ಸಿ ರೋಡ್ ಇದರ ಸಂಯುಕ್ತ ಆಶ್ರಯದಲ್ಲಿ ಮೊಡಂಕಾಪು ಇನ್ಫೆಂಟ್ ಜೀಸಸ್ ಕ್ರೀಡಾಂಗಣದಲ್ಲಿ ನಡೆದ ಬಂಟ್ವಾಳ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕ್ರೀಡಾಕೂಟ ಸಮಾರಂಭದ ಉದ್ಘಾಟನಾ ಕಾರ್ಯಕ್ರಮವನ್ನು ಬಂಟ್ವಾಳ ಏಜುಕೇಶನ್ ಸರ್ವಿಸ್ ಟ್ರಸ್ಟಿನ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಬಿ. ರಮಾನಾಥ ರೈ ನೆರವೇರಿಸಿ ಬಳಿಕ ಬಂಟ್ವಾಳ ವಲಯ ಮಟ್ಟದ ಕ್ರೀಡಾಕೂಟದ ಧ್ವಜಾರೋಹಣವನ್ನು ಬಿ.ಸಿ ರೋಡಿನ ಬೆಸ್ಟ್ ಆಂಗ್ಲ ಮಾಧ್ಯಮ ಶಾಲೆ ಸಂಚಾಲಕರಾದ ಧನಭಾಗ್ಯ ಆರ್ ರೈ ರವರು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಕ್ರೀಡಾಜ್ಯೋತಿ ಬೆಳಗಿಸುವ ಮೂಲಕ ಕ್ರೀಡಾಕೂಟಕ್ಕೆ ಇನ್ಫೆಂಟ್ ಜೀಸಸ್ ಚರ್ಚಿನ ಮುಖ್ಯ ಗುರುಗಳು ಫಾದರ್ ವೆಲೇರಿಯನ ಡಿ’ಸೋಜಾರವರು ಚಾಲನೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಬೆಸ್ಟ್ ಆಂಗ್ಲ ಮಾಧ್ಯಮ ಶಾಲೆ ಆಡಳಿ ಅಧಿಕಾರಿ ಮಹಾಬಲ ಆಳ್ವ. ಟ್ರಸ್ಟಿನ ಸದಸ್ಯರುಗಳಾದ ರಶ್ಮಿ ಎಸ್. ಪೂಜಾ, ಸುಮ ಎಂ. ಆಳ್ವಾ, ಕಾರ್ಯಕ್ರಮದಲ್ಲಿ ಬೆಸ್ಟ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯನಿ ಸುನಿತಾ ಬಿ. ಟಿ ರವರು ಸ್ವಾಗತವನ್ನು ಕೋರಿದರು.

ಪ್ರಮುಖರಾದ ಬಂಟ್ವಾಳ ಕ್ಷೇತ್ರದ ಶಿಕ್ಷಣಾಧಿಕಾರಿ ಜ್ಞಾನೇಶ್. ಪಿಇಸಿಒ ಸುಜಾತ, ಇಸಿಒ ಸುಧಾ. ಟಿಪಿಒ ವಿಷ್ಣು ನಾರಾಯಣ ಹೆಬ್ಬಾರ್ 3 ವಲಯದ ಸಿಆರ್ ಪಿಗಳು ನಂದಾ, ಪ್ರೇಮಲತಾ,  ಪ್ರದೀಪ್ ಬಂಟ್ವಾಳ ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರು ಸಂಘದ ಅಧ್ಯಕ್ಷರು ರತ್ನಾವತಿ, ಬಂಟ್ವಾಳ ವಲಯದ ನೋಡಲ್ ಅಧಿಕಾರಿ ಶಿವಪ್ರಸಾದ್ ರೈ. ಜಿಲ್ಲಾ ಉಪಾಧ್ಯಕ್ಷರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ  ನವೀನ್, ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು ಇನ್ವೆಂಟ್ ಜೀಸಸ್ ಶಾಲೆ ಮುಖ್ಯ ಗುರುಗಳು, ದೀಪಿಕಾ ಪ್ರೌಢಶಾಲೆಯ ಮುಖ್ಯ ಗುರುಗಳು, ಕ್ರೀಡಾಂಗಣವನ್ನು ಕೊಟ್ಟು ಸಹಕರಿಸಿದರು ದೀಪಿಕಾ ಪ್ರೌಢಶಾಲೆ, ಮೊಡಂಕಾಪು. ಇವರುಗಳು. ಬೆಂಜನಪದವು ಶಾಲೆಯ ಮುಖ್ಯ ಗುರುಗಳು. ಎಲ್ಲಾ 3 ವಲಯಗಳ ದೈಹಿಕ ಶಿಕ್ಷಣ ಶಿಕ್ಷಕರು ವ್ಯವಸ್ಥಾಪಕರು. ಕ್ರೀಡಾ ಜ್ಯೋತಿಯನ್ನು ರಕ್ತೇಶ್ವರಿ ದೇವಸ್ಥಾನದಿಂದ ದೀಪಿಕಾ ಪ್ರೌಢಶಾಲೆಯ ಕ್ರೀಡಾಂಗಣ ಮಾಡಂಕಾಪು ಮೆರವಣಿಗೆಯ ಮೂಲಕ ಬಂದು ಬಳಿಕ ಅದನ್ನು ಪಾರಿವಾಳಗಳನ್ನು ಬಿಡುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.

ಕ್ರೀಡಾ ಪ್ರತಿಜ್ಞೆಯನ್ನು ಬೆಸ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಹರ್ಷಿತ್ ಪ್ರತಿಜ್ಞೆ ವಿಧಿಯನ್ನು ವಾಚಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಬೆಸ್ಟ್ ಆಂಗ್ಲ ಮಾಧ್ಯಮ ಶಾಲೆಯ ಸಹ ಶಿಕ್ಷಕಿ ಸುವನಾರವರು ನಿರೂಪಿಸಿದರು. ಕಾರ್ಯಕ್ರಮದ ವಂದನಾರ್ಪಣೆಯನ್ನು ಬೆಸ್ಟ್ ಆಂಗ್ಲ ಮಾಧ್ಯಮ ಶಾಲೆಯ ಸಹ ಶಿಕ್ಷಕಿ ಸನ್ಮೆತಾ ರವರು ನೆರವೇರಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು