News Karnataka Kannada
Monday, April 29 2024
ಮಂಗಳೂರು

ತಿರುವೈಲ್‌ ಅಣಬೆ ಘಟಕಕ್ಕೆ ಗಾಳಿ ಶುದ್ದೀಕರಣ ಯಂತ್ರ: ಆಡಳಿತ ಮಂಡಳಿ ಹೇಳಿಕೆ

Air purifier for Tiruvail mushroom plant: Management
Photo Credit : News Kannada

ಮಂಗಳೂರು: ತಿರುವೈಲ್ ಗ್ರಾಮದಲ್ಲಿ ವೈಟ್ ಗ್ರೋವ್ ಅಗ್ರಿ ಎಲ್.ಎಲ್.ಪಿ ಸಂಸ್ಥೆಯು ಕಳೆದ ನಾಲ್ಕು ವರ್ಷಗಳಿಂದ ಅಣಬೆ ಉತ್ಪಾದನಾ ಘಟಕ ಕೇಂದ್ರವನ್ನು ನಡೆಸುತ್ತಿದೆ. ಕಡಿಮೆ ಸ್ಥಳದಲ್ಲಿ ವಾಣಿಜ್ಯ ಕೃಷಿಯನ್ನು ಹೈ-ಟೆಕ್ ಮಾದರಿಯಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಇದನ್ನು ಮಾಡಲಾಗಿದೆ.

ರಾಷ್ಟ್ರದಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಇಂತಹ ಫಾರ್ಮ್ ಗಳ ಸ್ಥಾಪನೆ ಇತ್ತೀಚೆಗೆ ಹೆಚ್ಚಿನ ಸಂಖ್ಯೆಯಲ್ಲಿ ಇರುವುದಾದರೂ ಕೂಡ ಕರ್ನಾಟಕದಲ್ಲಿ ಇದು ಸ್ವಲ್ಪ ಹೊಸತಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದೊಂದು ಉತ್ತಮ ಕೃಷಿಯಾಗಿದ್ದು ಪಾಶ್ಚಾತ್ಯ ದೇಶದ ಜನರು ಅದರಲ್ಲಿಯೂ ಕೂಡ ಚೀನಾ ಈ ಕ್ಷೇತ್ರದಲ್ಲಿ ಅತ್ಯಂತ ಮುಂದುವರೆದ ರಾಷ್ಟ್ರವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿಯು ಮುಖ್ಯವಾಗಿರುತ್ತದೆ ಆದರೆ ಈಗ ಕಾರಣಾಂತರದಿಂದ ಕೃಷಿ ಹಾಗು ತೋಟಗಾರಿಕಾ ಭೂಮಿಗಳು ಬಂಜರು ಭೂಮಿಗಳಾಗಿದೆ.

ಈ ಕ್ಷೇತ್ರಗಳಿಗೆ ಮತ್ತೆ ಜೀವ ತುಂಬಬೇಕಾದರೆ ವಾಣಿಜ್ಯ ಕೃಷಿಯನ್ನು ಹೊಸದಿಕ್ಕಿನಲ್ಲಿ ಅಭಿವೃದ್ದಿಪಡಿಸಬೇಕಾಗಿದೆ ಇದರಿಂದ ಹೆಚ್ಚಿನ ಉದ್ಯೋಗಗಳನ್ನು ನಿರ್ಮಿಸಬೇಕಾಗಿದೆ. ಈ ಉದ್ದೇಶದಿಂದ ವಾಮಂಜೂರಿನ ತಿರುವೈಲ್ ಗ್ರಾಮದಲ್ಲಿ ಮೂರು ಎಕರೆ ಪ್ರದೇಶದಲ್ಲಿ ವೈಟ್ ಗ್ರೋವ್ ಅಗ್ರಿ ಎಲ್.ಎಲ್.ಪಿ ಸಂಸ್ಥೆಯು ಅಣಬೆ ಉತ್ಪಾದನ ಘಟಕವನ್ನು ಪ್ರಾರಂಭಿಸಿದೆ ಈ ಘಟಕವು ಕಾಂಪೋಸ್ಟ್ ತಯಾರಿಕೆ ಹಾಗು ಅಣಬೆ ಕೃಷಿ ಮಾಡುವ ಘಟಕ ಎಂಬ ಎರಡು ಭಾಗಗಳಿಂದ ಕೂಡಿದೆ.

ಕಾಂಪೋಸ್ಟ್ ಮಾಡಲು ಪ್ರಮುಖವಾಗಿ ಭತ್ತದ ಹುಲ್ಲು/ಗೋಧಿ ಹುಲ್ಲನ್ನು ಉಪಯೋಗಿಸಿ ಅದನ್ನು ನೀರಿನಲ್ಲಿ ನೆನೆಹಾಕಿ ನಂತರ ಇದಕ್ಕೆ ದನದ ಗೊಬ್ಬರ/ಕುದುರೆ ಗೊಬ್ಬರ/ಕೋಳಿ ಗೊಬ್ಬರ ಮಿಶ್ರಣ ಮಾಡಿ ನಂತರ ವಿವಿಧ ಉಷ್ಣತೆಯಲ್ಲಿ ಪ್ರಕ್ರಿಯೆ ನಡೆಸಬೇಕಾಗಿದೆ. ಇದರಲ್ಲಿ ಯಾವುದೇ ರಾಸಾಯನಿಕ ವಸ್ತುಗಳನ್ನು ಉಪಯೋಗ ಮಾಡುವುದಿಲ್ಲ. ಭತ್ತದ ಹುಲ್ಲು/ಗೋಧಿ ಹುಲ್ಲನ್ನು ಉಪಯೋಗಿಸಿ ಅದನ್ನು ನೀರಿನಲ್ಲಿ ನೆನೆಹಾಕಿ ನಂತರ ಇದಕ್ಕೆ ದನದ ಗೊಬ್ಬರ/ಕುದುರೆ ಗೊಬ್ಬರ/ಕೋಳಿ ಗೊಬ್ಬರ ಮಿಶ್ರಿತಗೊಳಿಸಿದಾಗ ಅಲ್ಪಮಟ್ಟಿಗೆ ಹೈಡ್ರೋಜನ್ ಸಲ್ಫೈಡ್ ಮತ್ತು ಅಮೋನಿಯ ಇದರಿಂದ ಹೊರಸೂಸುತ್ತದೆ. ಇದು ಸ್ವಲ್ಪಮಟ್ಟಿಗೆ ಪರಿಸರದಲ್ಲಿ ವಾಸನೆ ಬರಲು ಕಾರಣವಾಗಿತ್ತು. ಜನರಿಂದ ಈ ಬಗ್ಗೆ ದೂರುಗಳು ಬಂದಾಗ ಇದನ್ನು ಸಂಪೂರ್ಣವಾಗಿ ತಡೆಗಟ್ಟಲು ಇದಕ್ಕೆ ಬೇಕಾದ ಯಂತ್ರೋಪಕರಣಗಳ ಮೂಲಕ ಕಾಂಪೋಸ್ಟ್ ಮಾಡುವ ಸ್ಥಳವನ್ನು ಸಂಪೂರ್ಣವಾಗಿ ಬಂದ್ ಮಾಡಿ ಒಳಗಿನಿಂದ ಯಾವುದೇ ಗ್ಯಾಸ್ ಅಥವಾ ಗಾಳಿ ನೇರವಾಗಿ ಹೊರಹೋಗದಂತೆ ಕ್ರಮ ಜರುಗಿಸಿದೆ. ಹೊರಹೋಗುವ ಯಾವುದೇ ಗಾಳಿಯು ಈ ಹೊಸ ಯಂತ್ರೊಪಕರಣಗಳ ಮೂಲಕ ತಿಳಿಯಾಗಿ ಶುದ್ಧ ಗಾಳಿ ಹೊರಹೋಗುವಂತೆ ವ್ಯವಸ್ಥೆ ಮಾಡಲಾಗಿದೆ.

ಈ ಘಟಕವನ್ನು ಇಲ್ಲಿ ಸ್ಥಾಪನೆ ಮಾಡುವ ಮೊದಲು ದೇಶದ ವಿವಿಧ ಭಾಗಗಳಲ್ಲಿ ಇರುವ ಸುಮಾರು ಇಪ್ಪತ್ತು ಹಿರಿಯ ಮತ್ತು ಕಿರಿಯ ಘಟಕಗಳಲ್ಲಿ ಮಾಡುವ ಪ್ರಕ್ರಿಯೆಯನ್ನು ಗಮನಿಸಲಾಗಿದೆ. ಆದರೆ ಈ ರೀತಿ ವಾಸನೆ ಬರುವ ಸಮಸ್ಯೆ ಎಲ್ಲಿಯೂ ಕಂಡು ಬಂದಿಲ್ಲ ಅದೆಲ್ಲ ಘಟಕಗಳಲ್ಲಿ ಮುಕ್ತ ವಾತಾವರಣದಲ್ಲಿ ಕಾಂಪೋಸ್ಟ್ ಮಾಡಲಾಗುತಿತ್ತು ಆದರೆ ಇಲ್ಲಿ ದೇಶದಲ್ಲಿ ಪ್ರಥಮವಾಗಿ ಅಣಬೆ ಘಟಕಕ್ಕೆ ಈ ರೀತಿಯ ಯಂತ್ರೊಪಕರಣಗಳನ್ನು ಅಳವಡಿಸಿ ಶುದ್ಧ ಗಾಳಿ ಹೊರಬರುವಂತೆ ಕ್ರಮ ಕೈಗೊಳ್ಳಲಾಗಿದೆ. ಇನ್ನು ಮುಂದೆಯೂ ಕೂಡ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಲು ಸಂಸ್ಥೆಯು ಮುಂದಾಗಿದೆ.

ಸುಮಾರು ಮೂರು ಎಕರೆ ಪ್ರದೇಶದಲ್ಲಿ ಈ ಘಟಕವು ಕಾರ್ಯಾಚರಣೆ ಮಾಡುತಿದ್ದು ಸುಮಾರು 170 ಮಂದಿ ಕೆಲಸ ನಿರ್ವಹಿಸುತಿದ್ದು ಈ ಪೈಕಿ 50 ಮಂದಿ ಸ್ಥಳೀಯರಾಗಿರುತ್ತಾರೆ. ಅಲ್ಪ ಜಾಗದಲ್ಲಿ ಇಷ್ಟೊಂದು ಉದ್ಯೋಗ ಸೃಷ್ಟಿಮಾಡುವಂತಹ ವ್ಯವಸ್ಥೆಯು ಅಪರೂಪ.

ಈ ಘಟಕವು ಕೃಷಿ ಉತ್ಪಾದನೆ ಮಾಡುವಂತಹ ಘಟಕವಾಗಿರುತ್ತದೆ ಆದುದರಿಂದ ಇಲ್ಲಿ ಹೆಚ್ಚಿನ ಸ್ವಚ್ಛತೆ ಕಾಪಾಡಬೇಕಾಗಿದೆ. ಇಲ್ಲವಾದಲ್ಲಿ ಬ್ಯಾಕ್ಟಿರಿಯಾ/ಫಂಗಸ್ ಸಮಸ್ಯೆಯಿಂದ ಸಂಪೂರ್ಣ ಕೃಷಿ ಹಾಳಾಗುವ ಸಮಸ್ಯೆ ಇರುತ್ತದೆ ಈ ಕಾರಣದಿಂದ ಜನರನ್ನು ಮುಕ್ತವಾಗಿ ಅಲೆದಾಡಲು ಬಿಡಲು ನಿರ್ಬಂಧ ಹಾಕಬೇಕಾಗುತ್ತದೆ. ವಾಸನೆ ಕುರಿತು ಸಾರ್ವಜನಿಕರ ದೂರಿನ ಮೇಲೆ ಜಿಲ್ಲಾದಿಕಾರಿಯು ಕಾಂಪೋಸ್ಟ್ ಘಟಕವನ್ನು ತಾತ್ಕಲಿಕವಾಗಿ ನಿಲ್ಲಿಸಲು ಇತ್ತೀಚೆಗೆ ಆದೇಶ ಮಾಡಿದ್ದು ಅದರ ನಂತರ ಗಾಳಿಯನ್ನು ಶುದ್ದೀಕರಣಗೊಳಿಸಲು ಯಂತ್ರೋಪಕರಣಗಳನ್ನು ಅಳವಡಿಸಿದ ನಂತರ ಇದೆ ಜುಲೈ 31 ರಿಂದ ಆಗಸ್ಟ್ 19 ರ ವರೆಗೆ ಕಾಂಪೋಸ್ಟ್ ಘಟಕ ಆರಂಭಿಸಿ ಈ ಯಂತ್ರೋಪಕರಣಗಳು ಕೆಲಸ ನಿರ್ವಹಿಸುವ ವಿಚಾರದಲ್ಲಿ ಮತ್ತು ಗಾಳಿ ಶುದ್ದೀಕರಣ ವಿಚಾರದಲ್ಲಿ ಸಮೀಕ್ಷೆ ನಡೆಸಲು ಆದೇಶಿಸಿದೆ. ಸರಕಾರದ ಸ್ವತಂತ್ರ ಸಂಸ್ಥೆಗಳಾದ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಹಾಗು NABL ಪ್ರಯೋಗ ಶಾಲೆ ದೈನಂದಿನ ರೀತಿಯಲ್ಲಿ ಪರೀಕ್ಷೆಗಳನ್ನು ನಡೆಸುತಿದ್ದು ಇದನ್ನು ದಾಖಲೆ ಮಾಡುತ್ತಿದೆ. ಈ ದಾಖಲೆಗಳನ್ನು ಮಂಗಳೂರಿನ ನಗರ ಪಾಲಿಕೆಯ ಆಯುಕ್ತರ ಅಧ್ಯಕ್ಷತೆಯಲ್ಲಿ ನೇಮಕವಾಗಿರುವ ತಜ್ಞರ ಸಮಿತಿಗೆ ನೀಡಲಾಗುತ್ತಿದೆ. ತಜ್ಞರ ಸಮಿತಿ ಎಲ್ಲವನ್ನು ಪರಿಶೀಲಿಸಿ ಜಿಲ್ಲಾಧಿಕಾರಿಯವರಿಗೆ ವರದಿ ನೀಡುತ್ತದೆ.

ವೈಟ್ ಗ್ರೋವ್ ಅಗ್ರಿ ಎಲ್.ಎಲ್.ಪಿ ಸಂಸ್ಥೆಯು ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಹಾಗು ಉನ್ನತ ತಂತ್ರಜ್ಞಾನದ ಮೂಲಕ ಅಣಬೆಯ ತೋಟಗಾರಿಕಾ ಕೃಷಿಯನ್ನು ಮಾಡಿ ನಮ್ಮ ಯುವಕರಿಗೆ ಕೃಷಿ ಕ್ಷೇತ್ರದಲ್ಲಿ ಆಸಕ್ತಿ ವಹಿಸಲು ಪ್ರೋತ್ಸಹಿಸಬೇಕಾಗಿ ಉದ್ದೇಶಿಸಿದೆ.  ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ನಿರ್ಮಾಣ ಮಾಡಿ ಜನರಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಹಾಗು ಮುಂದೆ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಇಲ್ಲಿಗೆ ಭೇಟಿ ನೀಡಿ ಅವರಿಗೆ ಈ ಹೈಟೆಕ್ ಕೃಷಿಯ ಬಗ್ಗೆ ಮಾಹಿತಿ ನೀಡಲು ಈ ಸಂಸ್ಥೆಯು ಉದ್ದೇಶಿಸಿದೆ.

ಇಂದು ಚೀನಾ ದೇಶವು ವಿಶ್ವದ 75 ಶೇಕಡದಷ್ಟು ಅಣಬೆ ಉತ್ಪಾದನೆ ಮಾಡಿ ಇಡೀ ವಿಶ್ವಕ್ಕೆ ರಫ್ತು ಮಾಡುತ್ತಿದೆ ಆದರೆ ಭಾರತ ದೇಶವು ಈ ಕ್ಷೇತ್ರದಲ್ಲಿ ನೀಡಿರುವ ಕೊಡುಗೆ ಶೇಕಡ 2 ಮಾತ್ರ. ಭಾರತ ಸರಕಾರ ಹಿಮಾಚಲ ಪ್ರದೇಶದ ಸೋಲಾನ್ ಎಂಬಲ್ಲಿ ರಾಷ್ಟೀಯ ಅಣಬೆ ಸಂಶೋಧನಾ ಸಂಸ್ಥೆಯನ್ನು ಸ್ಥಾಪನೆ ಮಾಡಿದರು ಕೂಡ ದೇಶದಲ್ಲಿ ಈ ಬಗ್ಗೆ ಹೆಚ್ಚಿನ ಪ್ರಗತಿಯಾಗಿಲ್ಲ. ಇದನೆಲ್ಲ ಪರಿಶೀಲಿಸಿ ಈ ರೀತಿಯ ಹೈಟೆಕ್ ಕೃಷಿ ತೋಟಗಾರಿಕೆ ಮಾಡುವ ಸಂಸ್ಥೆಗಳಿಗೆ ಸಾರ್ವಜನಿಕರು ಹಾಗು ಸರಕಾರ ಹೆಚ್ಚಿನ ಬೆಂಬಲವನ್ನು ನೀಡಬೇಕಾಗಿದೆ. ಇದೊಂದು ಸಾವಯವ ಕೃಷಿಯಾಗಿದ್ದು ಯಾವುದೇ ರಾಸಾಯನಿಕ ಬಳಕೆಯಾಗದೆ ಇರುವುದರಿಂದ ಇದಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕೆಂದು ನಮ್ಮ ಅನಿಸಿಕೆ ಎಂದು ಕಂಪನಿ ಪ್ರಕಟಣೆ ತಿಳಿಸಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು