News Karnataka Kannada
Monday, April 29 2024
ಮಂಗಳೂರು

ಸಾಯಿ ಸಂದೇಶ್ ಗೆ ಬಂದಿರುವ ಕೊಲೆ ಬೆದರಿಕೆಗೂ ನಮಗೂ ಸಂಬಂಧವಿಲ್ಲ; ಹಿಬಾ ಶೇಖ್

Hiba Shekh
Photo Credit :

ಮಂಗಳೂರು : ವಿದ್ಯಾರ್ಥಿನಿ ಹಿಬಾ ಶೇಖ್ ಮೇಲೆ ಎಫ್ ಐಆರ್ ದಾಖಲು ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ವಿದ್ಯಾರ್ಥಿನಿ ಹಿಬಾ ಶೇಖ್ ಸುದ್ದಿಗೋಷ್ಟಿ ನಡೆಸಿ ಖಂಡಿಸಿದ್ದಾರೆ.

ಸಾಯಿ ಸಂದೇಶ್, ಇತರರ ವಿರುದ್ಧ ದೌರ್ಜನ್ಯ ಕೇಸ್ ಹಾಕಿದ್ದೆ. ಆದರೆ ಅದಕ್ಕೆ ಪೂರಕವಾದ ಸೆಕ್ಷನ್ ಹಾಕಿಲ್ಲ. ಯಾಕಾಗಿ ದೌರ್ಜನ್ಯ ಸೆಕ್ಷನ್ ಹಾಕಿಲ್ಲ ಎಂದು ಕಮೀಷನರ್ ಉತ್ತರಿಸಬೇಕಿದೆ. ಸಾಯಿ ಸಂದೇಶ್ ಗೆ ಬಂದಿರುವ ಕೊಲೆ ಬೆದರಿಕೆಗೂ ನಮಗೂ ಸಂಬಂಧವಿಲ್ಲ. ಅಂತಹ ಪೋಸ್ಟ್ ಗಳನ್ನು ನಾವ್ಯಾರೂ ಒಪ್ಪಿಕೊಳ್ಳಲಾರೆವು. ಆದರೆ ನಮ್ಮ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಕವನಾ ಶೆಟ್ಟಿ ಎಂಬಾಕೆ ಸುಳ್ಳು ಆರೋಪ ಹೊರಿಸಿ ದೂರು ನೀಡಿದ್ದಾಳೆ ಎಂದು ಆರೋಪಿಸಿದ್ದಾರೆ.

ಎಬಿವಿಪಿ ಕಾರ್ಯಕರ್ತೆ ಕವನಾ ಶೆಟ್ಟಿಯಿಂದ ಸುಳ್ಳು ದೂರು ನೀಡಿದ್ದು, ಕವನಾ ಶೆಟ್ಟಿ ಘಟನಾ ಸ್ಥಳದಲ್ಲಿ ಇರಲೇ ಇಲ್ಲ. ನಾನು ಮತ್ತು ನನ್ನ ಸಹಪಾಠಿ ಬೆದರಿಸಿದ್ದಾಗಿ ದೂರು ನೀಡಿದ್ದಾರೆ. ಆದರೆ ಸ್ಥಳದಲ್ಲಿ ಇಲ್ಲದವರ ಮೇಲೂ ಕೇಸ್ ದಾಖಲಾಗಿದೆ. ಜಾಲತಾಣದಲ್ಲಿ ಬರುವ ಬೆದರಿಕೆಗೂ ನಮಗೂ ಸಂಬಂಧವಿಲ್ಲ. ಆದರೆ ಅದನ್ನ ನಾವೇ ಮಾಡಿದ್ದಾಗಿ ಸುಳ್ಳು ಆರೋಪಿಸಲಾಗಿದೆ. ಸಾಯಿ ಸಂದೇಶ್ ಮತ್ತು ಸಹಚರರ ಮೇಲೆ ಕ್ರಮ ಆಗಬೇಕು ಎಂದು ಸುದ್ದಿಗೋಷ್ಟಿಯಲ್ಲಿ ವಿದ್ಯಾರ್ಥಿನಿ ಹಿಬಾ ಶೇಖ್ ಒತ್ತಾಯಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು