News Karnataka Kannada
Friday, May 17 2024
ಮಂಗಳೂರು

ಶ್ರಮಿಕ ಸೇವಾ ಟ್ರಸ್ಟ್ ನಿಂದ ವಿಷು ಕಣಿ ಆಚರಣೆ

Photo Credit :

ಬೆಳ್ತಂಗಡಿ: ವಿವಿಧತೆಯಲ್ಲಿ ಏಕತೆ ಇದೆ ಎಂಬುದು ವಿಷುಕಣಿ ನೋಡಿದಾಗ ಗೊತ್ತಾಗುತ್ತದೆ. ಶಾಸಕರ ಈ ಕಾರ್ಯಕ್ರಮ ಸ್ತುತ್ಯರ್ಹ ಎಂದು ರಾಜ್ಯ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಹೇಳಿದರು.

ಶ್ರಮಿಕ ಸೇವಾ ಟ್ರಸ್ಟ್ ಆಶ್ರಯದಲ್ಲಿ ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಬಳಿ ಇರುವ ಕೃಷ್ಣಾನುಗ್ರಹ ಸಭಾಭವನದಲ್ಲಿ ಎ.16 ರಂದು ಕೇರಳ ಸಾಂಪ್ರದಾಯಿಕ ವಿಷು ಕಣಿ ಉತ್ಸವವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ದೇಶದಲ್ಲಿ 58 ಸಾವಿರಕ್ಕೂ ಅಧಿಕ ತಾಲೂಕಿಗಳಿದ್ದು ಪ್ರತಿ ತಾಲೂಕಿನ ಭಾಷೆ, ಆಚರಣೆ ವಿಭಿನ್ನ. ಅದಕ್ಕೆ ವಿವಿಧತೆಯಲ್ಲಿ ಏಕತೆ ಎಂಬುದು ಭಾರತೀಯ ಪರಂಪರೆಯಾಗಿದೆ.

ಮನಸ್ಸು ಹೃದಯ ಮುಟ್ಟುವ ಕಾರ್ಯಕ್ರಮವಾಗಿ ಶಾಸಕ ಹರೀಶ್ ಪೂಂಜ ವಿಭಿನ್ನ ಚಿಂತನೆಯ ಮೂಲಕ ವಿಷು ಹಬ್ಬ ವಿಶೇಷ ಸಂಭ್ರಮಕ್ಕೆ ಸಾಕ್ಷೀಕರಿಸಿದ್ದಾರೆ ಎಂದರು.

ಶಾಸಕ ಹರೀಶ್ ಪೂಂಜ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶ್ರಮಕ್ಕೆ ಇನ್ನೊಂದು ಅನ್ವರ್ಥನಾಮ ಮಳೆಯಾಳಿಗರು. ಸರಿಸುಮಾರು ನೂರು ವರ್ಷದ ಆಸುಪಾಸಿನಲ್ಲಿ ಕೇರಳದಿಂದ ಬೆಳ್ತಂಗಡಿಗೆ ಬಂದು ಶ್ರಮ ಜೀವಿಗಳಾಗಿ ಕೃಷಿಯೊಂದಿಗೆ ಬದುಕು ಕಟ್ಟಿಕೊಂಡ ಮಳೆಯಾಳಿ ಭಾಷಿಗರು ಮನೆಯಲ್ಲಿ ಆಚರಿಸುವ ಹಬ್ಬವನ್ನು ಇಂದು ಸಾಮೂಹಿಕವಾಗಿ ಆಚರಸಿದ್ದೇವೆ. ಈ ಮೂಲಕ ತುಳು ಮತ್ತು ಮಳೆಯಾಳಿ ಭಾಷಿಗರು ಒಂದೇ ಎಂಬ ಭಾವನೆ ಈ ಹಬ್ಬದಲ್ಲಿ ಮೂಡಿಬಂದಿದೆ ಎಂದರು.

ಅಧ್ಯಕ್ಷತೆ ವಹಿಸಿದ ನಿವೃತ್ತ ಶಿಕ್ಷಕ ಶ್ರೀಧರ್ ಶುಭಹಾರೈಸಿದರು. ಧಾರ್ಮಿಕ ಪರಿಷತ್ ಜಿಲ್ಲಾ ಸದಸ್ಯ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ವಿಷು ಕಣಿ ಸಮಿತಿ ಅಧ್ಯಕ್ಷ ಅನಿಲ್ ಶಿಬಾಜೆ, ಎಸ್.ಎನ್.ಡಿ.ಪಿ. ಯೂನಿಯನ್ ಮಂಡಲ ಸದಸ್ಯ ಉಣ್ಣಿ ಕೃಷ್ಣನ್, ಕಳೆಂಜ ಗ್ರಾ.ಪಂ. ಅಧ್ಯಕ್ಷ ಪ್ರಸನ್ನ, ಚಾರ್ಮಾಡಿ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಚಾರ್ಮಾಡಿ, ತೋಟತ್ತಾಡಿ ಹಾ.ಉ.ಸಂಘದ ಉಪಾಧ್ಯಕ್ಷೆ ಪ್ರಮೀಳಾ, ನೆರಿಯಾ ಹಾ.ಉ.ಸ.ಸಂಘದ ನಿರ್ದೇಶಕ ಶೋಭ ಪ್ರೇಮರಾಜ್, ಪುದುವೆಟ್ಟು ಗ್ರಾ.ಪಂ. ಸದಸ್ಯ ರಾಮೇಂದ್ರನ್, ನೆರಿಯಾ ಗ್ರಾ.ಪಂ. ಸದಸ್ಯ ದಿನೇಶ್ ಉಪಸ್ಥಿತರಿದ್ದರು.

 ಸಮ್ಮಾನ
ರಾಜ್ಯ ಪ್ರಶಸ್ತಿ ವಿಜೇತ ಕಲಾವಿದ ಅರ್ಚನಾ ಎಸ್., ಮಾಜಿ ಸೈನಿಕರಾದ ರವಿ ಪ್ರಸಾದ್, ಪುರುಷೋತ್ತಮ ಶಿಬಾಜೆ, ಬ್ರದರ್ ಬೇಕರಿ ಸ್ಥಾಪಕ ರಾಜೇಂದ್ರ ನಾಯರ್, ನಿವೃತ್ತ ಶಿಕ್ಷಕ ಶ್ರೀಧರ್ ಮಾಸ್ಟರ್,
ಎಸ್.ಎನ್.ಡಿ.ಪಿ. ಯೂನಿಯನ್ ಹಿರಿಯರಾದ ಕೆ.ಜಿ. ಮುರಳೀಧರ, ಹಿರಿಯರಾದ ವೇಲು ಟಿ.ಎನ್., ಶೈಲಜಾ ರಾಜೇಶ್ ಹೊಸಮಟ್ ಅವರನ್ನು ಸಮ್ಮಾನಿಸಲಾಯಿತು.

 ಸಾಂಸ್ಕೃತಿಕ ರಂಗು
ವಿಷು ಕಣಿ ಪ್ರಯುಕ್ತ ವಿಶೇಷವಾಗಿ ಸಂಗರಿಸಿದ ಫಲ ಹಾಗೂ ಪುಷ್ಪವನ್ನು ದೇವರಿಗೆ ಇಟ್ಟು ನೆಕ್ಕರೆಯ ವತ್ಸ ಮತ್ತು ಬಳಗದಿಂದ ತಿರುವಾದಿರ ಸಾಂಸ್ಕೃತಿಕ ನೃತ್ಯ ಪ್ರದರ್ಶಿಸಲಾಯಿತು. ಬಳಿಕ ರಾಜ್ಯ ಪ್ರಶ್ತಿ ವಿಜೇತೆ ಅರ್ಚನಾ ಎಸ್. ಹಾಗೂ ಅನಘಾ ಮತ್ತು ಅನನ್ಯಾ ಅವರಿಂದ ನೃತ್ಯ ಪ್ರದರ್ಶನ ರಾಜೇಶ್ ಕಡವಂದ್ರ ಸಾರಥ್ಯದಲ್ಲಿ ಉಗ್ರಂ ಉಜ್ವಲಂ ಮೆಗಾ ಶೋ ಸಹಿತ ಪೂಕಳಂ ಮನೋರಂಜನಾ ಕಾರ್ಯಕ್ರಮ ಆಕರ್ಷಕವಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು