ಮಂಗಳೂರು :ಮುಡಿಪು ಪೇಟೆಯ ಗೋಲ್ಡ್ ಕಿಂಗ್ ಜ್ಯುವೆಲರಿಗೆ ಇಂದು ನಸುಕಿನ ವೇಳೆ ಕನ್ನ ಕೊರೆದ ಖದೀಮರು ಸೈರನ್ ಬಡಿಯುತ್ತಿದ್ದಂತೆ ಬೆಳ್ಳಿ ಸರವನ್ನು ಎಗರಿಸಿ ಪರಾರಿಯಾದ ಘಟನೆ ನಡೆದಿದೆ .
ಮದ್ಯನಡ್ಕ ನಿವಾಸಿ ಎಂ.ಇಬ್ರಾಹಿಂ ಮತ್ತು ಉಪ್ಪಳದ ಮಹಮ್ಮದ್ ಹನೀಫ್ ಅವರ ಸಹಭಾಗಿತ್ವದ ಗೋಲ್ಡ್ ಕಿಂಗ್ ಜ್ಯುವೆಲರಿಗೆ ಕಳ್ಳರು ನಸುಕಿನ ಜಾವ ಎಂಟ್ರಿ ನೀಡಿದ್ದು ಗೋಡೆಗೆ ಕನ್ನ ಕೊರೆದು ಒಳ ನುಗ್ಗಿದ್ದಾರೆ ಆದರೆ ಕಳ್ಳರು ಜುವೆಲ್ಲರಿ ಒಳಗೆ ನುಗ್ಗುತ್ತಿದ್ದಂತೆ ಕೆಮರಾದಲ್ಲಿ ಮುಖ ಸ್ಕ್ಯಾನ್ ಆಗಿ ಜೋರಾಗಿ ಸೈರನ್ ಆಗಿದ್ದು ಈ ಸಂದೇಶ ವೈಫೈ ತಂತ್ರಜ್ಞಾನದ ಮುಖೇನ ಜ್ಯುವೆಲರಿ ಮಾಲಕರ ಮೊಬೈಲಿಗೂ ತಕ್ಷಣ ತಲುಪಿದೆ , ಭಯಭೀತರಾದ ಕಳ್ಳರು ಕೈಗೆ ಸಿಕ್ಕಿದ ಹತ್ತು ಸಾವಿರ ಮೌಲ್ಯದ 1ಬೆಳ್ಳಿ ಸರವನ್ನು ಎಗರಿಸಿ ಪರಾರಿಯಾಗಿದ್ದಾರೆ.
ಕೊಣಾಜೆ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶ್ವಾನದಳ ಬೆರಳಚ್ಚು ತಜ್ಞರನ್ನು ಕರೆಸಿ ಪರಿಶೀಲನೆ ನಡೆಸಿದ್ದಾರೆ ಅಲ್ಲದೆ ಪೊಲೀಸರು ಸಿಸಿಟಿವಿ ಫೂಟೇಜ್ ಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ
|
|