News Karnataka Kannada
Tuesday, April 30 2024
ಮಂಗಳೂರು

ಮಳಲಿ ಮಸೀದಿಯ ಸರ್ವೇ ನಡೆದರೆ ಸತ್ಯಾಸತ್ಯತೆ ಹೊರಬರಲಿದೆ: ಶಾಸಕ ಭರತ್ ರಾಜ್ ಶೆಟ್ಟಿ

Mla Bharath
Photo Credit :

ಮಂಗಳೂರು:  ಮಳಲಿಯ ಮಸೀದಿ ನವೀಕರಣದ ವೇಳೆ ಪತ್ತೆಯಾದ ದೇಗುಲ ಶೈಲಿಯ ವಿಚಾರದಲ್ಲಿ ನಡೆದ ತಾಂಬೂಲ ಪ್ರಶ್ನೆಯಲ್ಲಿ ದೈವ ಶಕ್ತಿ ಇತ್ತು ಎಂದು ಗೋಚರವಾಗಿದೆ ಈ ಪ್ರದೇಶದ ಬಗ್ಗೆ ಸರ್ವೆ ನಡೆದರೆ ಸತ್ಯಾಸತ್ಯತೆ ಹೊರಬರಲಿದೆ ಎಂದು ಶಾಸಕ ಭರತ್ ರಾಜ್ ಶೆಟ್ಟಿ ಹೇಳಿದರು

ಮಾಜಿ ಸಿಎಂ ಕುಮಾರಸ್ವಾಮಿಯವರು ಜವಾಬ್ದಾರಿಯುತವಾಗಿ ನಡೆದು ಕೊಂಡರೆ ಒಳ್ಳೆಯದು ತಾಂಬೂಲ ಪ್ರಶ್ನೆಯ ಬಗ್ಗೆ ಮಾತನಾಡುವ ಕುಮಾರಸ್ವಾಮಿ ಅವರಿಗೆ ದೊಡ್ಡ ದೊಡ್ಡ ಯಾಗಗಳನ್ನು ಮಾಡಿದ್ದಾರೆ , ಅವರು ಕೇರಳಕ್ಕೆ ಹೋಗಿ ಯಾವ ರೀತಿ ಪ್ರಶ್ನೆ ಕೇಳುತ್ತಾರೆ ಎಂಬುದು ಗೊತ್ತಿದೆ ಎಂದು ಶಾಸಕ ಭರತ್ ಶೆಟ್ಟಿ ಹೇಳಿದರು .

ಮಳಲಿಯಲ್ಲಿ ನಡೆದ ತಾಂಬೂಲ ಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಮಾತನಾಡಿದ ಅವರು ಮಸೀದಿಯ ನವೀಕರಣದ ವೇಳೆ ಪತ್ತೆಯಾದ ದೇಗುಲ ಶೈಲಿಯ ವಿಚಾರದಲ್ಲಿ ನಡೆದ ತಾಂಬೂಲ ಪ್ರಶ್ನೆಯಲ್ಲಿ ದೈವ ಶಕ್ತಿ ಇತ್ತು ಎಂದು ಗೋಚರವಾಗಿದೆ .

ಈ ಪ್ರದೇಶದ ಬಗ್ಗೆ ಸರ್ವೆ ನಡೆದರೆ ಸತ್ಯಾಸತ್ಯತೆ ಹೊರಬರಲಿದೆ , ಇತಿಹಾಸ ಪುಸ್ತಕಗಳಲ್ಲೂ ಇಲ್ಲಿ ಸಾಕಷ್ಟು ದೈವದೇವರುಗಳ ಸಾನಿಧ್ಯ ಎಂಬುದಿದೆ ಆದರೆ ಅವುಗಳು ಗೋಚರವಾಗುತ್ತಿಲ್ಲ ಇದು ಸತ್ಯಾಸತ್ಯತೆ ತಿಳಿಯುವ ಪ್ರಯತ್ನವಾಗಿದ್ದು ಯಾರ ವಿರುದ್ಧ ಹೋರಾಟವಲ್ಲ ಎಂದು ಹೇಳಿದರು .

ಈ ವಿಚಾರದಲ್ಲಿ ರಾಜಕೀಯ ಬಣ್ಣ ಬಳಿಯುವುದು ಬೇಡ ಎರಡು ತಿಂಗಳ ಹಿಂದೆ ಈ ವಿಚಾರ ಬೆಳಕಿಗೆ ಬಂದಿದ್ದು ಆಗ ಯಾವುದೇ ರೀತಿಯ ತೊಂದರೆ ಇರಲಿಲ್ಲ ಇದೀಗ ಈ ವಿಚಾರದಲ್ಲಿ ರಾಜಕೀಯ ಹೇಳಿಕೆಗಳನ್ನು ನೀಡಿರುವುದರಿಂದ ಒಂದು ರೀತಿಯ ಗೊಂದಲದ ವಾತಾವರಣ ನಿರ್ಮಾಣವಾಗಿದೆ ,ಚುನಾವಣೆಗಾಗಿ ಈ ವಿವಾದ ಸೃಷ್ಟಿಸಲಾಗುತ್ತಿದೆ ಎಂದು ಹೇಳುತ್ತಿರುವುದು ಸರಿಯಲ್ಲ ಮಸೀದಿಯ ನವೀಕರಣದ ಮಾಡುವಾಗ ದೈವದ ದೇವಳದ ಶೈಲಿ ಕಟ್ಟಡ ಕಂಡುಬಂದ ಸಂದರ್ಭದಲ್ಲಿ ಇಂತಹ ಪ್ರಶ್ನೆಗಳು ಬಂದೇ ಬರುತ್ತದೆ ಎಂದರು.

ಮಳಲಿಯಲ್ಲಿ ಮುಸ್ಲಿಮರು ಮತ್ತು ಹಿಂದೂಗಳ ನಡುವೆ ಯಾವುದೇ ಸಮಸ್ಯೆಗಳಿಲ್ಲ ಈ ಗೊಂದಲದ ಬಗ್ಗೆ ಕಾನೂನು ರೀತಿಯಲ್ಲಿ ಹೋರಾಟ ಮಾಡುತ್ತಿದ್ದಾರೆ ಎಂದರು.

ಮಳಲಿ ಮಸೀದಿಯ ಸರ್ವೇ ನಡೆಯಬೇಕು , ಜನರು ಸತ್ಯ ತಿಳಿಯಲಿ: ಡಾಕ್ಟರ್ ಸುರೇಂದ್ರ ಕುಮಾರ್ ಜೈನ್

ಮಳಲಿಯಲ್ಲಿ ಮಂದಿರವನ್ನು ಕೆಡವಿ ಮಸೀದಿ ನಿರ್ಮಾಣ ಮಾಡಲಾಗಿದೆ ಎಂದು ತಿಳಿದು ಬಂದಿದೆ . ಅದಕ್ಕೆ ಈಗ ಪುರಾವೆಗಳು ಸಿಕ್ಕಿವೆ ಹೀಗಾಗಿ ಮಂಗಳೂರಿನ ಜಮಾ ಮಸೀದಿಯಲ್ಲಿ ನ್ಯಾಯಾಂಗದ ಮೇಲ್ವಿಚಾರಣೆಯಲ್ಲಿ ಸರ್ವೆ ನಡೆಯಬೇಕು.

ಸಾರ್ವಜನಿಕರಿಗೆ ವಾಸ್ತವಾಂಶ ತಿಳಿಯಬೇಕು ಎಂದು ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾಕ್ಟರ್ ಸುರೇಂದ್ರಕುಮಾರ್ ಜೈನ್ ಒತ್ತಾಯಿಸಿದ್ದಾರೆ .

ಈ ಬಗ್ಗೆ ಮಾತನಾಡಿದ ಅವರು ಮಂಗಳೂರಿನ ಮಸೀದಿ ಜಾಗದಲ್ಲಿ ಮಂದಿರ ಬಗ್ಗೆ ಇದೀಗ ತಿಳಿದುಬಂತು .ಅಲ್ಲಿ ಮೊದಲಿದ್ದ ಮಂದಿರವನ್ನು ಕೆಡವಿ ಮಸೀದಿ ನಿರ್ಮಾಣ ಮಾಡಲಾಗಿದೆ ಎನ್ನುವುದಕ್ಕೆ ಸಾಕ್ಷಿ ದೊರೆತಿದೆ ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು