ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪ್ರಟ್ಪಾತ್ ಅತಿಕ್ರಮಿಸಿ ಮತ್ತು ರಸ್ತೆ ಬದಿಗಳಲ್ಲಿ ಅನಧಿಕೃತ ಗೂಡಂಗಡಿ, ತಳ್ಳುಗಾಡಿ ಮತ್ತು ಇತರ ಬೀದಿಓದಿ ವ್ಯಾಪಾರ ವಹಿವಾಟುಗಳನ್ನು ಎಲ್ಲೆಂದಲ್ಲಿ ನಡೆಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ.
ಸದ್ರಿ ವ್ಯಾಪಾರಿಗಳಿಂದ ಸಾರ್ವಜನಿಕ ಓಡಾಟಕ್ಕೆ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅನಧಿಕೃತ ಒತ್ತುವರಿ ಮತ್ತು ವ್ಯಾಪಾರ ವಹಿವಾಟುಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಕೈಗೊಳ್ಳಲು ಉಲ್ಲೇಖಿತ ನಡವಳಿಯಲ್ಲಿ ಅಧಿಕಾರಿ/ಸಿಬ್ಬಂದಿಗಳ ವಿಶೇಷ ತೆರವು ಕಾರ್ಯಪರ” ತಂಡಗಳನ್ನು ರಚಿಸಲಾಗಿರುತ್ತದೆ.
ಈ ತಂಡಗಳಿಗೆ ಕಾರ್ಯಾಚರಣೆ ಸಮಯದಲ್ಲಿ ಅಗತ್ಯವಾದ ವಾಹನ, ಕೂಲಿಯಾಳು, ಜೆ.ಸಿ.ಬಿ, ಟಿಪ್ಪರ್ ಇತ್ಯಾದಿಗಳನ್ನು ಒದಗಿಸುವರೇ ಈ ಕೆಳಗಿನ ಅಧಿಕಾರಿಗಳಿಗೆ ಸೂಚಿಸಿದೆ.
* ಆರೋಗ್ಯಧಿಕಾರಿಗಳು: ತಂಡಗಳಿಗೆ ಅಗತ್ಯವಾದ ಟಿಪ್ಪರ್ ಮತ್ತು ಕೂಲಿಯಾಳುಗಳನ್ನು ಒದಗಿಸುವುದು. ವಶಪಡಿಸಲಾದ ಸಾಮಾಗ್ರಿಗಳನ್ನು ವಿಲೇಗೊಳಿಸಲು ಸೂಕ್ತ ವ್ಯವಸ್ಥೆ ಮಾಡುವುದು, ಕಾರ್ಯಪಾಲಕ ಅಭಿಯಂತರರು: ಜೆ.ಸಿ.ಬಿ ಹಾಗೂ ಅಧಿಕಾರಿ ಸಿಬ್ಬಂದಿಗಳಿಗೆ ವಾಹನಗಳ ವ್ಯವಸ್ಥೆ ಮಾಡುವುದು.
ಮೇಲ್ಕಂಡಂತ ಆದ್ಯತೆಯ ನೆಲೆಯಲ್ಲಿ ಜರೂರಾಗಿ ಕ್ರಮ ಕೈಗೊಳ್ಳಲು ಆದೇಶಿಸಿದೆ. ನಿರ್ದಿಷ್ಟಗೊಳಿಸಿದ ಕೆಲಸದ ಬಗ್ಗೆ ನಿರ್ಲಕ್ಷ್ಯತನ ತೋರುವ ಅಧಿಕಾರಿ ಯಾ ತಂಡದ ಸದಸ್ಯರ ವಿರುದ್ಧ ಕರ್ತವ್ಯಲೋಪವೆಂದು ಪರಿಗಣಿಸಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು.