ಮಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಪ್ರಾಯೋಜಕತ್ವದಲ್ಲಿ ರಂಗ ಸ್ಪಂದನ ಮಂಗಳೂರು ಸಾದರ ಪಡಿಸಿದ ಸಾಂಸ್ಕೃತಿಕ ರಂಗ ಚಿತ್ತಾರದ ಸಮಾರೋಪ ಸಂಭ್ರಮ ಈ ಬಾರಿಯ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವಜನ ಸಂಘ, ಶ್ರೀ ವೀರವಿನಾಯಕ ಜನಸೇವಾ ಟ್ರಸ್ಟ್ ಸಹಕಾರದೊಂದಿಗೆ ಅಕ್ಷಯ ಸಭಾಂಗಣ ಬೊಕ್ಕಪಟ್ಣ, ಮಂಗಳೂರು ಇಲ್ಲಿ ವೈವಿಧ್ಯಮಯ ಕಾರ್ಯಕ್ರಮ ಗಳೊಂದಿಗೆ ಸಂಪನ್ನಗೊಂಡಿತು.
ಸಮಾಜದಲ್ಲಿ ಆರೋಗ್ಯಕರ ಮನಸ್ಸುಗಳನ್ನು ರೂಪಿಸುವ, ಸಾಮರಸ್ಯ ಬಿಂಬಿಸುವಲ್ಲಿ ಸಾಂಸ್ಕೃತಿಕ ಸಂಭ್ರಮಗಳ ಕೊಡುಗೆ ಮಹಾತ್ತರವಾದುದು. ಈ ನಿಟ್ಟಿನಲ್ಲಿ ನಾಡಿನ ವಿವಿಧೆಡೆ ರಂಗ ಚಟುವಟಿಕೆಗಳನ್ನು ಹಮ್ಮಿ ಕೊಳ್ಳುತ್ತಾ ಬರುತ್ತಿರುವ ಹಿರಿಯ ರಂಗಕರ್ಮಿ ವಿ.ಜಿ. ಪಾಲ್ರವರ ದುಡಿಮೆಯ ಅತ್ಯುತ್ಸಾಹ ಅವರಿಗಿರುವ ರಂಗ ಕಾಳಜಿಯನ್ನು ಪ್ರತಿಬಿಂಬಿಸುತ್ತದೆ ಎಂದು ದೀಪ ಪ್ರಜ್ವಲಿಸಿದ ಹಿರಿಯ ಸಂಗೀತ ನಿರ್ದೇಶಕ, ಮ.ನ.ಪಾ ಸದಸ್ಯರಾದ ಜಗದೀಶ್ ಶೆಟ್ಟಿಯವರು ಕಾರ್ಯಕ್ರಮಕ್ಕೆ ಶುಭ ನುಡಿದರು.
ಅಮೃತ ವಿದ್ಯಾಲಯ ಮಂಗಳೂರು ಇದರ ಕ್ಯಾಂಪಸ್ ಡೈರೆಕ್ಟರ್ ಯತೀಶ್ ಬೈಕಂಪಾಡಿ, ವಿ೪ ಮೀಡಿಯದ ಲಕ್ಷ್ಮಣ್ ಕುಂದರ್ ಸಮಾರಂಭದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಈ ಸಮಾರಂಭದಲ್ಲಿ ಈ ಬಾರಿಯ ದ.ಕ. ಜಿಲ್ಲಾ ರಾಜ್ಯೋ ತ್ಸವ ಪ್ರಶಸ್ತಿ ಪುರಸ್ಕೃತ ಯುವ ಜನ ಸಂಘ ಶ್ರೀ ವೀರವಿನಾಯಕ ಜನಸೇವಾ ಟ್ರಸ್ಟ್, ಅಂತರ್ರಾಷ್ಟ್ರೀಯ ಎತ್ಲೇಟ್ ತರಬೇತುದಾರ ದಿನೇಶ್ ಕುಂದರ್ ಹಾಗೂ ಅಂತರ್ರಾಷ್ಟ್ರೀಯ ಜಾದೂ ಮಾಂತ್ರಿಕ ಕುದ್ರೋಳಿ ಗಣೇ ಶ್ರವರನ್ನು ಅಭಿನಂದಿಸಲಾಯ್ತು. ಪತ್ರಕರ್ತ ಯಶವಂತ್ ಬೋಳೂರು ಅಭಿನಂದನಾ ನುಡಿ ಸಲ್ಲಿಸಿದರು. ರಂಗಸ್ಪಂದನದ ರೂವಾರಿ ವಿ.ಜಿ. ಪಾಲ್ ಪ್ರಾಸ್ತಾವಿಕ ಮಾತಾಡಿದರು.