ಮಂಗಳೂರು : ಭಾರತೀಯ ಕೋಸ್ಟ್ ಗಾರ್ಡ್ನ ಸಮಯೋಚಿತ ಮತ್ತು ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಕಾರವಾರದ ಬಳಿ ಮೀನುಗಾರಿಕಾ ದೋಣಿಗೆ ಬೆಂಕಿ ಹೊತ್ತಿಕೊಂಡು ಸಂಕಷ್ಟದಲ್ಲಿದ್ದ ಏಳು ಮೀನುಗಾರರ ಜೀವವನ್ನು ಉಳಿಸಿದೆ.
ಕರಾವಳಿ ಕಾವಲು ಪಡೆ ಕರ್ನಾಟಕ ತಂಡ ಮೀನುಗಾರರನ್ನು ರಕ್ಷಿಸಿ ದೋಣಿಯಲ್ಲಿದ್ದ ಬೆಂಕಿಯನ್ನು ಶುಕ್ರವಾರ ನಂದಿಸಿದೆ ಎಂದು ಕರಾವಳಿ ರಕ್ಷಣಾ ಪಡೆ ಪ್ರಕಟಣೆ ತಿಳಿಸಿದೆ. ರಾತ್ರಿ 10 ಗಂಟೆ ಸುಮಾರಿಗೆ ನವಮಂಗಳೂರಿನ ಸಾಗರ ರಕ್ಷಣಾ ಉಪಕೇಂದ್ರ (ಎಂಆರ್ಎಸ್ಸಿ)ಗೆ ಐಎಫ್ಬಿ ವರ್ದಾ ಬೆಂಕಿಯಲ್ಲಿ ಸಿಲುಕಿರುವ ಬಗ್ಗೆ ಮಾಹಿತಿ ಲಭಿಸಿತು.
ಕೋಸ್ಟಲ್ ಗಾರ್ಡ್ ರಕ್ಷಣಾ ನೌಕೆ ಸಿ 155 ಸ್ಥಳಕ್ಕೆ ತೆರಳಿ ಏಳು ಮೀನುಗಾರರನ್ನು ಮತ್ತೊಂದು ಮೀನುಗಾರಿಕಾ ದೋಣಿ ಐಎಫ್ಬಿ ವಜ್ರಾಗೆ ಸ್ಥಳಾಂತರಿಸಿತು. ಹವಾಮಾನ ವೈಪರೀತ್ಯದ ನಡುವೆ ಕೋಸ್ಟ್ ಗಾರ್ಡ್ ಬೆಂಕಿಯನ್ನು ನಂದಿಸಲು ಸುಮಾರು ಮೂರು ಗಂಟೆಗಳ ಕಾಲ ತೆಗೆದುಕೊಂಡಿತು.ನಂತರ ಕೋಸ್ಟ್ ಗಾರ್ಡ್ ತಂಡವು ಐಎಫ್ಬಿ ವಜ್ರಕ್ಕೆ ಸುಟ್ಟು ಕರಕಲಾದ ದೋಣಿಯನ್ನು ಕಾರವಾರ ಮೀನುಗಾರಿಕಾ ಬಂದರಿಗೆ ಎಳೆಯಲು ನೆರವು ನೀಡಿತು. ಶನಿವಾರ ಮುಂಜಾನೆ 4 ಗಂಟೆಗೆ ಕಾರವಾರದ ಕರಾವಳಿ ಭದ್ರತಾ ಪೊಲೀಸರಿಗೆ ಹಸ್ತಾಂತರಿಸಲಾಯಿತು. ಕರಾವಳಿ ಪೊಲೀಸರು ಮುಂದಿನ ತನಿಖೆ ನಡೆಸಲಿದ್ದಾರೆ.
ಎಲ್ಲಾ ಏಳು ಮೀನುಗಾರರ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಪ್ರಜ್ವಲ್ ಪ್ರಕರಣದಲ್ಲಿ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ' ಎಂದು ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ…
ಮನೆಯ ಹೊರಗೆ ಆಟಾವಾಡುತ್ತಿದ್ದ ನಾಲ್ಕು ವರ್ಷದ ಮಕ್ಕಳ ಮೇಲೆ ಬೀದಿ ನಾಯಿಗಳ ಗ್ಯಾಂಗ್ ಏಕಾಏಕಿ ದಾಳಿ ಮಾಡಿದ ಘಟನೆ ಪಟ್ಟಣದ…
ಬಸವಣ್ಣನವರ ವಿಚಾರಗಳು ಕೇವಲ ನಮ್ಮ ರಾಜ್ಯಕ್ಕೆ ಮಾತ್ರವಲ್ಲ ಅವು ಇಡೀ ನಮ್ಮ ರಾಷ್ಟ್ರದಾದ್ಯಂತ ಇಂದು ಪ್ರಸ್ತುತ ಇವೆ ಎಂದು ಜಿಲ್ಲಾ…
ಸ್ಯಾಂಡಲ್ವುಡ್ ನಟಿ, ನಿರ್ದೇಶಕಿ ರೂಪಾ ಅಯ್ಯರ್ ಅವರಿಗೆ ಆನ್ ಲೈನ್ ಕಳ್ಳರು ಕಾಟ ಕೊಟ್ಟಿದ್ದಾರೆ. ಸಿಸಿಬಿ ಸಿಸಿಬಿ ಅಧಿಕಾರಿಗಳೆಂದು ಕಾಲ್…
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ವಿಚಾರ, ಸಂಪೂರ್ಣ ಈ ಕೇಸ್ ನಲ್ಲಿ ಅತ್ಯಂತ ಗೊಂದಲವಿದೆ. ನಮ್ಮ ಪಾರ್ಟಿ ಹಾಗೂ…