ಮಂಗಳೂರು: ಬೈಕಂಪಾಡಿ ಬಳಿಯ ಮೀನಕಳಿಯದಲ್ಲಿ ರೌಡಿಶೀಟರ್ ಒಬ್ಬನಿಗೆ ಮಾರಣಾಂತಿಕ ಹಲ್ಲೆ ನಡೆದಿದ್ದು ಗಂಭೀರ ಸ್ಥಿತಿಯಲ್ಲಿ ಯುವಕನನ್ನು ಎಜೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ರಾಜ ಅಲಿಯಾಸ್ ರಾಘವೇಂದ್ರ ಎಂದು ಗುರುತಿಸಲಾಗಿದೆ.
ಸೋಮವಾರ ಸಂಜೆ ಮೀನಕಳಿಯ ಬೀಚ್ ಬಳಿ ಇದ್ದ ರಾಜನನ್ನು ಬೈಕಿನಲ್ಲಿ ಬಂದಿದ್ದ ಇಬ್ಬರು ಅಟ್ಟಿಸಿಕೊಂಡು ಹೋಗಿ ತಲವಾರಿನಲ್ಲಿ ಹಲ್ಲೆ ಮಾಡಿದ್ದಾರೆ. ಕುತ್ತಿಗೆ, ಭುಜ, ಮುಖಕ್ಕೆ ಗಂಭೀರ ಗಾಯಗೊಂಡ ನೆಲಕ್ಕೆ ಬಿದ್ದ ವ್ಯಕ್ತಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸ್ಥಳೀಯರ ಪ್ರಕಾರ ರಾಘವೇಂದ್ರನ ಹಳೆಯ ಗೆಳೆಯರೇ ಈ ಕೃತ್ಯ ನಡೆಸಿದ್ದಾರಂತೆ. ಪಣಂಬೂರು ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.
2019 ನವೆಂಬರ್ 29 ರಾತ್ರಿ ಹನ್ನೊಂದು ಗಂಟೆಗೆ ಸಂದೇಶ್ ಎಂಬಾತನನ್ನು ಕೊಲೆ ಮಾಡಲಾಗಿತ್ತು. ಸುರತ್ಕಲ್ ಪೇಟೆಯ ವೈನ್ ಶಾಪ್ ಬಳಿ ಕುಳಿತಿದ್ದಾಗ 2ತಂಡಗಳ ನಡುವೆ ಜಗಳ ನಡೆದಿದ್ದು ಜೊತೆಗಿದ್ದ ಹಳೆಯ ಗೆಳೆಯರೇ ಸಂದೇಶನನ್ನು ಕೊಲೆ ಮಾಡಿದ್ದರು. ಎರಡೂ ತಂಡಗಳ ಜಗಳದಿಂದಾಗಿ ಗ್ಯಾಂಗ್ ವಾರ್ ನಡೆದಿತ್ತು. ಅನಂತರ ಅದೇ ರಾತ್ರಿ ಕೊಲೆ ನಡೆದಿದ್ದ ಜಾಗದಲ್ಲಿದ್ದ ರಾಜ ಅಲಿಯಾಸ್ ರಾಘವೇಂದ್ರ ಗಣೇಶ್ ಮತ್ತು ಸೋಹೆಲ್ ಎಂಬ ಮೂವರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದರು.
ಸಂದೇಶ್ ಕೊಲೆ ಪ್ರಕರಣ ಸಂಬಂಧಿಸಿ 1ತಿಂಗಳ ಬಳಿಕ ಮತ್ತೆ 6ಮಂದಿಯನ್ನು ಬಂಧಿಸಲಾಗಿತ್ತು ಮನು ಗುಡ್ಡೆ ಕೊಪ್ಲ , ಶರತ್ ಅಲಿಯಾಸ್ ಮುನ್ನಾ , ಪ್ರವೀಣ್ ಕುಂದರ್ , ದೀಪಕ್ ರಾಜ್ ಮತ್ತು ಮಿಥುನ್ ಎಂಬುವವರನ್ನೂ ಪೊಲೀಸರು ಬಂಧಿಸಿದ್ದರು. ಈ ಪೈಕಿ ಪ್ರಮುಖ ಆರೋಪಿ ಮನೋಜ್ ಸಂದೇಶ್ ಪೂಜಾರಿ ಸ್ನೇಹಿತನೇ ಆಗಿದ್ದ ಸಂದೇಶ್ ಮೇಲಿನ ಹಲ್ಲೆ ಸಂದರ್ಭ ಅಡ್ಡ ಬಂದಿದ್ದ ಆತನ ಇತರ ಇಬ್ಬರು ಸ್ನೇಹಿತರ ಮೇಲೂ ಹಲ್ಲೆ ನಡೆದಿತ್ತು. ಇದೀಗ ರಾಜನ ಮೇಲೆ ತಲವಾರು ದಾಳಿ ನಡೆಸಸಲಾಗಿದೆ.