ಬೆಳ್ತಂಗಡಿ; ಲಾಯಿಲದ ಪ್ರಸನ್ನ ಕಾಲೇಜಿನ ವಿದ್ಯಾರ್ಥಿನಿಯೋರ್ವಳು ನಾಪತ್ತೆಯಾಗಿದ್ದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಸನ್ನ ಕಾಲೇಜಿನ ಪ್ರಥಮ ವರ್ಷದ ಬಿ.ಎ.ಎಂ.ಎಸ್.ವಿದ್ಯಾರ್ಥಿನಿ ಬಳ್ಳಾರಿ ಜಿಲ್ಲೆಯ ಕೂಡ್ಲಗಿ ನಿವಾಸಿ ಚಿತ್ರಾಶ್ರೀ (20) ಎಂಬಾಕೆಯೇ ನಾಪತ್ತೆಯಾದ ವಿದ್ಯಾರ್ಥಿನಿ ಯಾಗಿದ್ದಾಳೆ.
ಈಕೆ ಹಾಸ್ಟೇಲಿನಿಂದ ಕಾಲೇಜಿಗೆಂದು ಹೋದಾಕೆ ಕಾಲೇಜಿಗೂ ಹೋಗದೆ ಆಕೆಯ ಮನೆಗೂ ಹೋಗದೆ ನಾಪತ್ತೆಯಾಗಿದ್ದು ಈ ಬಗ್ಗೆ ಹಾಸ್ಟೇಲಿನ ವಾರ್ಡನ್ ನೀಡಿರುವ ದೂರಿನಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ