ಮಂಗಳೂರು : ಶ್ರವಣ್ 22 ಎಂಬ ಯುವಕನ ಮೇಲೆ ಕತ್ತಿಯಿಂದ ಕುತ್ತಿಗೆ ಭಾಗಕ್ಕೆ ಕಡಿದಿದ್ದು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾನೆ . ರಾತ್ರಿ ಘಟನೆ ನಡೆದಿದ್ದು ಬೋಳೂರು ಮತ್ತು ಅಳಕೆ ಗ್ಯಾಂಗ್ ಸದಸ್ಯರ ನಡುವಿನ ಕಾಳಗದಲ್ಲಿ ತಲವಾರು ದಾಳಿ ನಡೆದಿದೆ.
1ವರ್ಷದ ಹಿಂದೆ ಬೋಳು ರಲ್ಲಿ ಇಂದ್ರಜಿತ್ ಎಂಬ ಯುವಕನ ಕೊಲೆ ನಡೆದಿತ್ತು ಬೋಳೂರಿನ ತಲ್ವಾರ್ ಜಗ್ಗ ಮತ್ತು ಸಹಚರರು ಕೃತ್ಯ ಎಸಗಿದ್ದರೂ ಇದರಲ್ಲಿ ಪ್ರಮುಖ ಆರೋಪಿಯ ಸೋದರನಾಗಿರುವ ಅಂಕಿತ್ ಜೊತೆಗೆ ತಿರುಗಾಡುತ್ತಿದ್ದ. ಶ್ರವಣ್ ಮೇಲೆ ಭಾನುವಾರ ರಾತ್ರಿ ಅಳಕೆ ಗ್ಯಾಂಗ್ ಸದಸ್ಯರು ಪ್ರತಿಕಾರ ತೀರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ .
8ಮಂದಿ ಸೇರಿ ಈ ಕೃತ್ಯ ನಡೆಸಿದ್ದಾರೆ ಎನ್ನುವ ಮಾಹಿತಿಗಳಿವೆ ಆರಂಭದಲ್ಲಿ ಕೊಲೆಯತ್ನ ತಿಳಿದು ಪೊಲೀಸರು ಪ್ರಕರಣ ದಾಖಲಿಸಿದ್ದರು ಆ ಬಳಿಕ ಇದೊಂದು ಗ್ಯಾಂಗ್ ವಾರ್ ಎನ್ನುವುದು ತಿಳಿದುಬಂದಿದೆ ಯಾವ್ದೋ ಕೋಮು ಕೃತ್ಯ ನಡೆದಿಲ್ಲ ಶೀಘ್ರದಲ್ಲೇ ಬಂಧಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.