ಮಂಗಳೂರು : ಅಧಿಕಾರಿಗಳು ತಮ್ಮ ಕೆಲಸವನ್ನು ಬಿಟ್ಟು ತಮ್ಮ ಮಾನವೀಯ ಮುಖ ತೋರಿದಾಗ ಜನರ ಮೆಚ್ಚುಗೆಗೆ ಪಾತ್ರರಾಗುತ್ತಾರೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ .
ಬಂಟ್ವಾಳದ ಸಜಿಪದಲ್ಲಿ ಕದ್ರಿ ಗೋಪಾಲನಾಥ್ ಅವರ ಸ್ಮರಣಾರ್ಥ ಸೋಮವಾರ ಕದ್ರಿ ಸಂಗೀತ ಸೌರಭ ದ ವೇಳೆ ಕದ್ರಿಯವರ ಪತ್ನಿ ಸರೋಜಿನಿ ಅಸ್ವಸ್ಥರಾದಾಗ ಡಾಕ್ಟರ್ ರಾಜೇಂದ್ರ ಅವರಿಗೆ ತಕ್ಷಣ ಆರೈಕೆ ಮಾಡಿದರು.
ಕದ್ರಿಯವರ ಹುಟ್ಟಿನ ದಿನದ ಪ್ರಯುಕ್ತ ಕದ್ರಿ ಸಂಗೀತ ಸೌರಭ ಏರ್ಪಡಿಸಲಾಗಿತ್ತು ಈ ಸಂದರ್ಭ ವೇದಿಕೆ ಎದುರು ಕುಳಿತಿದ್ದ ಸರೋಜಿನಿ ಭಾವುಕರಾದರು ಅಲ್ಲದೆ ತಲೆಸುತ್ತು ಬಂದಂತಾಯಿತು ಈ ಸಂದರ್ಭ ಅಲ್ಲಿದ್ದ ಜಿಲ್ಲಾಧಿಕಾರಿ ತಕ್ಷಣ ಅವರನ್ನು ಪರಿಶೀಲಿಸಿ ಅವರಿಗೆ ಸಕ್ಕರೆ ನೀರು ಕೊಟ್ಟು ಆರೈಕೆ ಮಾಡಿದರು.
ಕದ್ರಿ ಗೋಪಾಲ್ ನಾಥರ ಹೆಸರಿನಲ್ಲಿ ಸಂಗೀತ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಹಿರಿಯ ಕಲಾವಿದರಿಗೆ ಡಾಕ್ಟರ್ ಕದ್ರಿ ಗೋಪಾಲನಾಥ್ ಜೀವಿತಾವಧಿ ಸಾಧನೆ ಪ್ರಶಸ್ತಿ ನೀಡಲಾಗುತ್ತಿದ್ದು ಸೋಮವಾರ ಮೋರ್ಸಿಂಗ್ ವಿದ್ವಾನ್ ಡಾಕ್ಟರ್ ಎಲ್ ಭೀಮಾಚಾರ್ಯ ಮತ್ತು ಗಾಯಕ ಹುಲ್ಯಾಳ ಮಹಾದೇವಪ್ಪ ಅವರಿಗೆ ಈ ವರ್ಷದ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.