ಮಂಗಳೂರು : ಇಲ್ಲಿನ ಚಿತ್ರಾಪುರ ಬೀಚ್ ನಲ್ಲಿ ‘ ಕ್ಲಿನ್ ಬೀಚ್ ‘ ಅಭಿಯಾನ ಇಂದು ನಡೆಯಿತು. ಕೇಂದ್ರ ತೆರಿಗೆ ಕಮೀಶಿಯರೇಟ್ ಮತ್ತು ಕಸ್ಟಮ್ಸ್ ಕಮಿಶಿಯರೇಟ್, ಮಂಗಳೂರು ಚಿತ್ರಪುರದ ನಿವಾಸಿಗಳು, ರೋಟರಿ ಕ್ಲಬ್ ಮತ್ತು ಸ್ಥಳೀಯ ಸಂಸ್ಥೆಗಳ ಸಹಯೋಗದೊಂದಿಗೆ ಇಲ್ಲಿ ಆಗಸ್ಟ್ 23 ಸೋಮವಾರ ಬೆಳಿಗ್ಗೆ 7 ಗಂಟೆಗೆ ಚಿತ್ರಾಪುರ ಬೀಚ್ ನಲ್ಲಿ ಸ್ವಚ್ಛ ಬೀಚ್ ಅಭಿಯಾನ ನಡೆಯಿತು.
ನ್ಯೂಸ್ ಕರ್ನಾಟಕ ಜೊತೆ ಮಾತನಾಡಿದ ಯತೀಶ್ ಬೈಕಂಪಾಡಿ, “ಮಳೆಗಾಲದಲ್ಲಿ, ನದಿಗಳ ಹರಿದು ಬರುವ ತ್ಯಾಜ್ಯ ಸಮುದ್ರ ತೀರದಲ್ಲಿ ಸಂಗ್ರಹವಾಗಿರುತ್ತದೆ. ಇದರ ಭಾಗವಾಗಿ ಇಂದು ಬೆಳಿಗ್ಗೆ, ಚಿತ್ರಾಪುರ ಬೀಚ್ನಲ್ಲಿ ಸ್ವಚ್ಛತಾ
ಕಾರ್ಯಕ್ರಮ ನಡೆಸಲಾಯಿತು.
‘ಸ್ವಚ್ಛತಾ ಪಖ್ವಾಡ’ ಅಭಿಯಾನವನ್ನು ಆಗಸ್ಟ್ 16 ರಿಂದ ಆಗಸ್ಟ್ 31 ರವರೆಗೆ ಮಂಗಳೂರಿನ ಕೇಂದ್ರ ತೆರಿಗೆ ಕಮಿಷನ್ ಮತ್ತು ಕಸ್ಟಮ್ಸ್ ಕಮಿಷಿಯರೇಟ್ ಅಧಿಕಾರಿಗಳು ಆಚರಿಸುತ್ತಿದ್ದಾರೆ. ಆಯುಕ್ತ ಇಮಾಮುದ್ದೀನ್ ಅಹ್ಮದ್ ಮತ್ತು ಜಂಟಿ ಆಯುಕ್ತ ಜೋನೆಸ್ ಜಾರ್ಜ್ ಮತ್ತು ಇತರ ಅಧಿಕಾರಿಗಳು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.