News Karnataka Kannada
Monday, April 29 2024
ಮಂಗಳೂರು

ಕನ್ಯಾನ ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಪ್ರಕರಣ: ಉನ್ನತ ಮಟ್ಟದಲ್ಲಿ ತನಿಖೆ ನಡೆಸಲು ಆಗ್ರಹ

Sharan
Photo Credit :
ಬಂಟ್ವಾಳ: ಕನ್ಯಾನ ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಪ್ರಕರಣ ವ್ಯವಸ್ಥಿತ ರೀತಿಯ ಕೊಲೆಯಾಗಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ಬಾಲಕಿ ಕುಟುಂಬಕ್ಕೆ ನ್ಯಾಯ ಸಿಗುವ ತನಕ ವಿಶ್ವ ಹಿಂದೂ ಪರಿಷದ್ ಹೋರಾಟ ನಡೆಸಲಿದ್ದು, ಇದಕ್ಕೆ ದಲಿತ ಸಂಘಟನೆಗಳು ಧ್ವನಿಯಾಗಬೇಕೆಂದು ವಿಶ್ವ ಹಿಂದೂ ಪರಿಷದ್ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಹೇಳಿದರು.
ಅವರು ವಿಟ್ಲ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ  ಆಗ್ರಹಿಸಿದರು. ಕನ್ಯಾನ ಕಣಿಯೂರಿನ ಸಾಹುಲ್ ಹಮೀದ್ 14 ವರ್ಷದ ಬಾಲಕಿಯಲ್ಲಿ ಪ್ರೀತಿಸುವಂತೆ ಪೀಡಿಸುತ್ತಿದ್ದ ಮತ್ತು ಆಕೆಯ ಮೇಲೆ ವಾಮಾಚಾರ ಪ್ರಯೋಗಗಳನ್ನು ಮಾಡಿ ಆಕೆಯ ಮನಸ್ಸನ್ನು ಕೆಡಿಸಿದ್ದಾನ. ಬಾಲಕಿಗೆ ಬುರ್ಕಾ ತೊಡಿಸಿ ಅವನ ಕುಟುಂಬದವರ ಸಹಕಾರದಿಂದ ಮನೆ ಕರೆದುಕೊಂಡು ಹೋಗುತ್ತಿದ್ದ ಬಗ್ಗೆ ಆಕೆಯ ತಾಯಿ ಆರೋಪಿಸುತ್ತಾರೆ. ಇದೊಂದು ವ್ಯವಸ್ಥಿತ ಲವ್ ಜಿಹಾದ್ ಪ್ರಕರಣವಾಗಿದೆ. ಯುವತಿ ಆತ್ಮಹತ್ಯೆ ಮಾಡಿಕೊಂಡ ಸಮಯ ಮನೆಯ ಒಂದು ಬಾಗಿಲು ತೆರೆದಿತ್ತು ಮತ್ತು ಯುವತಿ ಕುತ್ತಿಗೆಯಲ್ಲಿ ಬೆರಳಿನ ಗುರುತೊಂದು ಇತ್ತೆಂಬ ಮಾಹಿತಿಯಿದೆ ಎಂದು ವಿವರಿಸಿದರು.
ಈ ಯುವಕ ಹಲವರ ಜತೆಗೆ ಸಂಪರ್ಕದಲ್ಲಿದ್ದು, ಕಿರುಕುಳವನ್ನು ನೀಡುತ್ತಿದ್ದ ಎಂಬ ಮಾಹಿತಿಯಿದೆ. ವಿಟ್ಲ ಪೊಲೀಸರಿಂದ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. 24 ಗಂಟೆ ಕಳೆದರೂ ಆರೋಪಿಯ ಬಂಧನ ಮಾಡುವ ಕಾರ್ಯವಾಗಲೀ, ಮನೆಗೆ ತೆರಳಿ ತನಿಖೆ ನಡೆಸುವ ಕಾರ್ಯವಾಗಲೀ ಮಾಡಿಲ್ಲ. ಆರೋಪಿಯನ್ನು ಹಾಗೂ ಆತನ ಕುಟುಂಬವನ್ನು ಬಂಧಿಸಬೇಕು. ಇಲ್ಲದಿದ್ದರೆ ನ್ಯಾಯ ಸಿಗುವ ತನಕ ಹೋರಾಟ ನಡೆಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷದ್ ಜಿಲ್ಲಾ ಉಪಾಧ್ಯಕ್ಷ ಕೃಷ್ಣಪ್ಪ ಕಲ್ಲಡ್ಕ, ವಿಟ್ಲ ತಾಲೂಕು ಅಧ್ಯಕ್ಷ ಪದ್ಮನಾಭ ಕಟ್ಟೆ, ಕನ್ಯಾನ ಅಧ್ಯಕ್ಷ ಲೋಕೇಶ್, ಭಜರಂಗದಳ ಕನ್ಯಾನ ಸಂಚಾಲಕ ಚಂದ್ರಹಾಸ ಉಪಸ್ಥಿತರಿದ್ದರು.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು