News Karnataka Kannada
Thursday, May 02 2024
ಮಂಗಳೂರು

ಅಕ್ಷಯ ತೃತೀಯ ಸಂಪನ್ನ: ಈ ವರ್ಷ ಮಂಗಳೂರಿನಲ್ಲಿ 50 ಕೋಟಿ ರೂ. ಮೌಲ್ಯದ ಚಿನ್ನ ಮಾರಾಟ

Gold
Photo Credit : News Kannada

ಮಂಗಳೂರು : ಕರಾವಳಿ ಜಿಲ್ಲೆಗಳಲ್ಲಿ ಭಾರೀ ಚಿನ್ನ ಖರೀದಿಯೊಂದಿಗೆ ಅಕ್ಷಯ ತೃತೀಯ ಸಂಪನ್ನಗೊಂಡಿದೆ. ಮಂಗಳೂರು ನಗರದಲ್ಲೇ ಸುಮಾರು 50 ಕೋಟಿ ರೂ. ಮೌಲ್ಯದ ಚಿನ್ನ ಮಾರಾಟವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 35ರಷ್ಟು ಏರಿಕೆಯಾಗಿದೆ.

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಿದರೆ ಸಂಪತ್ತು ಅಕ್ಷಯವಾಗುತ್ತದೆ ಎಂಬ ನಂಬಿಕೆ ಭಾರತೀಯರಲ್ಲಿದೆ. ಈ ಹಿನ್ನೆಲೆಯಲ್ಲೇ ಬಡವರು ಮೂಗು ಬೊಟ್ಟು ಖರೀದಿಸಿ ಸಂಪತ್ತು ವೃದ್ಧಿಯಾಗಲಿ ಎಂದು ದೇವರಲ್ಲಿ ಬೇಡಿಕೊಂಡರೆ, ಮೆಷಿನ್ ಇಟ್ಟು ನೋಟು ಎಣಿಸುವವರು, ಭ್ರಷ್ಟಾಚಾರ, ಲಂಚಾವತಾರ, ಕಮಿಷನ್ ನಿಂದ ಹಣ ಮಾಡಿದ ದೊರೆಗಳು ಕೆಜಿಗಟ್ಟಲೆ ಬಂಗಾರ ಖರೀದಿಸಿ ಮತ್ತಷ್ಟು ಸಂಪತ್ತು ವೃದ್ಧಿಗೆ ಮತ್ತೆ ದೇವರ ಮೊರೆ ಹೋಗುತ್ತಾರೆ. ಆದ್ದರಿಂದಲೇ ಮಂಗಳೂರು ನಗರವೊಂದರಲ್ಲೇ ಸುಮಾರು 50 ಕೋಟಿ ರೂ. ಮೌಲ್ಯದ ಚಿನ್ನವನ್ನು ಗ್ರಾಹಕರು ಖರೀದಿಸಿದ್ದಾರೆ. ಮಲಬಾರ್, ಅಲುಕಾಸ್, ತನಿಷ್ಕಾದಂತಹ ದೊಡ್ಡ ಜುವೆಲ್ಲರಿ ಶಾಪ್ ಮಾತ್ರವಲ್ಲದೆ ಸಣ್ಣ ಅಂಗಡಿಗಳಿಂದಲೂ ಚಿನ್ನ ಖರೀದಿಯಾಗಿದೆ. ಅಕ್ಷಯ ತೃತೀಯ ಮತ್ತು ಅದರ ಹಿಂದಿನ ದಿನ ಸೇರಿ ಒಟ್ಟು 50 ಕೋಟಿ ರೂ.ಗಳ ವ್ಯವಹಾರ ನಡೆದಿದೆ.

ಭಾರತದಲ್ಲಿ ಹಳದಿ ಲೋಹಕ್ಕೆ ಬಹಳಷ್ಟು ಮಹತ್ವ ಇದೆ. ಭಾರತೀಯ ಮಹಿಳೆಯರಿಗೆ ಚಿನ್ನದ ಹುಚ್ಚು ಜಾಸ್ತಿ. ಚಿನ್ನಕ್ಕಾಗಿ ಡೈವೋರ್ಸ್ ಆದ ಘಟನೆಗಳು ಕೂಡ ಇದೆ.

ಚಿನ್ನವನ್ನು’ ನ್ಯೂಟ್ರಲ್ ಕರೆನ್ಸಿ’ ಎಂದೇ ಪರಿಗಣಿಸಲಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನಲ್ಲಿರುವ ಚಿನ್ನದ ಮೌಲ್ಯದ ಮೇಲೆ ನೋಟು ಮುದ್ರಿಸುತ್ತದೆ. ಚಿನ್ನದ ರೇಟ್ ಹೆಚ್ಚಾದಾಗ ಆರ್ ಬಿಐ ಬಂಗಾರ ಮಾರುತ್ತದೆ. ಹಾಗೆ ಮತ್ತೆ ಖರೀದಿಸಿ ಸಮತೋಲವನ್ನು ಕಾಪಾಡುತ್ತದೆ. ಸಾಮಾನ್ಯವಾಗಿ ಡಾಲರ್ ಮೌಲ್ಯ ಕುಸಿದಾಗ ಚಿನ್ನದ ಬೆಲೆ ಏರಿಕೆಯಾಗುತ್ತದೆ. ಡಾಲರ್ ಮೌಲ್ಯ ಏರಿಕೆಯಾದಾಗ ಚಿನ್ನದ ಬೆಲೆ ಕುಸಿಯುತ್ತದೆ. ಪ್ರಸ್ತುತ ಒಂದು ಗ್ರಾಮ್ ಚಿನ್ನಕ್ಕೆ 5300 ರೂ. ಬೆಲೆ ಇದೆ. ವಿಶೇಷವೆಂದರೆ ರಾಜ್ಯದಲ್ಲಿ ನೆಲೆಸಿರುವ ಧರ್ಮ ಸಂಘರ್ಷ ಚಿನ್ನ ಖರೀದಿ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು