ಕಾಸರಗೋಡು: ಬೇಕಲ ರೆಸಾರ್ಟ್ ನಿಂದ ಸುಮಾರು ಆರು ಲಕ್ಷ ರೂ . ಕಳವುಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ರೆಸಾರ್ಟ್ ನ ಸಿಬ್ಬಂದಿ, ಚಿತ್ರದುರ್ಗ ನಿವಾಸಿಗಳಾದ ದಂಪತಿಯನ್ನು ಬೇಕಲ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಚಿತ್ರದುರ್ಗದ ಪ್ರದೀಪ್ ( ೨೫) ಮತ್ತು ಪತ್ನಿ ನಿವೇದಿತಾ ( ೨೪) ಬಂಧಿತರು.
ಬೇಕಲ ಕಾಫಿಲ್ ಬೀಚ್ ರಸ್ತೆಯ ಬೇಕಲ ಹೋಂ ಸ್ಟೇ ರೆಸಾರ್ಟ್ ನಿಂದ ನಗದು ಕಳವುಗೈದಿದ್ದರು ರೆಸಾರ್ಟ್ ನ ರಿಶಿಪ್ಸನ್ ಕೊಠಡಿಯ ಕಪಾಟಿನಲ್ಲಿರಿಸಲಾಗಿದ್ದ ನಗದು ದಿನಗಳ ಹಿಂದೆ ನಾಪತ್ತೆಯಾಗಿತ್ತು. ಈ ಬಗ್ಗೆ ಬೇಕಲ ಠಾಣಾ ಪೊಲೀಸರಿಗೆ ರೆಸಾರ್ಟ್ ಮಾಲಕ ಕೆ . ಕೆ ಪ್ರದೀಪ್ ದೂರು ನೀಡಿದ್ದರು. ಸಿಬ್ಬಂದಿಗಳೇ ಈ ಕಳವು ನಡೆಸಿರಬಹುದು ಎಂದು ಸಂಶಯಿಸಲಾಗಿತ್ತು.
ಈ ನಡುವೆ ಇಬ್ಬರು ರೆಸಾರ್ಟ್ ನಿಂದ ತಲೆ ಮರೆಸಿಕೊಂಡಿದ್ದರು. ಬೇಕಲ ಠಾಣಾ ಸಬ್ ಇನ್ಸ್ ಪೆಕ್ಟರ್ ಎಂ . ರಜನೀಶ್ ಹಾಗೂ ಎ ಎಸ್ ರಾಜನ್ ನೇತೃತ್ವದಲ್ಲಿ ನಡೆಸಿದ ತನಿಖೆಯಿಂದ ಚಿತ್ರದುರ್ಗದ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳವು ಬಳಿಕ ಊರಿಗೆ ಪರಾರಿಯಾಗಿದ್ದ ಇವರನ್ನು ಮೊಬೈಲ್ ಲೊಕೇಶನ್ ಮೂಲಕ ಪತ್ತೆ ಹಚ್ಚಿ ಬಂಧಿಸಲಾಯಿತು.
ಕಳವುಗೈದ ಆರು ಲಕ್ಷ ರೂ . ಗಳಲ್ಲಿ ೨. ೧೦ ಲಕ್ಷ ರೂ . ನಿಂದ ಒಂದು ಹೊಸ ಬೈಕ್ ಹಾಗೂ ಎರಡು ಮೊಬೈಲ್ ಫೋನ್ ನ್ನು ಖರೀದಿಸಿದ್ದರು. ತನಿಖಾ ತಂಡ ವಶಪಡಿಸಿಕೊಂಡ ಬೈಕ್ ನ್ನು ಚಿತ್ರದುರ್ಗ ಪೊಲೀಸ್ ಠಾಣೆ ಯ ಕಸ್ಟಡಿ ಯಲ್ಲಿರಿಸಲಾಗಿದೆ. ಇಬ್ಬರನ್ನು ಬೇಕಲ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ