ಕಾಸರಗೋಡು: ಕರ್ನಾಟಕದಿಂದ ಉಪ್ಪಳಕ್ಕೆ ಆಟೋ ರಿಕ್ಷಾದಲ್ಲಿ ಸಾಗಾಟ ಮಾಡುತ್ತಿದ್ದ ಗಾಂಜಾವನ್ನು ಮಂಜೇಶ್ವರ ಪೊಲೀಸರು ವಶಡಿಸಿಕೊಂಡಿದ್ದು, ಬಂಟ್ವಾಳ ನಿವಾಸಿಗಳಿಬ್ಬರನ್ನು ಬಂಧಿಸಿದ್ದಾರೆ.
ಬಂಟ್ವಾಳ ಬಿ.ಸಿ ರೋಡ್ ನ ಮುಹಮ್ಮದ್ ಇಮ್ತಿಯಾಜ್ (38) ಮತ್ತು ಮುಹಮ್ಮದ್ ಜುನೈದ್ (29) ಬಂಧಿತರು. ಅವರಿಂದ ಎರಡೂವರೆ ಕಿಲೋ ಗಾಂಜಾವನ್ನು ವಶಪಡಿಸಿಕೊಂಡಿದೆ.
ಆದಿತ್ಯವಾರ ರಾತ್ರಿ ಮಂಜೇಶ್ವರ ಕೆದಂಬಾಡಿ ಕಡೆಯಿಂದ ಕುಂಜತ್ತೂರಿಗೆ ಒಳದಾರಿಯಾಗಿ ಬರುತ್ತಿದ್ದ ಆಟೋ ರಿಕ್ಷಾವನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ. ಉಪ್ಪಳ ಕಡೆಗೆ ಸಾಗಾಟ ಮಾಡುತ್ತಿದ್ದುದಾಗಿ ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ.