ಕಾಸರಗೋಡು: ಚಲಿಸುತ್ತಿದ್ದ ಬೈಕ್ ನ ಟಯರ್ ಬೇರ್ಪಟ್ಟು ಉಂಟಾದ ಅಪಘಾತದಲ್ಲಿ ಸವಾರ ಮೃತಪಟ್ಟ ಘಟನೆ ಸೋಮವಾರ ಬೆಳಿಗ್ಗೆ ಮುನ್ನಾಡ್ ನಲ್ಲಿ ನಡೆದಿದೆ.
ಮುನ್ನಾಡ್ ತೋರ್ಕುಲದ ಕೆ. ಸುಧೀಶ್ (28) ಮೃತ ಪಟ್ಟವರು . ಸ್ನೇಹಿತ ಶರತ್ ಜೊತೆ ತೆರಳು ತ್ತಿದ್ದಾಗ ಬೈಕ್ ನ ಹಿಂಬದಿ ಚಕ್ರ ಬೇರ್ಪ ಟ್ಟಿದ್ದು, ಹಿಂದುಗಡೆ ಕುಳಿತ್ತಿದ್ದ ಸುಧೀ ಶ್ ರಸ್ತೆ ಗೆಸೆಲ್ಪಟ್ಟಿದ್ದು, ಗಂಭೀರ ಗಾಯ ಗೊಂಡವರನ್ನು ಪರಿಯಾರಂನ ವೈದ್ಯಕೀಯ ಕಾಲೇಜು ಆಸ್ಪತ್ರಗೆ ಕೊಂಡೊಯ್ದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತ ಪಟ್ಟರು. ಬೈಕ್ ಚಲಾಯಿಸಿದ ಶರತ್ ಗೂ ಗಾಯಗಳಾಗಿವೆ. ಬೇಡಡ್ಕ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.