ಕಾಸರಗೋಡು : ಬೆಂಕಿ ತಗುಲಿ ಗಂಭೀರ ಸುಟ್ಟು ಗಾಯಗೊಂಡಿದ್ದ ಯುವತಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ಪೊಯಿನಾಚಿ ಸಮೀಪ ನಡೆದಿದೆ.
ಪೊಯಿನಾಚಿ ಸಮೀಪದ ಬಾರ ಅಡ್ಕತ್ತ ಬೈಲ್ ನ ರತ್ನಾಕರ ನಾಯರ್ ರವರ ಪುತ್ರಿ ಪಿ. ರಶ್ಮಿ (23) ಮೃತ ಪಟ್ಟವಳು. ಜನವರಿ 21 ರಂದು ಬೇರ್ಕದಲ್ಲಿರುವ ಮಾವನ ಮನೆಯಲ್ಲಿ ಒಲೆಯಿಂದ ಬೆಂಕಿ ತಗಲಿದ್ದು, ಸುಟ್ಟ ಗಾಯಗಳೊಂದಿಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ .