ಕಾಸರಗೋಡು : ವೇತನ ವಿಳಂಬವನ್ನು ಪ್ರತಿಭಟಿಸಿ ಕೆ ಎಸ್ ಆರ್ ಟಿ ಸಿ ನೌಕರರು ಶುಕ್ರವಾರ ಬಸ್ಸು ಸಂಚಾರ ಸ್ಥಗಿತಗೊಳಿಸಿ ಮುಷ್ಕರ ನಡೆಸಿದರು.
ಕಾಸರಗೋಡು ಡಿಫೋ ದಿಂದ ನಾಲ್ಕು ಬಸ್ಸು ಗಳು ಮಾತ್ರ ಸಂಚಾರ ನಡೆಸಿದವು. ಬಸ್ಸು ಮುಷ್ಕರದಿಂದ ಪ್ರಯಾಣಿಕರು ಸಮಸ್ಯೆಗೆ ಸಿಲುಕಿದರು.
ಬೆಳಿಗ್ಗೆ ೧೦. ೩೦ ರ ತನಕ ಕಾಸರಗೋಡು – ಕಣ್ಣೂರು ಟೌನ್ ಟು ಟೌನ್ , ಕಾಸರಗೋಡು – ಮಂಗಳೂರು, ಕಾಸರಗೋಡು – ಸುಳ್ಯ , ಕಾಸರಗೋಡು – ಕಾಞ೦ಗಾಡ್ ರೂಟ್ ನಲ್ಲಿ ತಲಾ ನಾಲ್ಕು ಬಸ್ಸುಗಳು ಸಂಚಾರ ನಡೆಸಿದವು. ಬಳಿಕ ಈ ಬಸ್ಸುಗಳು ಸಂಚಾರ ಸ್ಥಗಿತಗೊಳಿಸಿದವು.
ಬಿ ಎಂ ಎಸ್ , ಎ ಐ ಟಿ ಯು ಸಿ ಸಂಘಟನೆಗಳು ಮುಷ್ಕರಕ್ಕೆ ಕರೆನೀಡಿದ್ದವು. ಸಿ ಐ ಟಿ ಯು ಮುಷ್ಕರಕ್ಕೆ ಬೆಂಬಲ ನೀಡುವುದಿಲ್ಲ ಎಂದು ಘೋಷಿಸಿದ್ದರೂ ಕೊನೆ ಕ್ಷಣದಲ್ಲಿ ಮುಷ್ಕರದಲ್ಲಿ ಪಾಲ್ಗೊಂಡಿದ್ದು , ಇದರಿಂದ ಸಂಚಾರ ಸಂಪೂರ್ಣ ಸ್ಥಗಿತ ಗೊಂಡಿತ್ತು.