ಕಾಸರಗೋಡು : ರಾಷ್ಟ್ರಪತಿ ರಮಾನಾಥ್ ಕೋವಿಂದ್ ಕಾಸರಗೋಡು ಭೇಟಿ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳು ಸಿದ್ಧತೆ ಕುರಿತು ಅವಲೋಕನ ನಡೆಸಿದರು.
ರಾಷ್ಟ್ರಪತಿ ಪಾಲ್ಗೊಳ್ಳುವ ಪೆರಿಯದ ಕೇಂದ್ರ ವಿಶ್ವವಿದ್ಯಾನಿಲಯ ಕ್ಯಾಂಪಸ್ ಹಾಗೂ ಹೆಲಿಪ್ಯಾಡ್ ನಲ್ಲಿ ಪೂರ್ವ ಸಿದ್ಧತೆ ಬಗ್ಗೆ ಅವಲೋಕನ ನಡೆಸಲಾಯಿತು.
ಜಿಲ್ಲಾ ಪೊಲೀಸ್ ಪಿ . ಬಿ ರಾಜೀವ್ , ಉಪಜಿಲ್ಲಾಧಿಕಾರಿ ಡಿ . ಆರ್ ಮೇಘಶ್ರೀ , ಕಂದಾಯಾಧಿಕಾರಿ ಅತುಲ್ ಸ್ವಾಮಿನಾಥ್ ಹಾಗೂ ಕೇಂದ್ರ ವಿ. ವಿ ಯ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಡಿ . 21 ರಂದು ರಾಷ್ಟಪತಿಯವರು ಕಾಸರಗೋಡಿಗೆ ಆಗಮಿಸಲಿದ್ದು , ಸಂಜೆ 3. 30 ಕ್ಕೆ ಪೆರಿಯ ಕೇಂದ್ರ ವಿ . ವಿ ಯ ಪದವಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಳ್ಳುವರು.