ಕಾಸರಗೋಡು : ಕ್ರೈಸ್ತರು ಗುರುವಾರ ಯೇಸು ಕ್ರಿಸ್ತರ ಕೊನೆಯ ಭೋಜನದ ದಿನವನ್ನು ಆಚರಿಸಿದರು. ಗುರುವಾರ ಸಂಜೆ ಚರ್ಚ್ಗಳಲ್ಲಿ ಮತ್ತು ಇತರ ಕ್ರೈಸ್ತ ಪ್ರಾರ್ಥನಾ ಮಂದಿರಗಳಲ್ಲಿ ವಿಶೇಷ ಪ್ರಾರ್ಥನೆಗಳು ನಡೆದವು.
ಮಣಿಯಂಪಾರೆ ಸಂತ ಲೋರೆನ್ಸ್ ಇಗರ್ಜಿಯಲ್ಲಿ ನಡೆದ ಬಲಿಪೂಜೆ ಹಾಗೂ ವಿಧಿವಿಧಾನಕ್ಕೆ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ವಂದನೀಯ ಫಾದರ್ ಪೀಟರ್ ಪಾವ್ಲ್ ಸಲ್ದಾನ್ಹ ವಂದನೀಯ ಫಾದರ್ ಪೀಟರ್ ಪಾವ್ಲ್ ಸಲ್ದಾನ್ಹ ನೇತೃತ್ವ ನೀಡಿದರು
ಯೇಸು ಕ್ರಿಸ್ತರು ತಮ್ಮ ಕೊನೆಯ ಭೋಜನದ ಸಂದರ್ಭದಲ್ಲಿ 12 ಮಂದಿ ಶಿಷ್ಯರ ಪಾದ ತೊಳೆದು ಸೇವೆಯ ಸಂಸ್ಕಾರವನ್ನು ಪ್ರತಿಪಾದಿಸಿದ್ದರು. ಅದರ ಸಂಕೇತವಾಗಿ 12 ಜನ ಕ್ರೈಸ್ತ ಭಕ್ತರ ಪಾದಗಳನ್ನು ತೊಳೆದರು ಮಣಿಯಂಪಾರೆ ಚರ್ಚ್ ನ ಧರ್ಮಗುರು ಫಾದರ್ ನೆಲ್ಸನ್ ಡಿ ಅಲ್ಮೇಡಾ ಬಲಿಪೂಜೆ ಹಾಗೂ ವಿಧಿವಿಧಾನಕ್ಕೆ ಸಹಕರಿಸಿದರು