ಕಾಸರಗೋಡು : ಮನೆಯ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಎಂಟು ಪವನ್ ಚಿನ್ನಾಭರಣ ಮತ್ತು 1. 36 ಲಕ್ಷ ರೂ . ಕಳವುಗೈದ ಘಟನೆ ಮಂಜೇಶ್ವರ ಠಾಣಾ ವ್ಯಾಪ್ತಿಯ ಉಪ್ಪಳದಲ್ಲಿ ನಡೆದಿದೆ. ಫಿರ್ದೋಸ್ ನಗರದ ಶೇಖ್ ಇಬ್ರಾಹಿಂ ರವರ ಮನೆಯಲ್ಲಿ ಕಳ್ಳತನ ನಡೆದಿದ್ದು , ಕುಟುಂಬ ವು ಮುಂಬೈ ಯಲ್ಲಿ ವಾಸವಾಗಿದೆ.
ಜನವರಿಯಲ್ಲಿ ಊರಿಗೆ ಬಂದು ಮರಳಿದ್ದರು. ಗುರುವಾರದಂದು ಮನೆಯ ಎರಡನೇ ಅಂತಸ್ತಿನ ಬಾಗಿಲು ತೆರೆದಿರುವುದು ಗಮನಿಸಿದ ಸಂಬಂಧಿಕರು ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದು , ಪೊಲೀಸರು ತಪಾಸಣೆ ನಡೆಸಿದಾಗ ಮನೆಯ ಎರಡನೇ ಅಂತಸ್ತಿನ ಬಾಗಿಲು ಒಡೆದು ಕಳ್ಳರು ಒಳನುಗ್ಗಿ ಕೃತ್ಯ ನಡೆಸಿದ್ದಾರೆ .
ಕಪಾಟಿನಲ್ಲಿರಿಸಲಾಗಿದ್ದ ಚಿನ್ನಾಭರಣ ಮತ್ತು ನಗದು ಕಳವು ಮಾಡಲಾಗಿದೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.