ಕಾಸರಗೋಡು : ತಂದೆಯನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಆದೂರು ಠಾಣಾ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.
ಆದೂರು ಪಾಂಡಿ ವೆಳ್ಳರಿಕಯ ದ ಬಾಲಕೃಷ್ಣ ನಾಯ್ಕ್ ರವರ ಕೊಲೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪುತ್ರ ನರೇಂದ್ರ ಪ್ರಸಾದ್ (27) ನನ್ನು ಬಂಧಿಸಿ ಕಾಸರಗೋಡು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು .
ಮಂಗಳವಾರ ಮುಂಜಾನೆ ಕೃತ್ಯ ನಡೆದಿತ್ತು. ಪಾನಮತ್ತ ರಾಗಿದ್ದ ಇಬ್ಬರ ನಡುವೆ ಜಗಳ ವಾಗಿದ್ದು, ಈ ಸಂದರ್ಭದಲ್ಲಿ ನೆಲಕ್ಕೆ ಬಿದ್ದಿದ್ದ ಬಾಲಕೃಷ್ಣ ನಾಯ್ಕ್ ಸ್ಥಳದಲ್ಲೇ ಮೃತ ಪಟ್ಟಿದ್ದರು. ಮೃತ ದೇಹವನ್ನು ಪರಿಯಾ ರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕ ರಿ ಗೆ ಬಿಟ್ಟು ಕೊಡಲಾಯಿತು.