ಕಾಸರಗೋಡು : ಕಾರು ನಿಯಂತ್ರಣ ತಪ್ಪಿ ಮನೆಯೊಂದರ ಆವರಣ ಗೋಡೆಗೆ ಬಡಿದ ಪರಿಣಾಮ ಓರ್ವ ಮೃತಪಟ್ಟು , ಮೂವರು ಗಾಯಗೊಂಡ ಘಟನೆ ಗುರುವಾರ ರಾತ್ರಿ ರಾಜ್ಯ ಹೆದ್ದಾರಿಯ ಚಿತ್ತಾರಿ ಚಾಮುಂಡಿಕುನ್ನು ಎಂಬಲ್ಲಿ ನಡೆದಿದೆ.
ಕೂಟಕಣಿಯ ಸಾದತ್ ( ೩೫) ಮೃತಪಟ್ಟವರು. ಜೊತೆಗಿದ್ದ ಪ್ರಸಾದ್ , ಸುಧೀಶ್ ಮತ್ತು ಸಾಬಿರ್ ಗಂಭೀರ ಗಾಯಗೊಂಡಿದ್ದು , ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ .
ಕಾ ಞ೦ಗಾಡ್ ನಿಂದ ಕಾಸರಗೋಡು ಕಡೆಗೆ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ನಡೆದಿದ್ದು , ಆವರಣ ಗೋಡೆ ಕಾರಿನ ಮೇಲೆ ಬಿದ್ದಿದೆ. ಕಾರಿನಲ್ಲಿ ಸಿಲುಕಿದ್ದ ನಾಲ್ವರನ್ನು ಅಗ್ನಿಶಾಮಕ ದಳದ ಸಿಬಂದಿಗಳು ಹಾಗೂ ಪರಿಸರವಾಸಿಗಳು ಹೊರತೆಗೆದು ಮಂಗಳೂರು ಆಸ್ಪತ್ರೆಗೆ ಕೊಂಡೊಯ್ದರೂ ಸಾಜದ್ ಮೃತಪಟ್ಟರು. ಹೊಸದುರ್ಗ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.