ಕಾಸರಗೋಡು : ಜಿಲ್ಲೆಯಲ್ಲಿ ಆಹಾರ ಸುರಕ್ಷಾ ಇಲಾಖೆ ತಪಾಸಣೆ ಮುಂದುವರಿಯುತ್ತಿದ್ದು , ಹೊರ ರಾಜ್ಯಗಳಿಂದ ಮೀನು ಹೇರಿಕೊಂಡು ಜಿಲ್ಲೆಗಾಗಮಿಸುವ ವಾಹನಗಳನ್ನು ಮಂಜೇಶ್ವರ ಹಾಗೂ ತಲಪಾಡಿಯಲ್ಲಿ ತಪಾಸಣೆ ನಡೆಸಲಾಯಿತು . ೨೫ ವಾಹನಗಳನ್ನು ೪೨ ಸ್ಯಾಂಪಲ್ ಗಳನ್ನು ಸಂಗ್ರಹಿಸಲಾಯಿತು.
ಮೀನುಗಳನ್ನು ಫಾರ್ಮೋಲಿನ್ , ಅಮೋನಿಯ ಮೊದಲಾದ ರಾಸಾಯನಿಕ ಪದಾರ್ಥದ ಅಂಶ ಒಳಗೊಂಡಿದೆಯೇ ಎಂಬ ಬಗ್ಗೆ ತಪಾಸಣೆ ನಡೆಸಲಾಗಿದೆ.
ಕರ್ನಾಟಕ , ಗೋವಾ ಹಾಗೂ ಇತರ ರಾಜ್ಯಗಳಿಂದ ಬರುವ ವಾಹನಗಳನ್ನು ತಪಾಸಣೆಗೊಳಪಡಿಸಲಾಯಿತು.
ಉಪ್ಪಳದ ಹಲವು ಅಂಗಡಿಗಳಿಗೂ ದಾಳಿ ನಡೆಸಿದ ಇಲಾಖೆ ಅಧಿಕಾರಿಗಳು ಆಹಾರ ವಸ್ತುಗಳ ಗುಣಮಟ್ಟ ಪರಿಶೀಲಿಸಿದರು .
ಶವರ್ಮ ಸೇವಿಸಿ ಚೆರ್ವತ್ತೂರಿ ನಲ್ಲಿ ವಿದ್ಯಾರ್ಥಿನಿ ಮೃತಪಟ್ಟ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಆಹಾರ ಸುರಕ್ಷಾ ಇಲಾಖೆ ತಪಾಸಣೆ ಚುರುಕು ಗೊಳಿಸಿದೆ.