ಕಾಸರಗೋಡು : ಅಲೆಗಳ ಅಬ್ಬರಕ್ಕೆ ಮೀನುಗಾರಿಕಾ ಬೋಟ್ ಮಗುಚಿ ದಡಕ್ಕೆ ಅಪ್ಪಳಿಸಿದ ಘಟನೆ ಶನಿವಾರ ಕಾಞ೦ಗಾಡ್ ನ ಬಲ್ಲ ತೀರದಲ್ಲಿ ನಡೆದಿದ್ದು , ಬೋಟ್ ನಲ್ಲಿದ್ದ ಐವರು ಅಪಾಯದಿಂದ ಪಾರಾಗಿದ್ದಾರೆ.
ಶುಕ್ರವಾರ ರಾತ್ರಿ ತೈಕಡಪ್ಪುರದಿಂದ ಮೀನುಗಾರಿಕೆಗೆ ತೆರಳಿದ್ದ ಅಲ್ ರಹೀಮ್ ಎಂಬ ಬೋಟ್ ಈ ದುರಂತಕ್ಕೀಡಾಗಿದೆ. ಬೋಟ್ ನಲ್ಲಿದ್ದ ಒಡಿಸ್ಸಾ ದ ಅಂಜನ್ ಮಲಿಕ್ , ವಿಕಾಸ್ ಮಲಿಕ್, ವರುಣ್ ದಾಸ್ , ಚೈತ್ರ ದಾಸ್ ಅಪಾಯದಿಂದ ಪಾರಾದವರು. ಬೋಟ್ ಸಂಪೂರ್ಣ ಹಾನಿಗೊಂಡಿದ್ದು, ಎಂಟು ಲಕ್ಷ ರೂ . ನಷ್ಟ ಅಂದಾಜಿಸಲಾಗಿದೆ.