ಪರಶುರಾಮ ಕಂಚಿನ ಪ್ರತಿಮೆ ವಿಚಾರ ಅಸಲಿ-ನಕಲಿ ಪ್ರತಿಪಾದಕರ ಮೇಲೇ ಎಫ್‌ ಐ ಆರ್

ಮಂಗಳೂರು: ಕಾರ್ಕಳ ಪರಶುರಾಮ ಕಂಚಿನ ಪ್ರತಿಮೆ ನಕಲಿ ವಿಚಾರಕ್ಕೆ ಸಂಬಂಧಸಿದಂತೆ ಅಸಲಿ -ನಕಲಿ ಪ್ರತಿಪಾದಕರ ನಡುವೆ ಇದೀಗ ಎಫ್ ಐ ಆರ್ ಜಟಾಪಟಿ ಶುರುವಾಗಿದೆ.

ಅಸಲಿ -ನಕಲಿ ಎಂದು ಸಾಬೀತುಪಡಿಸಲು ಮುಂದಾಗಿದ್ದ ಎರಡು ತಂಡಗಳ ಮೇಲೂ ಎಫ್ ಐ ಆರ್ ದಾಖಲಾಗಿದೆ. ರಿಯಾಲಿಟಿ ಚೆಕ್ ನೆಪದಲ್ಲಿ ಪರಶುರಾಮನ ಮೂರ್ತಿಗೆ ಬಿಜೆಪಿ ಕಾರ್ಯಕರ್ತರು ಸುತ್ತಿಗೆಯಿಂದ ಬಡಿದಿದ್ದಾರೆ. ಇದು ಅಸಲಿ ಕಂಚಿನ ಪ್ರತಿಮೆ ಎಂದು ಸಾಬೀತು ಪಡಿಸಲು ಬಿಜೆಪಿ ಕಾರ್ಯಕರ್ತರಿಂದ ನಡೆದಿದ್ದ ಸತ್ಯ ಶೋಧನೆಯಾಗಿತ್ತು. ಪ್ರತಿಮೆಯ ಕಾಲ ಬುಡದ ಹಲವು ಭಾಗಗಳಿಗೆ ಸುತ್ತಿಗೆಯಿಂದ ಬಡಿದು ರಿಯಾಲಿಟಿ ಚೆಕ್ ಮಾಡಿದ್ದಾರೆ. ಇದರಲ್ಲಿ ಸುಹಾಸ್‌, ಮಹಾವೀರ, ಸುಮಿತ್‌, ವಿಖ್ಯಾತ್‌, ಮುಸ್ತಾಫ‌, ರಾಕೇಶ್‌, ಸಮೃದ್ದಿ ಹಾಗೂ ಇತರರ ವಿರುದ್ಧ ಏಳು ಮಂದಿಯ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಸಾರ್ವಜನಿಕ ಆಸ್ತಿ ನಷ್ಟ ಹಾಗೂ ಧಾರ್ಮಿಕ ಭಾವನೆಗೆ ಧಕ್ಕೆ ಆಧಾರದಲ್ಲಿ ಸಮಾನ ಮನಸ್ಕರರ ಹೋರಾಟ ಸಮಿತಿ ಮುಖಂಡೆ ದಿವ್ಯಾ ನಾಯಕ್ ರಿಂದ IPC 1860(U/s 295,427,34)ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತ ಥೀಮ್ ಪಾರ್ಕ್ ಗೆ ಭೇಟಿ ನೀಡಿದ ಕಾಂಗ್ರೆಸ್ ಕಾರ್ಯಕರ್ತರ ಮೇಲೂ ಎಫ್ ಐ ಆರ್ ದಾಖಲಾಗಿದೆ. ಅಕ್ರಮ ಪ್ರವೇಶ ಹಾಗೂ ಪ್ರತಿಮೆಗೆ ಅಳವಡಿಸಿದ್ದ ಟಾರ್ಪಲ್ ಹರಿದ ವಿರುದ್ಧ ಸೇರಿದಂತೆ 14 ಜನ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಎಫ್ ಐ ಆರ್ ದಾಖಲಾಗಿದೆ.

ಸಮಾನ ಮನಸ್ಕರರ ಸಮಿತಿ ಮುಖಂಡೆ ದಿವ್ಯಾ ನಾಯಕ್ ರನ್ನೂ ಸೇರಿಸಿ ಎಫ್ ಐ ಆರ್ ದಾಖಲಿಸಲಾಗಿದೆ. ಅಕ್ರಮ ಪ್ರವೇಶಕ್ಕೆ ಸಂಬಂಧಿಸಿದ ಇನ್ನೊಂದು ಪ್ರಕರಣದಲ್ಲಿ ಶುಭದ ರಾವ್‌, ದೀಕ್ಷಿತ್‌, ದೀಪಕ್‌, ಸುಬಿತ್‌, ವಿವೇಕಾನಂದ, ಯೋಗೀಶ, ಸೂರಜ್‌, ಪ್ರದೀಪ್‌, ಅಲ್ಪಾಜ್‌, ಐವಾನ್‌, ದಿವ್ಯಾ, ಕೃಷ್ಣ, ಹರೀಶ್‌ ಹಾಗೂ ಇತರರ ವಿರುದ್ಧ ಬಿಜೆಪಿ ಕಾರ್ಯಕರ್ತ ಸುನೀಲ್ ಎಂಬುವವರ ದೂರಿನನ್ವಯ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

Ashitha S

Recent Posts

ರಿಚರ್ಡ್‌ ಹ್ಯಾನ್ಸೆನ್‌ಗೆ ಸೆಲ್ಕೋದ ಪ್ರತಿಷ್ಠಿತ ʼಸೂರ್ಯಮಿತ್ರʼ ಪ್ರಶಸ್ತಿ

ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮೀಣ ಪ್ರದೇಶಗಳಲ್ಲಿ ಸೌರವಿದ್ಯುತ್ ಸೌಲಭ್ಯವನ್ನು ಹೆಚ್ಚಿಸಲು, ಆಧುನಿಕ ಫೋಟೋ ವೋಲ್ಟಾಯಿಕ್‌ (ಪಿವಿ) ತಂತ್ರಜ್ಞಾನವನ್ನು ಮೈಕ್ರೋ ಫೈನಾನ್ಸ್ ಸಂ‍ಸ್ಥೆಗಳ…

31 mins ago

ಜಿಯೋ ಬಂಪರ್‌ ಆಫರ್‌ : 15 ಒಟಿಟಿ ಆ್ಯಪ್ಲಿಕೇಷನ್‌ ಜೊತೆ ಅನ್‌ಲಿಮಿಟೆಡ್ ಡೇಟಾ ಪ್ಲಾನ್

ಜಿಯೋ ಇದೀಗ ಮತ್ತೊಂದು ಹೊಚ್ಚ ಹೊಸ ಪ್ಲಾನ್ ಘೋಷಿಸಿದೆ. ನೆಟ್‌ಫ್ಲಿಕ್ಸ್‌ನ ಬೇಸಿಕ್ ಪ್ಲಾನ್, ಅಮೆಜಾನ್ ಪ್ರೈಮ್ ಸೇರಿದಂತೆ 15 ಒಟಿಟಿ…

53 mins ago

ಕಾರಿನಲ್ಲಿ ಆಕಸ್ಮಿಕ ಬೆಂಕಿ : ವ್ಯಕ್ತಿ ಸಜೀವ ದಹನ

ಕಾರಿಗೆ ಆಕಸ್ಮಿಕ ಬೆಂಕಿ ತಗುಲಿ, ಕಾರಿನಲ್ಲಿದ್ದ ವ್ಯಕ್ತಿ ಸಜೀವ ದಹನವಾದ ಘಟನೆ ಬಾಗಲಕೋಟೆ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ.ಕಾರಿನಲ್ಲಿದ್ದ ಸಂಗನಗೌಡ…

1 hour ago

ವಿಧಾನಪರಿಷತ್ ಚುನಾವಣೆ : ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಿಜೆಪಿ

ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. 6 ಕ್ಷೇತ್ರಗಳ…

2 hours ago

ಹಾಡಹಗಲೇ ಚಾಕುವಿನಿಂದ ಇರಿದು ಯುವಕನ ಭೀಕರ ಹತ್ಯೆ

ಚಾಕುವಿನಿಂದ ಇರಿದು ಹಾಡಹಗಲೇ ಯುವಕನ ಭೀಕರ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ‌ಮಣ್ಣೂರು ಗ್ರಾಮದಲ್ಲಿ ನಡೆದಿದೆ. ಪ್ರೀತಿ…

2 hours ago

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಬಿತ್ತು ಧರ್ಮದೇಟು

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಸಾರ್ವಜನಿಕರೇ ಧರ್ಮದೇಟು ನೀಡಿದ ಘಟನೆ ಉಡುಪಿ ಸಿಟಿ ಬಸ್‌ ನಿಲ್ದಾಣದಲ್ಲಿ ಇಂದು ಸಂಭವಿಸಿದೆ

2 hours ago