News Karnataka Kannada
Thursday, May 02 2024
ಕರಾವಳಿ

ಹಫ್ತಾ ಹಣ ನೀಡದ್ದಕ್ಕೆ ವ್ಯಕ್ತಿಯೋರ್ವನ ಕೊಲೆ

Photo Credit :

ಹಫ್ತಾ ಹಣ ನೀಡದ್ದಕ್ಕೆ ವ್ಯಕ್ತಿಯೋರ್ವನ ಕೊಲೆ

ಕಾಸರಗೋಡು: ಹಫ್ತಾ ಹಣ ನೀಡಿಲ್ಲ ಎಂಬ ಕಾರಣಕ್ಕೆ ಶನಿವಾರ ರಾತ್ರಿ ಕೊಲೆಗೀಡಾದ ಕರ್ನಾಟಕ ಕೊಪ್ಪಳದ ಶರಣಪ್ಪ (34) ರವರ ಮೃತದೇಹ ಜಿಲ್ಲಾಧಿಕಾರಿ, ಜನಮೈತ್ರಿ ಪೊಲೀಸ್ ಮತ್ತು ನಾಗರಿಕ ನೆರವಿನಿಂದ ಊರಿಗೆ ಕೊಂಡೊಯ್ಯಲಾಯಿತು.

ಕೂಲಿ ಕಾರ್ಮಿಕನಾಗಿದ್ದ ಶರಣಪ್ಪರ ಮೃತದೇಹವನ್ನು 700ಕಿ.ಮೀ ದೂರದ ಕೊಪ್ಪಳಕ್ಕೆ ತಲುಪಿಸಲು ಸಂಬಂಧಿಕರು ಮತ್ತು ಸ್ನೇಹಿತರ ಬಳಿ ಹಣ ಇಲ್ಲದೆ ಪರದಾಡುತ್ತಿದ್ದರು. ಕೊನೆಗೆ ಅಂಬ್ಯುಲೆನ್ಸ್ ಹಾಗೂ ಇತರ ನೆರವನ್ನು ನೀಡುವ ಮೂಲಕ ಮಾನವೀಯತೆ ಮೆರೆದರು. ಕಾಸರಗೋಡು ಸುತ್ತಮುತ್ತ ಕೂಲಿ ಕೆಲಸ ಮಾಡಿ ದುಡಿಯುತ್ತಿದ್ದ ಶರಣಪ್ಪ ಹಾಗೂ ಸ್ನೇಹಿತರು ನಗರ ಹೊರವಲಯದ ನುಳ್ಳಿಪ್ಪಾಡಿಯ ಅಂಗಡಿ ಜಗಲಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಹಫ್ತಾ ಹಣ ನೀಡಿಲ್ಲ ಎಂದು ನುಳ್ಳಿಪ್ಪಾಡಿ ಚೆನ್ನಿಕೆರೆಯ ಕ್ರಿಮಿನಲ್ ಮಣಿ ಎಂಬಾತ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದನು.

ಎದೆ, ಹೊಟ್ಟೆಗೆ ತೀವ್ರ ಸ್ವರೂಪದ ಗಾಯಗೊಂಡಿದ್ದ ಶರಣಪ್ಪರನ್ನು ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು. ಮೃತದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಬಳಿಕ ಮೃತದೇಹವನ್ನು ಕಾಸರಗೋಡಿಗೆ ತರಲಾಯಿತು. ಆದರೆ ಅಂಬ್ಯುಲೆನ್ಸ್ ವೆಚ್ಚ ದುಬಾರಿ ಯಾದುದರಿಂದ ಅತ್ತ ತೆರಳುವ ಯಾವುದಾದರೂ ವಾಹನ ಲಭಿಸಬಹುದೇ ಎಂಬ ಬಗ್ಗೆ ಸಂಬಂಧಿಕರು ವಿಚಾರಿಸುತ್ತಿದ್ದರು.

ಇದನ್ನು ಗಮನಿಸಿದ ಸ್ಥಳೀಯರು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದರು. ಕೊನೆಗೆ ಜಿಲ್ಲಾಧಿಕಾರಿ ಜೀವನ್ ಬಾಬು, ಕಾಸರಗೋಡು ಜನಮೈತ್ರಿ ಪೊಲೀಸರು ಹಾಗೂ ನಾಗರಿಕರು ಮಾತುಕತೆ ನಡೆಸಿ ಅಂಬ್ಯುಲೆನ್ಸ್ ಹಾಗೂ ಅಗತ್ಯ ನೆರವನ್ನು ನೀಡಿದರು. ಕೊನೆಗೂ ನಿಟ್ಟುಸಿರುಬಿಟ್ಟ ಸಂಬಂಧಿಕರು, ಸ್ನೇಹಿತರು ಮೃತದೇಹ ಸಹಿತ ಊರಿಗೆ ಮರಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು