Categories: ಕರಾವಳಿ

ಸುಳ್ಯ ಕ್ಷೇತ್ರದ 9 ರಸ್ತೆಗಳ ಅಭಿವೃದ್ಧಿಗೆ 25 ಕೋಟಿ ಅನುದಾನಕ್ಕೆ ಶಾಸಕರ ಮನವಿ

ಸುಳ್ಯ: ಸುಳ್ಯ ಮತ್ತು ಕಡಬ ತಾಲೂಕು ಒಳಗೊಂಡ ಸುಳ್ಯ ವಿಧಾನಸಭಾ ಕ್ಷೇತ್ರದ ಒಂಭತ್ತು ರಸ್ತೆಗಳ ಅಭಿವೃದ್ಧಿಗೆ 25 ಕೋಟಿ ರೂ ಬಿಡುಗಡೆ ಮಾಡುವಂತೆ  ಶಾಸಕ ಎಸ್.ಅಂಗಾರ ರಾಜ್ಯ ಉಪಮುಖ್ಯಮಂತ್ರಿ ಹಾಗು ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಮಲೆನಾಡು ತಾಲೂಕಾದ ಸುಳ್ಯದ ರಸ್ತೆಗಳು ಮಳೆಯಿಂದ ತೀವ್ರ ಹಾನಿಗೀಡಾಗಿದ್ದು ವಾಹನ ಹಾಗೂ ಜನ ಸಂಚಾರಕ್ಕೆ ಅನಾನುಕೂಲ ಆಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಸುಳ್ಯ ತಾಲೂಕಿನ ಎಲಿಮಲೆ – ಅರಂತೋಡು ರಸ್ತೆಗೆ 5 ಕೋಟಿ, ಪುದ್ದೊಟ್ಟು – ಬೆಳ್ಳಾರೆ ರಸ್ತೆಗೆ ಒಂದು ಕೋಟಿ, ಬೈತಡ್ಕ -ಮಂಡೆಕೋಲು ರಸ್ತೆಗೆ ಎರಡು ಕೋಟಿ, ಗುತ್ತಿಗಾರು – ಕಮಿಲ- ಬಳ್ಪ ರಸ್ತೆಗೆ 3 ಕೋಟಿ, ಸುಳ್ಯ – ಆಲೆಟ್ಟಿ – ಬಡ್ಡಡ್ಕ – ಕೂರ್ನಡ್ಕ ರಸ್ತೆಗೆ 3 ಕೋಟಿ, ಬೊಬ್ಬೆಕೇರಿ – ಅಯ್ಯನಕಟ್ಟೆ ರಸ್ತೆಗೆ 3 ಕೋಟಿ,  ಮಲಯಾಳ – ಹರಿಹರ – ಕೊಲ್ಲಮೊಗ್ರು – ಕಲ್ಮಕಾರು ರಸ್ತೆಗೆ ಒಂದು ಕೋಟಿ,  ಕಡಬ ತಾಲೂಕಿನ ಪುದ್ದೊಟ್ಟು-ಬೆಳ್ಳಾರೆ ರಸ್ತೆ ಅಭಿವೃದ್ಧಿಗೆ 4 ಕೋಟಿ, ಪೆರಾಬೆ ಗ್ರಾಮದ ಪೆರಾಬೆ – ಬೀರಂತ್ತಡ್ಕ-ಮುರಚಡಾವು  ರಸ್ತೆ ಅಭಿವೃದ್ದಿಗೆ 3 ಕೋಟಿ ಸೇರಿ  ಹೀಗೆ ಒಟ್ಟು 25 ಕೋಟಿ ಅನುದಾನ ನೀಡುವಂತೆ ಮನವಿ ಸಲ್ಲಿಸಲಾಗಿದೆ. ಸುಳ್ಯ ಕ್ಷೇತ್ರದ 12 ರಸ್ತೆಗಳನ್ನು  ಜಿಲ್ಲಾ ಮುಖ್ಯ ರಸ್ತೆಯಾಗಿ ಇತ್ತೀಚೆಗೆ ಮೇಲ್ದರ್ಜೆಗೇರಿಸಲಾಗಿದ್ದು ಈ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ದೃಷ್ಠಿಯಿಂದ ಅನುದಾನಕ್ಕೆ ಬೇಡಿಕೆ ಸಲ್ಲಸಲಾಗಿದೆ. ಅನುದಾನ ಬಿಡುಗಡೆ ಆಗುವ ನಿರೀಕ್ಷೆ ಇದೆ ಎಂದು ಶಾಸಕ ಅಂಗಾರ ತಿಳಿಸಿದ್ದಾರೆ.

Desk

Recent Posts

ಕೆನಡಾದಲ್ಲಿ ಏನೆಲ್ಲ ನಡೆಯುತ್ತಿದೆಯೋ ಅದ್ಕಕೆ ಅಲ್ಲಿನ ಆಂತರಿಕ ರಾಜಕೀಯ ಕಾರಣ: ಎಸ್ ಜೈಶಂಕರ್

ಖಲಿಸ್ತಾನಿ  ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ವಿಷಯವಾಗಿ ಕೆನಡಾದಲ್ಲಿ ಏನೆಲ್ಲ ನಡೆಯುತ್ತಿದ್ದರೂ ಅಲ್ಲಿನ ಆಂತರಿಕ ರಾಜಕೀಯವೇ ಕಾರಣವಾಗಿದ್ದು, ಅದಕ್ಕೂ ಭಾರತಕ್ಕೂ…

3 mins ago

ಕಾಪು ಪಿಲಿಕೋಲ ಸಂಪನ್ನ: ಓರ್ವನನ್ನು ಸ್ಪರ್ಶಿಸಿದ ಪಿಲಿ

ಇತಿಹಾಸ ಪ್ರಸಿದ್ಧ ಕಾಪು ಶ್ರೀ ಬ್ರಹ್ಮ ಮುಗ್ಗೇರ್ಕಳ ಪಿಲಿಚಂಡಿ ದೈವಸ್ಥಾನದಲ್ಲಿ ದ್ವೈ ವಾರ್ಷಿಕವಾಗಿ ನಡೆಯುವ ಪಿಲಿ ಕೋಲವು ವಿಶೇಷ ಜನಾಕರ್ಷಣೆಯೊಂದಿಗೆ…

20 mins ago

ಬಿಜೆಪಿಯ ʼಮೊಟ್ಟೆʼ ವಿಡಿಯೋ ವಿರುದ್ಧ ಕಾಂಗ್ರೆಸ್‌ ಕಿಡಿ

ಚುನಾವಣೆ ಎಲ್ಲೆಡೆ ರಂಗೇರಿದೆ. ಒಂದೆಡೆ ನಾಯಕರ ವಾಗ್ದಾಳಿ ಇನ್ನೊಂದೆಡೆ ಪಕ್ಷಗಳ ನಡುವೆ ಬೇರೆ ಬೇರೆ ರೀತಿಯಲ್ಲಿ ವಾಗ್ಧಾಳಿ ನಡೆಯುತ್ತಲೇ ಇದೆ.…

22 mins ago

ಮೋದಿ ಪ್ರಧಾನಿಯಾದ ಮೇಲೆ ದೇಶ ಜಗತ್ತಿನ ಎದುರು ತಲೆ ಎತ್ತಿ ನಿಂತಿದೆ

ದಾವಣಗೆರೆಯಲ್ಲಿ ಬಿಜೆಪಿ  ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಪರ ರೋಡ್ ಶೋ ನಡೆಸಿದ ಮಾಜಿ ಸಚಿವ ಸಿ.ಟಿ ರವಿ, ಮೋದಿ ಪ್ರಧಾನಿಯಾದ…

31 mins ago

ಸಮಗಾರ ಸಮಾಜವು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ಸಮಾಜದ ಮುಖಂಡರ ಮನವಿ

೨೦೨೪ರ ಲೋಕಸಭಾ ಚುನಾವಣೆಯಲ್ಲಿ ಸಮಗಾರ ಸಮಾಜವು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ರಾಜು ಆಲಗೂರರವರಿಗೆ ಮತ ಚಲಾಯಿಸಬೇಕೆಂದು ಜಿಲ್ಲೆಯ ಸಮಗಾರ…

40 mins ago

ಇನ್ನು ಕೆಲವೇ ಕ್ಷಣದಲ್ಲಿ ಹೆಚ್‌ಡಿ ರೇವಣ್ಣ ಜಡ್ಜ್ ಮುಂದೆ ಹಾಜರು

ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ವಶದಲ್ಲಿರುವ ಮಾಜಿ ಸಚಿವ ಹೆಚ್. ಡಿ. ರೇವಣ್ಣ ಅವರನ್ನು ಕೆಲವೇ ಹೊತ್ತಿನಲ್ಲೇ…

45 mins ago