News Karnataka Kannada
Monday, May 06 2024
ಕರಾವಳಿ

ವ್ಯಸನವು ಹತ್ತಿರ ಬರದಂತೆ ಧಿಕ್ಕರಿಸಿ: ತಿಮ್ಮಯ್ಯ ನಾಯ್ಕ

Photo Credit :

ವ್ಯಸನವು ಹತ್ತಿರ ಬರದಂತೆ ಧಿಕ್ಕರಿಸಿ: ತಿಮ್ಮಯ್ಯ ನಾಯ್ಕ

ಉಜಿರೆ: ವ್ಯಸನವು ನಮ್ಮ ದೇಹದ ಹತ್ತಿರ ಬಾರದಂತೆ ಅದ್ದನ್ನು ಧಿಕ್ಕರಿಸುವ ವಿದ್ಯಾರ್ಥಿಗಳಾಗಿ, ಅದರ ಆಕರ್ಷಣೆಯನ್ನು ದೂರ ಮಾಡುವಂತಹ ಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಅಲ್ಲದೆ ಇದರ ಕುರಿತು ಜಾಗೃತಿಯನ್ನು ಮೂಡಿಸುವ ಮಾನೋಭಾವ ನಮ್ಮಲ್ಲಿರಬೇಕು ಎಂದು ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ತಿಮ್ಮಯ್ಯ ನಾಯ್ಕ ಹೇಳಿದರು.

ಇವರು ಉಜಿರೆಯ ಶ್ರೀ ಸಿದ್ದವನ ಗುರುಕುಲದಲ್ಲಿ ಕರ್ನಾಟಕ ಜನಜಾಗೃತಿ ವೇದಿಕೆ ಮತ್ತು ಶ್ರೀ ಧ.ಮ.ಪದವಿ ಕಾಲೇಜಿನ ರಾಷ್ಟೀಯ ಸೇವಾ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ವ್ಯಸನ ಮುಕ್ತ ಸಮಾಜ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಮಾತನಾಡಿದರು.

ಆರೋಗ್ಯವಂತ ದೇಹವು ಆತ್ಮದ ಅರಮನೆ ಇದ್ದಂತೆ. ಇದನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಹೊಣೆ, ಬೆಳೆಯುತ್ತಿರುವ ತಂತ್ರಜ್ಞಾನವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿ ಕೊಂಡು ಉತ್ತಮ ಭವಿಷ್ಯ ರೂಪಿಸಿ ಕೊಳ್ಳಬೇಕು. ಆದರೆ ವಿದ್ಯಾರ್ಥಿಗಳು ಇದರಿಂದ ದುಷ್ಚಟಗಳನ್ನು ಆಹ್ವಾನಿಸುತಿದ್ದಾರೆ. ಇದು ಒಳ್ಳೆಯ ಬೆಳವಣಿಗಳಲ್ಲ ಎಂದು ಅಭಿಪ್ರಾಯ ಪಟ್ಟರು ಹಾಗೂ ಮಾದಕ ವ್ಯಸನದಿಂದಾಗುವ ದುಷ್ಪರಿಣಾಮಗಳ ಕುರಿತು “ನಶೆಯೆಂಬ ನರಕ” ಕಿರುಚಿತ್ರ ತೋರಿಸುವುದರ ಮೂಲಕ ಅರಿವು ಮೂಡಿಸಿದರು.

ಶ್ರೀ ಸಿದ್ದವನ ಗುರುಕುಲದ ಮುಖ್ಯ ಪಾಲಕರಾದ ವಿದ್ವಾನ್ ಮಹಾಬಲೇಶ್ವರ ಭಟ್, ಶ್ರೀ ಧ.ಮ ಪದವಿ ಕಾಲೇಜಿನ ರಾಷ್ಟೀಯ ಸೇವಾ ಯೋಜನಾಧಿಕಾರಿ ಗಣೇಶ್ ಶೆಂಡ್ಯೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿ ಶಶಾಂಕ ಎಚ್ ವಿ ಸ್ವಾಗತಿಸಿ, ಸುದೀಪ್ ರಾಜ್ ವಂದಿಸಿದರು, ನವೀನ್ ಭಟ್ ಕಾರ್ಯಕ್ರಮ ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು